Don't Miss!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಿಸರವಾದಿಯಾಗಿ ಕಿರುತೆರೆಗೆ ಅನಂತ್ ನಾಗ್ ಹೆಜ್ಜೆ
ಈಟಿವಿ ಕನ್ನಡ ವಾಹಿನಿ ಪ್ರಸಾರ ಮಾಡಲಿರುವ ನೂತನ ಧಾರಾವಾಹಿ 'ಚಿಟ್ಟೆ ಹೆಜ್ಜೆ'ಯಲ್ಲಿ ಅವರು ಅಭಿನಯಿಸಿದ್ದಾರೆ. ಈ ಧಾರಾವಾಹಿ ಸೆಪ್ಟೆಂಬರ್ 23ರಿಂದ ಪ್ರಸಾರವಾಗಲಿದೆ. ಖ್ಯಾತ ಪತ್ರಕರ್ತ, ಲೇಖಕ ಗಿರೀಶ್ ರಾವ್ (ಜೋಗಿ) ಅವರ ಕಾದಂಬರಿ 'ಚಿಟ್ಟೆ ಹೆಜ್ಜೆ ದಾರಿ' ಆಧಾರವಾಗಿ ಧಾರಾವಾಹಿ ಕಥೆಯನ್ನು ಹೆಣೆಯಲಾಗಿದೆ.
ವಿನು ಬಳಂಜ ಅವರ ನಿರ್ದೇಶನ ಹಾಗೂ ಚಿತ್ರಕಥೆ ಈ ಧಾರಾವಾಹಿಗಿದೆ. ಈ ಹಿಂದೆ 'ಪ್ರೀತಿ ಇಲ್ಲದೆ ಮೇಲೆ' ಧಾರಾವಾಹಿಯನ್ನೂ ವಿನು ಬಳಂಜ ನಿರ್ದೇಶಿಸಿದ್ದರು. ಈಗ 'ಚಿಟ್ಟೆ ಹೆಜ್ಜೆ' ಮೂಲಕ ಮತ್ತೆ ಈ ಅನುರೂಪ ಜೋಡಿ ಒಂದಾಗಿದೆ.
ಈಟಿವಿ ಕನ್ನಡದಲ್ಲಿ ಈಗ ರಾತ್ರಿ 9 ಗಂಟೆ ಪ್ರಸಾರವಾಗುತ್ತಿರುವ 'ಶುಭ ಮಂಗಳ' ಧಾರಾವಾಹಿ ಸ್ಲಾಟ್ ನಲ್ಲಿ 'ಚಿಟ್ಟೆ ಹೆಜ್ಜೆ' ಮೂಡಿಬರಲಿದೆ. "ನೀಲಿ ಹೂವು ಖಾಲಿ ಹೃದಯ, ಕಾಡು ಹುಡುಗಿ ಮೋಡ ಗೆಳೆಯ, ಚಿಗುರು ಪಾದ ಹಗುರ ಹೆಜ್ಜೆ, ಬೆಟ್ಟ ಬಯಲು ಕವಲುದಾರಿ, ಒಡಲ ಒಳಗೆ ಚಿಟ್ಟೆ ಹೆಜ್ಜೆ..." ಎಂದು ಸಾಗುವ ಶೀರ್ಷಿಕೆಗೀತೆ ಯೂಟ್ಯೂಬ್ ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ನಟ ಅನಂತ್ ನಾಗ್. ಶಂಕರ್ ನಾಗ್ ನಿರ್ದೇಶಿಸಿ, ನಟಿಸಿದ್ದ 'ಮಾಲ್ಗುಡಿ ಡೇಸ್' ಮೂಲಕ ಆರಂಭವಾದ ಅವರ ಕಿರುತೆರೆ ಪಯಣ ಈಗ 'ಚಿಟ್ಟೆ ಹೆಜ್ಜೆ'ವರೆಗೂ ಸಾಗಿಬಂದಿದೆ. ಪ್ರಕಾಶ್ ಬೆಳವಾಡಿ ಅವರ 'ಗರ್ವ' ಧಾರಾವಾಹಿಯಲ್ಲಿ ಅವರ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
'ಪ್ರೀತಿ ಇಲ್ಲದೆ ಮೇಲೆ' ಧಾರಾವಾಹಿಯಲ್ಲಿ ಅನಂತ್ ಅವರು ಲೋಕಾಯುಕ್ತ ಅಧಿಕಾರಿ. ಈಗ 'ಚಿಟ್ಟೆ ಹೆಜ್ಜೆ'ಯಲ್ಲಿ ಪರಿಸರವಾದಿ. ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣವಾದ ಪಶ್ಚಿಮ ಘಟ್ಟ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ ಬಗ್ಗೆ ಈ ಧಾರಾವಾಹಿ ಬೆಳಕು ಚೆಲ್ಲುತ್ತದೆ.
ಧಾರಾವಾಹಿಯ ಬಹುತೇಕ ಭಾಗವನ್ನು ಸಕಲೇಶಪುರ ತಾಲೂಕಿನ ಗುಂಡ್ಯಾದಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರು, ಹಾಸನದ ರಮಣೀಯ ತಾಣಗಳಲ್ಲೂ ಸೆರೆಹಿಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಿನು ಬಳಂಜ. (ಒನ್ಇಂಡಿಯಾ ಕನ್ನಡ)