Don't Miss!
- Sports MI vs GT: ಹಾರ್ದಿಕ್ ಪಾಂಡ್ಯರನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡಿದ ಮೊಹಮ್ಮದ್ ಶಮಿ
- News ದಾವಣಗೆರೆ ಬಿಜೆಪಿ ಬಂಡಾಯ ಶಮನಗೊಳಿಸಿದ ರಾಜಾಹುಲಿ, ಸಂಧಾನ ಸಕ್ಸಸ್ ಆಗಿದ್ದೇಗೆ?-ಮಾಹಿತಿ, ವಿವರ
- Automobiles ಆಕರ್ಷಕ ಬೆಲೆ: ಭಾರೀ ಬೇಡಿಕೆಯ ಕಿಯಾ ಸೆಲ್ಟೋಸ್ ಎಸ್ಯುವಿಯ ಹೊಸ ರೂಪಾಂತರಗಳು ಬಿಡುಗಡೆ
- Lifestyle ಕಾರಿನ ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ..! ಆನ್ಲೈನ್ನಲ್ಲಿ ₹6 ಲಕ್ಷ ಕಳೆದುಕೊಂಡ!
- Technology Lenovo: ಭಾರತದಲ್ಲಿ ಲೆನೊವೊ ಟ್ಯಾಬ್ M11 ಲಾಂಚ್! 8GB RAM ... ಬೆಲೆ ಎಷ್ಟು?
- Finance ಇಪಿಎಫ್ಒ ವಿಚಾರದಲ್ಲಿ ಎಲ್ಲ ನೌಕರರಿಗೆ ಶುಭ ಸುದ್ದಿ, ಇಲ್ಲಿದೆ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನಸಿನ ರಾಣಿ ಮಾಲಾಶ್ರೀ ಮತ್ತೆ ಸೀರೆಗೆ ಶರಣು
ತೆರೆಯ ಮೇಲೆ ಸೀರೆ ಮಾಡುವ ಮೋಡಿಯೇ ಬೇರೆ. ಅದು ಬಾಲಿವುಡ್ ಇರಲಿ, ಸ್ಯಾಂಡಲ್ ವುಡ್ ಇರಲಿ ಸೀರೆ ಮಾಡುವ ಮ್ಯಾಜಿಕ್ ಗೆ ಪ್ರೇಕ್ಷಕರು ಫಿದಾ ಆಗಲೇಬೇಕು. ಕಾಲ ಎಷ್ಟೇ ಬದಲಾದರೂ ಸೀರೆಯ ವಿಚಾರದಲ್ಲಿ ಪ್ರೇಕ್ಷಕರ ಅಭಿರುಚಿ ಮಾತ್ರ ಬದಲಾಗಿಲ್ಲ. ಒಂದು ಕಾಲದಲ್ಲಿ ಸೀರೆಯಲ್ಲೇ ಮೋಡಿ ಮಾಡಿದ ತಾರೆ ಮಾಲಾಶ್ರೀ.
ಇತ್ತೀಚಿನ ದಿನಗಳಲ್ಲಿ ಖಾಕಿ, ಟೈಟ್ ಜೀನ್ಸ್ ಪ್ಯಾಂಟ್ ಗಳಲ್ಲೇ ಮಿಂಚುತ್ತಿರುವ 'ಕನಸಿನ ರಾಣಿ' ಮಾಲಾಶ್ರೀ ಈಗ ಮತ್ತೆ ಸೀರೆಯಲ್ಲಿ ಕಂಗೊಳಿಸಲು ಅಣಿಯಾಗುತ್ತಿದ್ದಾರೆ. 1990ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೇಳಲಾದ ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು 19 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. [ವಯಸ್ಕರಿಗೆ ಮಾತ್ರ: ಸೀರೆಯಲಿ ತಾರೆಗಳ ಸೆಕ್ಸಿ ಲುಕ್]
ಇದೆ ತಿಂಗಳ ಜೂನ್ 6 ರಂದು ಚಿತ್ರೀಕರಣ ಮುಹೂರ್ತ ನಿಗದಿಯಾಗಿದೆ. ರಾಮು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬರುತ್ತಿರುವ 36ನೇ ಚಿತ್ರವಾಗಿದೆ. ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ಶ್ರೀನಿವಾಸಮೂರ್ತಿ, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮ ಚೌಧರಿ ಇತರರು ಇದ್ದಾರೆ.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅಭಿನಯದಲ್ಲಿ ಜನಪ್ರಿಯ ಚಿತ್ರಗಳಾದ ಪೊಲೀಸನ ಹೆಂಡತಿ, ಸೋಲಿಲ್ಲದ ಸರದಾರ, ಕಿತ್ತೂರಿನ ಹುಲಿ, ಗೃಹಪ್ರವೇಶ, ರೆಡಿಮೆಡ್ ಗಂಡ, ತವರುಮನೆ ಉಡುಗೊರೆ, ಮಾಲಾಶ್ರೀ ಮಾಮಾಶ್ರೀ, ನಗರದಲ್ಲಿ ನಾಯಕರು, ಗಡಿಬಿಡಿ ಅಳಿಯ ಸಿನಿಮಾಗಳು ಬಂದಿವೆ.
ಅಂದಹಾಗೆ ಮಾಲಾಶ್ರೀ ಅವರು ಸೀರೆ ಉಟ್ಟು ಈ 'ಗಂಗಾ' ಸಿನಿಮಾದಲ್ಲಿ ಕಂಗೊಳಿಸಲಿದ್ದಾರೆ. ಸಾಹಸ ಚಿತ್ರಗಳಲ್ಲಿ ಮಾಲಾಶ್ರೀ ಅವರು ಅಭಿನಯಿಸಲು ಪ್ರಾರಂಭಿಸಿದ ಮೇಲೆ ಸೀರೆ ಉಟ್ಟ ಪಾತ್ರಗಳು ಅವರ ಪಾಲಿಗೆ ವಿರಳವಾಗಿದ್ದವು.
ಅರ್ಜುನ್ ಜನ್ಯ ಅವರ ಐದು ಹಾಡುಗಳಿಗೆ ರಾಗ ಸಂಯೋಜನೆ ಇರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಲಾಗುವುದು. ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)