Don't Miss!
- News ನೇಹಾ ಕೊಲೆ ಪ್ರಕರಣ: ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗೂಳಿ ಹಟ್ಟಿ'ಯಲ್ಲಿ ಮಮತಾ ರಾವತ್ ಮಸಾಲೆ
ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಐಟಂ ಬೆಡಗಿಯ ಪಾದಾರ್ಪಣೆಯಾಗಿದೆ. ಐಟಂ ರಾಣಿ ಎಂದ ಮೇಲೆ ಅವರೇನು ಲಾಲಿ ಹಾಡು ಬಂದಿಲ್ಲ, ಪೋಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿರುವ ಬೆಡಗಿ ಹೆಸರು ಮಮತಾ ರಾವತ್. ಈ ಹಿಂದೆ ಇವರು 'ಆಶೀರ್ವಾದ' ಚಿತ್ರದಲ್ಲೂ ತಮ್ಮ ಸೊಂಟ ಬಳುಕಿಸಿದ್ದರು.
'ಗೂಳಿ ಹಟ್ಟಿ' ಎಂಬ ವಿವಾದಾತ್ಮಕ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಇದೀಗ ತಮ್ಮ ಮೈಮಾಟ ತೋರಲು ಬಂದಿದ್ದಾರೆ. ಈ ಸಿನಿಮಾದಲ್ಲಿ ನಟಿ ಮಮತಾ ರಾವತ್ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. "ಆಯಿಕೊಂಡ್ ತಿನ್ನೋರ ಮಧ್ಯೆ..." ಎಂಬ ಸಾಹಿತ್ಯವಿರುವ ಈ ಹಾಡಿಗೆ ಕಂಬಿ ರಾಜ್ ಅವರ ನೃತ್ಯ ನಿರ್ದೇಶನವಿದೆ.
ಇತ್ತೀಚೆಗೆ ಈ ಹಾಡನ್ನು ಕಂಠೀರವ ಸ್ಟುಡಿಯೋದಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನೊಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಸ್ವಲ್ಪ ಉಳಿದಿದ್ದು ಮೇಲುಕೋಟೆಯಲ್ಲೂ ಚಿತ್ರೀಕರಣ ನಡೆಸಲಿದೆ.
ಮೈಲಾರ ಲಿಂಗೇಶ್ವರ ಜಾತ್ರೆ ಚಿತ್ರೀಕರಣ
ಮೊದಲ ಬಾರಿಗೆ ಬಳ್ಳಾರಿಯ ಮೈಲಾರ ಲಿಂಗೇಶ್ವರ ಜಾತ್ರೆಯ ದೃಶ್ಯಗಳನ್ನು ಚಿತ್ರೀಕರಿಸಲಾಗಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು.
ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ
ನಿರ್ಮಾಪಕರಾದ ಭಾರ್ಗವ ಹಾಗೂ ಎಚ್ ಎಂ ಅಶೋಕ್ ಅವರು ಅರ್ಜುನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಅಪಾರ ವೆಚ್ಚದಲ್ಲಿ ಈ ಪ್ರಸಿದ್ಧ ಜಾತ್ರೆಯ ಸನ್ನಿವೇಶಗಳನ್ನು ಹೆಲಿಕಾಪ್ಟರ್ ಬಳಸಿ ಹಲವು ಕ್ಯಾಮರಾಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಪಾತ್ರವರ್ಗದಲ್ಲಿ ಯಾರ್ಯಾರಿದ್ದಾರೆ?
ಪವನ್ ಸೂರ್ಯ, ತೇಜಸ್ವಿನಿ ಪ್ರಕಾಶ್, ದೊಡ್ಡಣ್ಣ, ಆದಿ ಲೋಕೇಶ್, ಸುಧಾ ಬೆಳವಾಡಿ, ಮಮತ ರಾವತ್, ಅಮನ್, ರಾಘವೇಂದ್ರ, ಮಹೇಶ್, ಅಪ್ಪುವೆಂಕಟೇಶ್, ರಂಗಾಯಣ ರಘು, ಅವಿನಾಶ್, ಶರತ್ ಲೋಹಿತಾಶ್ವ, ಸುರೇಶ್ಚಂದ್ರ, ಸ್ವಯಂವರ ಚಂದ್ರು, ಮೈಕೊ ನಾಗರಾಜ್, ಲಕ್ಷ್ಮಿ ದೇವಮ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ತಾಂತ್ರಿಕ ವರ್ಗದಲ್ಲಿ ಯಾರ್ಯಾರಿದ್ದಾರೆ?
ತಾಂತ್ರಿಕ ವರ್ಗದಲ್ಲಿ ಆರ್ ವಿ ನಾಗೇಶ್ವರ ರಾವ್ ಅವರ ಛಾಯಾಗ್ರಹಣ, ಶ್ರೀಮಂಜು ಅವರ ಸಂಗೀತ. ಬಾಬು ಖಾನ್ ಅವರ ಕಲೆ, ಅಲ್ಟಿಮೇಟ್ ಶಿವು, ಕುಂಗ್ ಫೂ ಚಂದ್ರು ಅವರ ಸಾಹಸ, ಸಂಜೀವ್ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ.
ಶೀರ್ಷಿಕೆಯಲ್ಲೇ ಸೆಳೆದಿರುವ ಚಿತ್ರ
ಇನ್ನು ಈ ಚಿತ್ರಕ್ಕೆ ಕೆ ಕಲ್ಯಾಣ್, ನಾಗೇಂದ್ರ ಪ್ರಸಾದ್, ಭಂಗಿರಂಗ, ಶಶಾಂಕ್, ತ್ಯಾಗರಾಜ್ ಅವರ ಗೀತಸಾಹಿತ್ಯವಿದ್ದು, ಗೂಳಿ ಹಟ್ಟಿ ಚಿತ್ರ ತನ್ನ ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿರುವ ಚಿತ್ರ.