Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಿ ಇನ್ನೊಂದು ಮುಖ ನೋಡಿದ್ದೀರಾ?
ದುನಿಯಾ ವಿಜಯ್ ಒರಟನ ಪಾತ್ರಗಳನ್ನ ಮಾಡ್ತಾರೆ ಆದರೆ ಮನಸ್ಸಲ್ಲಿ ಮಾತ್ರ ತುಂಬಾ ಮೃದು. ವಿಜಿ ಕೇವಲ ಸಿನಿಮಾವನ್ನ ಮಾಡಲ್ಲ. ಸಿನಿಮಾದ ಜೊತೆ ಸ್ನೇಹ, ಪ್ರೀತಿಗಳೂ ಜೊತೆಗೆ ಇರುತ್ತವೆ. ಬಡವರ, ಕೈಲಾಗದವರ ಮೇಲೆ ವಿಜಿ ತೋರಿಸೋ ಅನುಕಂಪ ಕರುಣೆ ಅಚ್ಚರಿ ಮೂಡಿಸುತ್ತೆ.
ದುನಿಯಾ ವಿಜಯ್ ಸಿನಿಮಾದಲ್ಲಿ ಮಾಡೋ ಪಾತ್ರಗಳಲ್ಲಿ ಮಾತ್ರ ಹೀರೋ ಅಲ್ಲ, ಅವರು ನಿಜಜೀವನದಲ್ಲೂ ಹೀರೋ. ಕಷ್ಟ ಅಂತ ಮನೆಗೆ ಬರೋ ಅದೆಷ್ಟೋ ಜನರಿಗೆ ವಿಜಿ ಸಹಾಯಮಾಡ್ತಾರೆ. ವಿಜಿ ಸರಿಯಾಗಿ ಯೋಚನೆ ಮಾಡೀನೇ ಇಂತಹಾ ಕೆಲಸಗಳನ್ನೆಲ್ಲಾ ಮಾಡ್ತಾರೆ. ಯಾಕಂದ್ರೆ ಇತ್ತೀಚೆಗೆ ಮನೆಗೆ ಬಂದು ಕಷ್ಟ ಅಂತ ಕೇಳಿಕೊಂಡ ವ್ಯಕ್ತಿಯೊಬ್ಬನಿಗೆ ಬುದ್ಧಿ ಹೇಳಿ ಹತ್ತು ಸಾವಿರ ರುಪಾಯಿ ಕೊಟ್ಟು ಕಳಿಸಿದ್ರು. [ಮೃತ ರೈತ ಕುಟುಂಬಕ್ಕೆ ದುನಿಯಾ ವಿಜಯ್ ನೆರವಿನ ಹಸ್ತ]
ಕೊಟ್ಟ ಮರುಕ್ಷಣದಲ್ಲೇ ಅವ್ನು ಎಲ್ಲರನ್ನೂ ಹೀಗೆ ಯಾಮಾರಿಸೋ ಖಿಲಾಡಿ ಅಂತ ಫೇಸ್ ಬುಕ್ ನಿಂದ ತಿಳ್ಕೊಂಡ ವಿಜಿ ಒಂದೇ ದಿನದಲ್ಲಿ ತನ್ನ ಗೆಳೆಯರ ಜೊತೆ ಅವನ ಬೆನ್ನತ್ತಿ. ಮೋಸಗಾರರನ್ನ ಪೊಲೀಸರಿಗೆ ಹಿಡಿದುಕೊಟ್ಟಿದ್ರು. ಆದ್ರೆ ಇತ್ತೀಚೆಗೆ ವಿಜಯ್ ಬಿಳಿಗಿರಿ ರಂಗನಬೆಟ್ಟಕ್ಕೆ ಹೋದಾಗ ಎಲ್ಲರಿಗೂ ಮಾದರಿಯಾಗುವಂತಹಾ ಕೆಲಸ ಮಾಡಿದ್ದಾರೆ ಅದೇನು ಅಂತ ಸ್ಲೈಡ್ ನಲ್ಲಿ ನೋಡಿ...
ವಿಜಯ್ ಕರುಣಾಮಯಿ
ನಟ ವಿಜಯ್ ಕಷ್ಟಪಡುವವರನ್ನ ಕಂಡ್ರೆ ಕರಗ್ತಾರೆ. ನೋವಿನಲ್ಲಿರೋರಿಗೆ ಸಹಾಯ ಮಾಡ್ತಾರೆ. ಇದು ವಿಜಿ ಇತ್ತೀಚೆಗೆ ಬಿಳಿಗಿರಿ ರಂಗನಬೆಟ್ಟಕ್ಕೆ ಹೋಗಿದ್ದ ಫೋಟೋ. ವಿಜಿ ಅಲ್ಲಿ ಅಸ್ವಸ್ಥ ವ್ಯಕ್ತಿಯೊಬ್ಬನಿಗೆ ಸಹಾಯ ಮಾಡಿದ್ದಾರೆ.
ಸ್ನಾನ ಮಾಡಿಸಿದ ವಿಜಿ
ಹಿಂದೆ ಕರಾಟೆ ಮಾಸ್ಟರ್ ಆಗಿದ್ದ ಬೊಮ್ಮಯ್ಯ ಅನ್ನೋ ವ್ಯಕ್ತಿಯ ಪರಿಸ್ಥಿಗೆ ಮರುಗಿದ ವಿಜಿ ತಾನೇ ಸ್ನಾನ ಮಾಡಿಸಿದ್ರು.
ಶೇವಿಂಗ್ ಕೂಡ ಮಾಡಿದ ವಿಜಿ
ವಿಜಿ ಸ್ನಾನ ಮಾಡಿಸೋದಷ್ಟೇ ಅಲ್ಲ ಬೊಮ್ಮಯ್ಯ ಅನ್ನೋ ಅ ವ್ಯಕ್ತಿಗೆ ತಾವೇ ಬ್ಲೇಡ್ ಹಿಡಿದು ಶೇವಿಂಗ್ ಕೂಡ ಮಾಡಿಸಿದ್ದಾರೆ.
ತಲೆ ಬಾಚ್ಕಳ್ಳಿ ಪೌಡ್ರ್ ಹಾಕ್ಕಳಿ
ದುನಿಯಾ ಸಿನಿಮಾದಲ್ಲಿ ತಲೆ ಬಾಚ್ಕಳಿ ಪೌಡ್ರ್ ಹಾಕ್ಕಳಿ ಅನ್ನೊ ಡೈಲಾಗ್ ಕೇಳಿರ್ತೀರಾ. ಇಲ್ಲಿ ವಿಜಿ ಈ ವ್ಯಕ್ತಿಯನ್ನ ತಾನೇ ಮೇಕ್ ಓವರ್ ಮಾಡಿದ್ರು.
ಹೊಸ ಬಟ್ಟೆ ಹೊಸ ಲುಕ್
ದುನಿಯಾ ವಿಜಿ ಒಳ್ಳೆಯ ಶರ್ಟ್, ಪ್ಯಾಂಟ್ ಹಾಕ್ಕೋಬೇಕು ಅಂತ ಬಯಸದ ಸರಳ ವ್ಯಕ್ತಿ. ಆದರೆ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸಿಕ್ಕ ಆ ಬೊಮ್ಮಯ್ಯನಿಗೆ ಹೊಸ ಬಟ್ಟೆ ಕೊಡಿಸಿದ್ರು ಮತ್ತು ತಾವೇ ತೊಡಿಸಿದ್ರು.
'ದುನಿಯಾ ಬೊಮ್ಮ'ನಾದ ಬೊಮ್ಮಯ್ಯ
ಅಸ್ವಸ್ಥನಾಗಿದ್ದ ಕರಾಟೆ ಮಾಸ್ಟರ್ ಗೆ ವಿಜಿ ಚೇಂಜ್ ಓವರ್ ಕೊಟ್ಟಮೇಲೆ ಅವರಿಗೆ ಬಿಳಿಗಿರಿ ರಂಗನಬೆಟ್ಟದಲ್ಲಿ ಜನರು ದುನಿಯಾ ಬೊಮ್ಮ ಅಂತ ಹೆಸರಿಟ್ರು.
ವಿಜಿಗೆ ಬಡವರು ಅಂದ್ರೆ ಕರುಣೆ
ಒಂದು ಕಾಲದಲ್ಲಿ ತಾನೂ ಹೀಗೆ ಪರದಾಡಿದ್ದರಿಂದ ವಿಜಿಗೆ ಬಡವರು ಅಂದ್ರೆ ಕರುಣೆ. ಕಷ್ಟಪಡೋರು ಅಂದ್ರೆ ಪ್ರೀತಿ, ಅದೇನೋ ಒಂಥರಾ ಆತ್ಮೀಯತೆ.