Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಹೊಸ ಚಿತ್ರ 'ಬಂಗಾರದ ವಂಶ'
ವರನಟ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' (1972) ಚಿತ್ರ ಹಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಆ ಚಿತ್ರವನ್ನು ನೋಡಿದ ಅದೆಷ್ಟೋ ಅಭಿಮಾನಿಗಳು ನೇಗಿಲು ಹಿಡಿದರು. ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸಂಪ್ರದಾಯದ ಚಿತ್ರಗಳಿಗೆ ನಾಂದಿ ಹಾಡಿದ ಖ್ಯಾತಿ ಆ ಚಿತ್ರಕ್ಕೆ ಸಲ್ಲುತ್ತದೆ.
ಇದೀಗ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಂದು ಸಾರಿ ಕೇಳಿದ ಕೂಡಲೇ ಬಂಗಾರದ ಮನುಷ್ಯ ನೆನಪಾಗೋ ಸಿನಿಮಾ ಟೈಟಲ್ ಕೈಗೆತ್ತಿಕೊಂಡಿದ್ದಾರೆ. ಇದು ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ ತಂಗಿಯಾಗಿ ಜೋಡಿಯಾಗ್ತಿರೋ ಸಿನಿಮಾ. ಚಿತ್ರದ ಟೈಟಲ್ 'ಬಂಗಾರದ ವಂಶ'. [ಶಿವಣ್ಣನಿಗೆ ತಂಗಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಗಿಫ್ಟ್]
ಅಣ್ಣ ತಂಗಿ ಸೆಂಟಿಮೆಂಟ್ ಸಿನಿಮಾಗಳ ಸರದಾರ ಸಾಯಿಪ್ರಕಾಶ್ ಒಂದು ಅದ್ಭುತ ಕಥೆ ಹೆಣೆದಿದ್ದಾರೆ. ಹಿಂದಿನ ಕಥೆಗಳಿಗಿಂತ ಇದು ಸ್ವಲ್ಪ ಮಾಡರ್ನ್ ಕಥೆಯಾಗಿದ್ದು ಇಲ್ಲಿ ಶಿವಣ್ಣನನ್ನೂ ಒಬ್ಬ ಶ್ರೀಮಂತ ವ್ಯಕ್ತಿಯನ್ನಾಗಿ ತೋರಿಸ್ತಾರಂತೆ ಅನ್ನೋ ಗುಸು ಗುಸು ಗಾಂಧಿನಗರದಲ್ಲಿದೆ.
ಇನ್ನು ಶಿವಣ್ಣ-ರಾಧಿಕಾ ಜೋಡಿಯ ಅಣ್ಣ ತಂಗಿ ಸಿನಿಮಾ ಆಗಿರೋದ್ರಿಂದ ಅದನ್ನ ನೋಡೋದಕ್ಕೇನೇ ದೊಡ್ಡ ಫ್ಯಾಮಿಲಿ ಪ್ರೇಕ್ಷಕ ವರ್ಗವಿದೆ. ಆದರೆ ಸದ್ಯದ ಸುದ್ದಿ ಅಂದ್ರೆ ಫೆಬ್ರವರಿಯಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಚುನಾವಣೆಯ ಕಾರಣದಿಂದ ಮೂರು ತಿಂಗಳು ಮುಂದೆ ಹೋಗಿದೆ. (ಒನ್ಇಂಡಿಯಾ ಕನ್ನಡ)