Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೀಮಾತೀರದಲ್ಲಿ ಸಚಿವ ರೇಣುಕಾಚಾರ್ಯ ಮಾಡಿದ್ದೇನು?
ಬಿಜೆಪಿ ಆಗುಹೋಗುಗಳ ಬಗ್ಗೆ ಆವೇಶಭರಿತ ಹೇಳಿಕೆ ನೀಡಿ ತಮ್ಮವರಿಂದಲೇ ಮುಜುಗರಕ್ಕೆ ಒಳಗಾಗುವುದು ಅವರಿಗೆ ಹ್ಯಾಬಿಟ್. ಅದೇನೇ ಇರಲಿ, ನಮ್ಮ ಅಬಕಾರಿ ಸಚಿವರು 'ಭೀಮಾತೀರದಲ್ಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಚಿತ್ರದಲ್ಲಿ ಮೂರು ದೃಶ್ಯಗಳಲ್ಲಿ ಸಚಿವ ರೇಣುಕಾಚಾರ್ಯ ಕಾಣಿಸಿಕೊಳ್ಳುತ್ತಾರೆ. ಡಿಸಿಪಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಚಿವರ ನಟನೆ ಬಗ್ಗೆ ಹೇಳುವುದಾದರೆ ರಾಜಕೀಯದಲ್ಲಿ ಆಶ್ವಾಸನೆ ನೀಡುವುದೇ ಬೇರೆ ಚಿತ್ರರಂಗದಲ್ಲಿ ಬಣ್ಣ ಹಚ್ಚುವುದೇ ಬೇರೆ ಎನ್ನುವುದು ವೇದ್ಯವಾಗುತ್ತದೆ..
ಚಿತ್ರ ಗಂಭೀರವಾಗಿ ಸಾಗುತ್ತಿರ ಬೇಕಾದರೆ ಒಂದು ಸನ್ನಿವೇಶವಿದೆ. ಶರತ್ ಲೋಹಿತಾಶ್ವ ಅವರ ತಂದೆಯ (ತಂದೆಯಾಗಿ ಹಿರಿಯ ನಟ ಲೋಕನಾಥ್ ನಟಿಸಿದ್ದಾರೆ) ಅಸ್ಥಿ ವಿಸರ್ಜಿಸಿ ಬರುತ್ತಿರುವಾಗ ರೇಣುಕಾಚಾರ್ಯ ಅಲ್ಲಿ ಕಾಣಿಸಿಕೊಳ್ಳುತ್ತಾರೆ.
'ಇನ್ನೊಂದು ವಾರದಲ್ಲಿ ಚಂದಪ್ಪನನ್ನು ಅರೆಸ್ಟ್ ಮಾಡುತ್ತೇವೆ' ಎಂದು ರೇಣುಕಾಚಾರ್ಯ ಹೇಳುವ ಎನ್ನುವ ಸನ್ನಿವೇಶವಿದೆ. ಆ ಸನ್ನಿವೇಶಕ್ಕೆ ನಗುವುದೋ ಅಳುವುದೋ ಯಾವ ರೀತಿ ನಟಿಸಬೇಕೆಂದು ತಿಳಿಯದೆ ಸಚಿವ ರೇಣು ಅವರ ನಟನೆ ನೋಡಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಮಾತ್ರ ತುಂಬಿ ತುಳುಕುತ್ತಿದ್ದ ಜನಸ್ತೋಮ ಮುಸಿ ಮುಸಿ ನಗುತ್ತಿತ್ತು.
ಒಟ್ಟಿನಲ್ಲಿ ಸಚಿವರ ಈ ಚಿತ್ರದಲ್ಲಿನ ನಟನೆಯ ಬಗ್ಗೆ ಪ್ರೇಕ್ಷಕರು, ವಿಮರ್ಶಕರು ಮಾರ್ಕ್ಸ್ ನೀಡುವುದಾದರೆ 'you are not promoted' ಎನ್ನಬಹುದು. ಆದರೂ ಸಚಿವರದ್ದು ಇದು ಮೊದಲ ಪ್ರಯತ್ನ ಎಂದು ಎಲ್ಲಿಂದಲೋ ಒತ್ತಡ ಬಂದರೆ 'you are just pass' ಎಂದು ಹುರಿದುಂಬಿಸಿದರೆ ಮುಂದೆ ಒಂದು ದಿನ ಅವರು ನಮ್ಮ ಕನ್ನಡ ಚಿತ್ರರಂಗಕ್ಕೆ ಆಸ್ತಿಯಾದರೂ ಆಗಬಹುದು. ಹಹಾ.