Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಪ್ರಕಾಶ್ ರೈ 'ಒಗ್ಗರಣೆ'ಗೆ ಐವತ್ತರ ಘಮಘಮ
ನಟ ಪ್ರಕಾಶ್ ರೈ ಹಾಕಿದ 'ಒಗ್ಗರಣೆ' ಘಮಲು ಐವತ್ತರ ಗಡಿ ತಲುಪಿದೆ. ಈ ಚಿತ್ರ ಮಲಯಾಲಂನ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರದ ರೀಮೇಕ್ ಆದರೂ ಪ್ರಕಾಶ್ ರೈ ಅವರು ತಮ್ಮದೇ ಆದಂತಹ ಸೊಗಡನ್ನು ಚಿತ್ರಕ್ಕೆ ಕೊಟ್ಟಿದ್ದರು. ಇದೀಗ ಅರ್ಧ ಶತಕದತ್ತ 'ಒಗ್ಗರಣೆ' ಮುನ್ನುಗ್ಗುತ್ತಿದೆ.
ರಾಜ್ಯದ ಐದು ಕೇಂದ್ರಗಳಲ್ಲಿ ಒಗ್ಗರಣೆ ಐವತ್ತು ದಿನಗಳನ್ನು ಪೂರೈಸಲು ರೆಡಿಯಾಗಿದೆ. ಯಲಹಂಕದ ಗಣೇಶ್, ತಿಪಟೂರಿನ ಲಕ್ಷ್ಮಿ, ಶಹಪುರದ ಜಯಶ್ರೀ, ಬಾದಾಮಿಯ ಕುಮಾರೇಶ್ವರ ಹಾಗೂ ಹರಿಹರದ ಜಯಶ್ರೀ ಚಿತ್ರಮಂದಿರಗಳಲ್ಲಿ 'ಒಗ್ಗರಣೆ' ಘಮಘಮ ಎನ್ನುತ್ತಿದೆ. [ಒಗ್ಗರಣೆ ಚಿತ್ರ ವಿಮರ್ಶೆ]
ಇಬ್ಬರು ಮಧ್ಯವಯಸ್ಕರ ನಡುವಿನ ತೊಳಲಾಟ, ಭಾವನೆಗಳ ಸಂಘರ್ಷ, ತಾಕಲಾಟಗಳೇ ಚಿತ್ರದ ಜೀವಾಳ. ಮಧ್ಯವಯಸ್ಕ ಪ್ರೇಮಿಗಳ ಜೊತೆ ಯುವ ಪ್ರೇಮಿಗಳಾಗಿ ತೇಜಸ್ (ಹೊಸ ಪರಿಚಯ) ಹಾಗೂ ಸಂಯುಕ್ತಾ ಹೊರನಾಡ್ ಅವರ ಚಿಲಿಪಿಲಿ ಪ್ರೇಮವೂ ಇದೆ.
ಚಿತ್ರದಲ್ಲಿ ಊರ್ವಶಿ, ಮಂಡ್ಯ ರಮೇಶ್ ಅವರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಅಡುಗೆಭಟ್ಟನಾಗಿ ಅಚ್ಯುತ ಕುಮಾರ್ ಅವರ ಪಾತ್ರ ಅಮೋಘ. ಇಳಯರಾಜಾ ಅವರ ಸಂಗೀತದ ಹಾಡುಗಳು 'ಒಗ್ಗರಣೆ'ಯಲ್ಲಿ ಸಾಸಿವೆಯಂತೆ ಚಿಟಪಟ ಎಂದು ಸಿಡಿದು ಸೊಗಸಾಗಿವೆ. ಪ್ರೀತಾ ನಾಗರಾಜ್ ಅವರ ಛಾಯಾಗ್ರಹಣ ಕಣ್ಣಿಗೆ ಕಣ್ಣಿಗೆ ಹಿತಮಿತವಾಗಿದೆ. (ಒನ್ಇಂಡಿಯಾ ಕನ್ನಡ)