Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀರಿನಲ್ಲಿ ಮುಳುಗಿ ಇಬ್ಬರು ನಟಿಯರು ದುರಂತ ಸಾವು
ಧನುಷ್ ಅಭಿನಯಿಸುತ್ತಿರುವ ತಮಿಳಿನ 'ನಯ್ಯಾಂಡಿ' ಚಿತ್ರೀಕರಣ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರದ ಶೂಟಿಂಗ್ ತಿರುವಾರೂರಿನಲ್ಲಿ ನಡೆಯುತ್ತಿದೆ. ಈ ಚಿತ್ರದ ಸಹ ನಟಿಯರಾದ ಸರಸ್ವತಿ (24), ಸುಕನ್ಯಾ (22) ಹಾಗೂ ವಿಜಿ (21) ಎಂಬುವವರು ಕೊಳವೊಂದರಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಮೂವರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಆಳವಿಲ್ಲದ ಸ್ಥಳದಲ್ಲಿ ಇವರು ಸ್ನಾನ ಮಾಡುತ್ತಿದ್ದರು. ಇನ್ನೂ ಮುಂದೆ ಆಳಕ್ಕೆ ಇಳಿದಾಗ ನೀರಿನಲ್ಲಿನಲ್ಲಿರುವ ಗಿಡಗಂಟೆಗಳು ಇವರ ಕಾಲಿಗೆ ಸುತ್ತಿಕೊಂಡಿವೆ. ಇವರು ಅಲ್ಲಿಂದ ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಸಿಲುಕಿ ಸಾವಪ್ಪಿದ್ದಾರೆ.
ಸುಕನ್ಯಾ ಅವರನ್ನು ಮಾತ್ರ ಜೀವಂತ ಉಳಿಸಲು ಸಾಧ್ಯವಾಗಿದೆ. ಉಳಿದ ಇಬ್ಬರು ಮುಳುಗಿ ಸಾವಪ್ಪಿದ್ದಾರೆ. ಮೃತರ ದೇಹಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಸುಕನ್ಯಾ ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಕಳೆದ ಒಂದು ವಾರದಿಂದ ತಿರುವಾರೂರು ಜಿಲ್ಲೆಯಲ್ಲಿ 'ನಯ್ಯಾಂಡಿ' ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಈ ದುರಂತ ಸಂಭವಿಸಿದ ಮೇಲೆ ಚಿತ್ರತಂಡ ಅಲ್ಲಿಂದ ಸ್ಥಳಾಂತರವಾಗಿದೆ. ಚಿತ್ರದ ನಿರ್ದೇಶಕ ಸರ್ಕೂನಂ ಅವರು ಚೆನ್ನೈಗೆ ವಾಪಸಾಗಿದ್ದಾರೆ.