Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಟಕಟೆಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಬಾರಿ ಕೌಟುಂಬಿಕ ಕಥಾಹಂದರ ಚಿತ್ರದ ಜೊತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರಜ್ವಲ್ ಅವರು ಕಟಕಟೆಯಲ್ಲಿ ಎದುರಿಸುವ ಸವಾಲ್ ಜೊತೆಗೆ ಗಟ್ಟಿ ಮುಟ್ಟಾದ ಖಳ ನಟ ರಾಜ್ ಕೆ ಪುರೋಹಿತ್ 'ಸವಾಲ್' ಎದುರಿಸುವ ಸಂದರ್ಭ ಸಿನೆಮಾದಲ್ಲಿ ಕಾಣಲಿದೆ.
ಶ್ರೀ
ತಿರುಮಲಾ
ಮೂವಿ
ಮಕೇರ್ಸ್
ಅವರ
'ಸವಾಲ್'
ಮನೆ
ಮಂದಿಗೆಲ್ಲ
ಮನರಂಜನೆ
ನೀಡಲು
ಈ
ವಾರ
(ಮಾ.14)
ತೆರೆ
ಕಾಣುತ್ತಿದೆ.
'ಸವಾಲ್'
ನಾಯಕ
ಕೋರ್ಟಿನ
ಕಟಕಟೆ
ಅಲ್ಲಿ
ಅದೆಂತಹ
ಸವಾಲುಗಳನ್ನು
ಎದುರಿಸುತ್ತಾನೆ
ಹಾಗೂ
ಹಾಕುತ್ತಾನೆ
ಎಂಬುದು
ಕುತೂಹಲದ
ವಿಚಾರ.
ಈ
ಚಿತ್ರದಲ್ಲಿ
ಪ್ರಜ್ವಲ್
ದೇವರಾಜ್
ಮತ್ತೊಮ್ಮೆ
ವಕೀಲನಾಗಿ
ಅಭಿನಯಿಸಿದ್ದಾರೆ.
ಸೋನ
ಚಿತ್ರದ
ನಾಯಕಿ.
['ಅಂಗಾರಕ'ವಿಮರ್ಶೆ]
ಮುತ್ತುರಾಜ್, ಶೋಭಾರಾಜ್, ಅಭಯ್, ಮನೋಹರ್, ರಾಜ್ ಕೆ ಪುರೋಹಿತ್, ರೇಖ ದಾಸ್, ಸಾಧು ಕೋಕಿಲ, ಬುಲ್ಲೆಟ್ ಪ್ರಾಕಾಶ್, ರಾಜು ತಾಳಿಕೋಟೆ, ಅಚ್ಯುತ್ ಕುಮಾರ್, ಟೆನ್ನಿಸ್ ಕೃಷ್ಣ, ಉಮೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಭೂಮಿ ತಾಯಿಯ ಸೇವೆಯಲ್ಲಿ ತೊಡಗಿ ರೈತನಾಗಿರುವ ಹಾಗೂ ಪಂಚಾಯತಿ ಸದಸ್ಯರು ಆಗಿರುವ ಕೆ ತಿಮ್ಮರಾಜು ಚಿತ್ರದ ನಿರ್ಮಾಪಕರು. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಧನಂಜಯ ಬಾಲಾಜಿ ಅವರದು. ವಿ ಮನೋಹರ್ ಅವರ ಸಂಗೀತ, ಪಿ ಕೆ ಎಚ್ ದಾಸ್ ಅವರ ಛಾಯಾಗ್ರಹಣ, ಧನಂಜಯ ಬಾಲಾಜಿ, ಕೆ ವೆಂಕಟೇಶ್, ಪ್ರತಾಪ್, ವಿಶ್ವ, ರಾಜು ಅವರ ಸಂಭಾಷಣೆ, ಮನೋಹರ್, ಯೋಗರಾಜ್ ಭಟ್, ಅಪ್ಪು, ಧನಂಜಯ ಬಾಲಾಜಿ ಅವರ ಗೀತ ಸಾಹಿತ್ಯವಿದೆ.
ವಿನೋದ್ ಮನೋಹರ್ ಅವರ ಸಂಕಲನ, ಬಾಬು ಖಾನ್ ಅವರ ಕಲೆ, ಡಿಫರೆಂಟ್ ಡ್ಯಾನಿ, ಶಿವು ಅವರ ಸಾಹಸ, ಮುರಳಿ, ರಾಮು, ಸುರೇಶ್, ಮನು ಅಕುಳ್ ಅವರ ನೃತ್ಯ ಸಂಯೋಜನೆ, ಗಂಡಸಿ ನಾಗರಾಜ್ ಅವರ ವಸ್ತ್ರ ವಿನ್ಯಾಸ 'ಸವಾಲ್' ಚಿತ್ರಕ್ಕೆ ಇದೆ. (ಒನ್ಇಂಡಿಯಾ ಕನ್ನಡ)