Don't Miss!
- News Rameshwar Cafe: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣ: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಸರ್ಜಾ ಚಿತ್ರದಲ್ಲಿ ಪಾಂಡುರಂಗ ವಿಠಲ ಜಹಾಂಗೀರ್
ಈ ಚಿತ್ರಕ್ಕೆ ಜೀ ಕನ್ನಡ ವಾಹಿನಿಯ 'ಪಾಂಡುರಂಗ ವಿಠಲ' ಕಾಮಿಡಿ ಸೀರಿಯಲ್ ನ ಮುಖ್ಯ ಕಲಾವಿದ ಎಂ.ಎಸ್.ಜಹಾಂಗೀರ್ ಆರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹಾಸ್ಯ ಧಾರಾವಾಹಿಗಳನ್ನು ನೋಡಿರುವ ಸರ್ಜಾ ಅವರು ಸ್ವತಃ ಕರೆ ಮಾಡಿ ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾಹಿಸಿರುವುದು ವಿಶೇಷ.
ಇಷ್ಟು ದಿನ ಕಿರುತೆರೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಜಹಾಂಗೀರ್ ಅವರು ಇದೀಗ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಅರ್ಜುನ್ ಸರ್ಜಾ ಚಿತ್ರದಲ್ಲಿ ಆಫರ್ ಸಿಕ್ಕ ಬಗ್ಗೆ ಜಹಾಂಗೀರ್ ಹೇಳಿದ್ದನ್ನು ಅವರದೇ ಮಾತುಗಳಲ್ಲಿ ಕೇಳಿ.
ಮೊದಲು ಸರ್ ಫೋನ್ ಮಾಡಿದರು. ಯಾರು ಎಂದು ಗೊತ್ತಾಗದೆ ಪಿಕ್ ಮಾಡಲಿಲ್ಲ. ಬಳಿಕ ಮೆಸೇಜ್ ಮಾಡಿದರು. ನಾನಪ್ಪಾ ಅರ್ಜುನ್ ಸರ್ಜಾ ಫೋನ್ ರಿಸೀವ್ ಮಾಡು ಎಂದರು. ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿದರು. ಕೂಡಲೆ ಒಪ್ಪಿಕೊಂಡೆ ಎಂದರು.
ನನಗೆ ಮೊದಲೇ ಕಲರ್ ಇಲ್ಲ, ಲುಕ್ ಇಲ್ಲ. ತಲೆಯಲ್ಲಿ ಸ್ವಲ್ಪ ಕೂದಲು ಇದೆ ಅಷ್ಟೇ. ಇದೂ ಹೋದರೆ ಏನೇನು ಇರಲ್ಲ ಎಂದರು. ಒಟ್ಟಾರೆಯಾಗಿ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಸಹಜವಾಗಿಯೇ ಅವರಿಗೆ ಖುಷಿಯಾಗಿತ್ತು. (ಒನ್ಇಂಡಿಯಾ ಕನ್ನಡ)