Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಕ್ಷ್ಮಿ ಚಿತ್ರ ವಿಮರ್ಶೆ: ಸಸ್ಪೆನ್ಸ್ ಪ್ರಿಯರಿಗೆ ಥ್ರಿಲ್ಲಿಂಗ್ ಚಿತ್ರ
ಲಕ್ಷ್ಮಿ ಚಿತ್ರದ ಕಥಾವಸ್ತು ತುಂಬಾ ವಿಸ್ತಾರವಾಗಿದೆ. ಚಿತ್ರದ ಕ್ಯಾಪ್ಟನ್ ರಾಘವ ಲೋಕಿ ಅವರು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ತಮ್ಮ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ.
ಒಂದು ಕಡೆ ಭಯೋತ್ಪಾದನೆ ಇನ್ನೊಂದು ಕಡೆ ಮೈನಿಂಗ್ ಮಾಫಿಯಾ. ಇವೆರಡೂ ಕರಾಳ ಮುಖಗಳನ್ನು ತೋರಿಸುವಲ್ಲಿ ಅಲ್ಲಲ್ಲಿ ಅವರ ಹಿಡಿತ ತಪ್ಪಿದೆ. ಈ ಅಂಶ ಪ್ರೇಕ್ಷಕರ ಗಮನಕ್ಕೆ ಬಾರದೆ ಇರದು. ಬಹುಶಃ ಲೋಕಿ ಎಡವಿರುವುದು ಇಲ್ಲೇ.
ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಳ್ಳುವ ಸಸ್ಪೆನ್ಸ್
ಚಿತ್ರದ ಒಟ್ಟಾರೆ ಆಶಯಕ್ಕೆ ಸಂಪೂರ್ಣ ನ್ಯಾಯ ಒದಗಿಸುವಲ್ಲಿ ಅವರು ಸೋತಿದ್ದಾರೆ. ಆದರೆ ಚಿತ್ರದ ಸಸ್ಪೆನ್ಸ್ ಎಳೆಯನ್ನು ಕೊನೆಯ ತನಕ ಉಳಿಸಿಕೊಂಡು ಹೋಗಿ ಪ್ರೇಕ್ಷಕರನ್ನು ಸೀಟಿಗೆ ಅಂಟಿಕೊಳ್ಳುವಂತೆ ಮಾಡಿದೆ. ಇದೇ ಲಕ್ಷ್ಮಿ ಚಿತ್ರದ ಗಮನಾರ್ಹ ಅಂಶ.
ಖಡಕ್ ಸಿಬಿಐ ಅಧಿಕಾರಿಯಾಗಿ ಶಿವಣ್ಣ
ಸಿಬಿಐ ಅಧಿಕಾರಿ ಲಕ್ಷ್ಮಿನಾರಾಯಣ ಪಾತ್ರದಲ್ಲಿ ತಾವೊಬ್ಬ ಮಾಗಿದ ನಟ ಎಂಬುದನ್ನು ಶಿವಣ್ಣ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರಿಯಾಮಣಿ ಅವರು ಅಷ್ಟೇ ಸೊಗಸಾದ ಅಭಿನಯ ನೀಡಿದ್ದಾರೆ. ಅಭಿನಯಲ್ಲಿ ಅವರು ಶಿವಣ್ಣನಿಗೆ ಸರಿಸಾಟಿಯಾಗಿ ನಿಂತಿದ್ದಾರೆ.
ಇಷ್ಟಕ್ಕೂ ಲಕ್ಷ್ಮಿ ಚಿತ್ರದ ಕಥೆ ಏನು?
ಮೈನಿಂಗ್ ಮಾಫಿಯಾ, ಭಯೋತ್ಪಾದಕ ಶಕ್ತಿಗಳನ್ನು ಹತ್ತಿಕ್ಕುವುದೇ ಚಿತ್ರದ ನಾಯಕನ ಉದ್ದೇಶ. ಇದಕ್ಕಾಗಿ ಆತ ಅವರೊಂದಿಗೆ ಭರ್ಜರಿ ಫೈಟ್ ಗಳನ್ನು ಮಾಡುತ್ತಾನೆ. ಕಾಣೆಯಾದ ತನ್ನ ಪತ್ನಿ ಪ್ರಿಯಾಳಿಗಾಗಿ (ಪ್ರಿಯಾಮಣಿ) ಹುಡುಕುತ್ತಾನೆ. ಹಾಂಕಾಂಗ್ ಸುತ್ತುತ್ತಾನೆ. ಕಡೆಗೆ ಲಕ್ಷ್ಮಿ ಕೈಗೆ ಪ್ರಿಯಾ ಸಿಗುತ್ತಾಳಾ?
ಇಷ್ಟು ದಿನ ಅವಳೇನಾಗಿರುತ್ತಾಳೆ? ಎಲ್ಲಿರುತ್ತಾಳೆ? ಅವಳು ಉಗ್ರರ ಜೊತೆ ಕೈಜೋಡಿಸಿರುತ್ತಾಳಾ? ಎಂಬ ಸಸ್ಪೆನ್ಸ್ ಗೊತ್ತಾಗಬೇಕಾದರೆ ಒಮ್ಮೆ ಚಿತ್ರವನ್ನು ನೋಡಬೇಕು.
ವಿಭಿನ್ನ ಗೆಟಪ್ ನಲ್ಲಿ ಗಮನಸೆಳೆಯುವ ಅವಿನಾಶ್
ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇದೆ. ಅವರಲ್ಲಿ ಪ್ರಮುಖವಾದದ್ದು ಅವಿನಾಶ್ ಅವರ ಪಾತ್ರ. ಅವರದು ಸಿಬಿಐ ಅಧಿಕಾರಿ ಪಾತ್ರ. ಚಿತ್ರದಲ್ಲಿ ಅವರ ಪಾತ್ರ ಬರುವುದು ಕೆಲವೇ ಕೆಲವು ಸನ್ನಿವೇಶಗಳಲ್ಲಾದರೂ ತಮ್ಮ ವಿಭಿನ್ನ ಗೆಟಪ್ ಮೂಲಕ ಗಮನಸೆಳೆಯುತ್ತಾರೆ.
ಪೋಷಕ ಪಾತ್ರಗಳ ಅಭಿನಯ ಹೇಗಿದೆ
ಡೀಲ್ ರಾಜ ಪಾತ್ರದಲ್ಲಿ ರಂಗಾಯಣ ರಘು ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಭೂಗತ ಸಾಮ್ರಾಜ್ಯದ ಅಧಿಪತಿಯಾಗಿ ಆಶಿಶ್ ವಿದ್ಯಾರ್ಥಿ ಲೀಲಾಜಾಲ ಅಭಿನಯ. ರವಿ ಕಾಳೆ, ಚಿ.ಗುರುದತ್, ಯತಿರಾಜ್, ಜಿಮ್ ರವಿ ಪಾತ್ರಗಳು ಸಾಂದರ್ಭಿಕವಾಗಿ ಮೂಡಿಬಂದಿವೆ.
ಪಡ್ಡೆಗಳಿಗೂ ಬೋರು ಹೊಡೆಸಿದ ಐಟಂ ಗರ್ಲ್
ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ ನೀನೇನೆ ನೀನೇನೆ, ಕಮ್ ಕಮ್, ಲಕ್ಷ್ಮಿ ನೋ ಒನ್ ಕೆನ್ ಟಚ್ ಮಿ ಹಾಡುಗಳ ಚಿತ್ರೀಕರಣ ಹಾಗೂ ಕೊರಿಯೋಗ್ರಫಿ ಚೆನ್ನಾಗಿದೆ. ಆದರೆ ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಐಟಂ ಹಾಡಿಗೆ ಅಷ್ಟೇ ಕೆಟ್ಟದಾಗಿ ಶಾಲಿನಿ ನಾಯ್ಡು ಹೆಜ್ಜೆ ಹಾಕಿ ಪಡ್ಡೆಗಳಿಗೂ ಬೋರು ಹೊಡೆಸಿದ್ದಾರೆ.
ಚಿತ್ರದ ಗ್ರಾಫಿಕ್ಸ್ ನಲ್ಲಿ ಅಸಾಧಾರಣ ಏನೂ ಇಲ್ಲ
ಚಿತ್ರದಲ್ಲಿ ಬಳಸಿಕೊಂಡಿರುವ ಕಂಪ್ಯೂಟರ್ ಗ್ರಾಫಿಕ್ಸ್ ಕೆಲವೊಂದು ಕಡೆ ಅದ್ಭುತ, ಕೆಲವು ಕಡೆ ಸಾಧಾರಣ. ಆದರೆ ಎಲ್ಲೂ ಅಸಾಧಾರಣ ಎನ್ನುವಂತಿಲ್ಲ. ಮದುವೆಯಾದವರ ಎದೆ ನೋಡಬೇಕಾದರೆ ಎದೆಹಾಲು ಕುಡಿಸಿದ ತಾಯಿ, ಹೊಕ್ಕಳು ನೋಡಬೇಕಾದರೆ ತಾಯಿಯ ಮಡಿಲು ನೆನಪಾಗಬೇಕು ಎಂಬ ಡೈಲಾಗ್ಸ್ ಗಮನಸೆಳೆಯುತ್ತವೆ.