Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸತ್ಯ ಬಿಚ್ಚಿಡಲು ಮುಂದಾದ ದುನಿಯಾ ವಿಜಯ್
ನನ್ನ ಜೀವನದಲ್ಲಿ ನನ್ನ ತಂದೆತಾಯಿಯೇ ಸರ್ವಸ್ವ. ಮಾಧ್ಯಮಗಳು ನನಗೆ ಮಾರ್ಗದರ್ಶಕರಿದ್ದಂತೆ. ನನ್ನ ತಂದೆತಾಯಿ ಸಮ್ಮುಖದಲ್ಲಿ ಏನಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿಜಯ್ ತಿಳಿಸಿದ್ದಾರೆ. ವಿಜಯ್ ಎಂಟರ್ ಪ್ರೈಸಸ್ ಹಾಗೂ ದುನಿಯಾ ಟಾಕೀಸ್ ಎಂದಿರುವ ಲೆಟರ್ ಹೆಡ್ ನಲ್ಲಿ ಅವರು ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.
ಭಕ್ತಿ ( Devotion), ಶಿಸ್ತು (Discipline), ಸಂಕಲ್ಪ (Decision), ಛಲ (Determination) ಹಾಗೂ ಸಮರ್ಪಣ (Dedication) ಭಾವದ ವ್ಯಕ್ತಿತ್ವ ತನ್ನದು ಎಂದಿರುವ ವಿಜಿ, ತನ್ನ ಜೀವನದಲ್ಲಿ ಮೇಲಿನ 5Dಗಳು ಪ್ರಮುಖ ಪಾತ್ರವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ವಿಜಿ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು ಗೊತ್ತೇ ಇದೆ.
ನನಗಾಗಿರುವ ನೋವು ಇನ್ಯಾರಿಗೂ ಆಗಬಾರದು. ನನ್ನ ತಾಯಿ ನನಗೆ ಮುಖ್ಯ. ಎರಡು ವರ್ಷಗಳ ಹಿಂದೆ ನನ್ನ ತಾಯಿ ಇನ್ನೇನು ಸಾಯುವ ಹಂತಕ್ಕೆ ಹೋಗಿದ್ದರು. ಆಗ ಈ ಸೊಸೆ ಅನ್ನಿಸಿಕೊಂಡವರು ಎಲ್ಲಿ ಹೋಗಿದ್ದರು ಎಂದು ಕೇಳಿದ್ದ ವಿಜಿ ಮಾಧ್ಯಮಗಳ ಮುಂದೆ ಇನ್ನೇನು ಹೇಳುತ್ತಾರೋ ಏನೋ? (ಏಜೆನ್ಸೀಸ್)