Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿ ಜಯಂತಿಯಂದು 'ವಾಸ್ತುಪ್ರಕಾರ'ಕ್ಕೆ ಸ್ವಾತಂತ್ರ್ಯ
ಅಂದುಕೊಂಡಂತೆ ಯೋಗರಾಜ್ ಭಟ್ಟರ 'ವಾಸ್ತುಪ್ರಕಾರ' ಚಿತ್ರ ರೆಡಿಯಾಗುತ್ತಿದೆ. ಇನ್ನೇನಿದ್ದರೂ ವಾಸ್ತುಪ್ರಕಾರ ಚಿತ್ರವನ್ನು ಬಿಡುಗಡೆ ಮಾಡುವುದೊಂದು ಬಾಕಿ ಇದ್ದು, ಕೊನೆಯ ಹಂತದಲ್ಲಿ ಅಂತಹದ್ದೇನೂ ವಾಸ್ತುದೋಷಗಳು ಆಗದಿದ್ದರೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಸ್ವಿಟ್ಜರ್ ಲ್ಯಾಂಡ್ ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳನ್ನು ಬೆಂಗಳೂರು ಅರಮನೆಯಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಶೂಟಿಂಗ್ ಮುಗಿಯಲಿದೆ ಎನ್ನುತ್ತವೆ ಮೂಲಗಳು. ['ವಾಸ್ತುಪ್ರಕಾರ' ಬೇಸ್ತು ಬಿದ್ದು ಸುಸ್ತಾದ ಭಟ್ಟರು]
ಅಕ್ಷಯ ತದಿಗೆ ದಿನ ಸೆಟ್ಟೇರಿದ ಚಿತ್ರ ಇದೀಗ ಅಕ್ಟೋಬರ್ 2ರ ರಾಷ್ಟ್ರಪಿತ ಗಾಂಧೀಜಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ವಾಸ್ತುಪ್ರಕಾರ ಚಿತ್ರಕ್ಕೆ ಅಕ್ಟೋಬರ್ 2 ರಂದು ಸ್ವಾತಂತ್ಯ್ರ ಸಿಗುವುದು ಗ್ಯಾರಂಟಿಯಾಗಿದೆ.
ಈ ಬಾರಿ ಭಟ್ರ ಸಿನಿಮಾದಲ್ಲಿ ರಾಜಕೀಯವೂ ಮುಖ್ಯ ಸಬ್ಜೆಕ್ಟ್ ಆಗಿರುತ್ತಾ ಎಂಬುದನ್ನು ಕಾದುನೋಡಬೇಕು. ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಅಂದ್ರೆ ಭಟ್ರು ಸೀರಿಯಸ್ ಸಬ್ಜೆಕ್ಟ್ ಒಂದನ್ನ ಕಾಮಿಡಿಯಾಗಿ ತರ್ಬಹುದು ಎನ್ನುತ್ತಾರೆ ಸ್ಯಾಂಡಲ್ ವುಡ್ ವಾಸ್ತು ತಜ್ಞರು. (ಏಜೆನ್ಸೀಸ್)