Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನಗೇನು ಆಗಿಲ್ಲ, ಕಲ್ಲು ಗುಂಡಿನಂತಿದ್ದೇನೆ: ಅಂಬಿ
ರೆಬೆಲ್ ಸ್ಟಾರ್, ಮಂಡ್ಯದ ಗಂಡು, ವಸತಿ ಸಚಿವ ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಿಂದ ಮಂಗಳವಾರ (ಮೇ.6) ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. ತಪಾಸಣೆಗಾಗಿ ಅವರು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲವೂ ನಾರ್ಮಲ್ ಇದೆ ಎಂದು ತಿಳಿಸಿದ್ದಾರೆ.
ಅಲ್ಲಿಂದ ಬಿಡುಗಡೆಯಾದ ಮೇಲೆ ಅಂಬರೀಶ್ ಸುದ್ದಿಗಾರರ ಜೊತೆ ಮಾತನಾಡುತ್ತಾ, "ನನಗೇನು ಆಗಿಲ್ಲ್ಲ, ಕಲ್ಲು ಗುಂಡಿನಂತಿದ್ದೇನೆ. ಸುಮ್ಮನೆ ವದಂತಿ ಹಬ್ಬಿಸಿ ಜನರಲ್ಲಿ ಆತಂಕ ಮೂಡಿಸಬೇಡಿ" ಎಂದು ವಿನಂತಿಸಿಕೊಂಡರು. [ಹದಿನೇಳು ಕೆ.ಜಿ ತೂಕ ಇಳಿಸಿಕೊಂಡ ಅಂಬರೀಶ್]
ಅಂಬರೀಶ್ ಗೆ ಮತ್ತೆ ಏನೋ ಆಗಿದೆಯಂತೆ ಎನ್ನುವುದು. ಜನ ಇಲ್ಲಿಗೆ ಬರುವುದು, ಟ್ರಾಪಿಕ್ ಜಾಮ್ ಆಗುವುದು. ಅವನ್ಯಾರೋ ಅಂಬರೀಶ್ ಅಂತೆ ಇಲ್ಲಿಗೆ ಬಂದಿದ್ದಾನಂತೆ ಎಂದು ಜನ ಬೈದುಕೊಳ್ಳುವುದು ಬೇಡ ಎಂದು ಅಂಬಿ ಸೂಕ್ಷ್ಮವಾಗಿ ಪರಿಸ್ಥಿತಿ ಬಗ್ಗೆ ತಿಳಿಸಿದರು.
ಊಟಿಯಿಂದ ಅವರು ಹಿಂತಿರುಗುತ್ತಾ ಮೈಸೂರಿನಲ್ಲಿರುವ ವಿಕ್ರಮ್ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದರು ಅಂಬಿ. ಬಳಿದ ಅಲ್ಲಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅಂಬಿ ಮತ್ತೆ ಅಸ್ವಸ್ಥರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದರು.
ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ್ ಅವರು ಮಾತನಾಡುತ್ತಾ, "ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಂಬಿ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ. ಯಾರೂ ಗಾಬರಿಪಡುವಂತಹ ಅವಶ್ಯಕತೆ ಇಲ್ಲ. ಅವರನ್ನು ತಿಂಗಳಿಗೊಮ್ಮೆ ಮಾನೀಟರ್ ಮಾಡಬೇಕಾಗುತ್ತದೆ. ಬೆಳಗ್ಗೆ, ರಾತ್ರಿ ಅವರು ಆಸ್ಪತ್ರೆಗೆ ಬರಬೇಕಾಗುತ್ತದೆ. ಅವರಿಗೆ ಇನ್ನೇನೋ ಆಗಿದೆ ಎಂದು ಮತ್ತೆ ಅಭಿಮಾನಿಗಳನ್ನು ಗಾಬರಿಪಡಿಸಬೇಡಿ" ಎಂದರು. (ಏಜೆನ್ಸೀಸ್)