Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧರ್ಮಸ್ಥಳದಲ್ಲಿ ನಟ ಗಣೇಶ್ ತಮ್ಮನ ಪ್ರೇಮ ವಿವಾಹ
ಇವರಿಬ್ಬರ ಮದುವೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿ ಸಮ್ಮುಖದಲ್ಲಿ ನೆರವೇರಿದೆ. ಮಹೇಶ್ ಅವರ ಭಾವ, ವಧು ಪ್ರೇಮಾ ಅವರ ತಂದೆತಾಯಿ ಸೇರಿದಂತೆ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಮದುವೆ ನಡೆದಿದೆ. ಸ್ವತಃ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಮದುವೆಗೆ ಆಗಮಿಸಿರಲಿಲ್ಲ.
ಮಹೇಶ್ ಗೆ ಈಗಾಗಲೆ ಮದುವೆ ನಿಗದಿಯಾಗಿತ್ತು ಎನ್ನಲಾಗಿದೆ. ಯಡಿಯೂರು ದೇವಸ್ಥಾನದಲ್ಲಿ ಮದುವೆ ಏರ್ಪಾಟಾಗಿತ್ತು. ಆದರೆ ಮಹೇಶ್ ಮತ್ತೊಬ್ಬ ಹುಡುಗಿ ವನಜಾ ಎಂಬುವವರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಇವರಿಬ್ಬರ ಮದುವೆ ಮಾರ್ಚ್ 2, 2012ಕ್ಕೆ ನಿಗದಿಯಾಗಿತ್ತು. ಆದರೆ ಮಹೇಶ್ ಹೊಸ ಹುಡುಗಿ ಸೌಮ್ಯಾ ಎಂಬಾಕೆಯ ಜೊತೆ ಮದುವೆ ಮಾಡಿಕೊಂಡು ಪರಾರಿಯಾಗಿದ್ದ ಎಂಬ ಸುದ್ದಿಯೂ ಇತ್ತು. ಈಗ ಪ್ರೇಮಾ ಕೈಹಿಡಿಯುವ ಮೂಲಕ ಮಹೇಶ್ ಲವ್ ಸ್ಟೋರಿಗೆ ಹೊಸ ತಿರುವು ಸಿಕ್ಕಿದೆ.
ಕಳೆದ ಎಂಟು ತಿಂಗಳಿಂದ ನಾಪತ್ತೆಯಾಗಿದ್ದ ಮಹೇಶ್ ಮಾಧ್ಯಮಗಳ ಪ್ರತಿಕ್ರಿಯೆಗೂ ಲಭ್ಯವಿರಲಿಲ್ಲ. ಈಗ ದಿಢೀರ್ ಎಂದು ನೇಪಾಳಿ ಮೂಲದ ಪ್ರೇಮಾ ಅವರ ಕೈಹಿಡಿಯುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.
ಮಹೇಶ್ ಅವರು 'ಅಲೆಮಾರಿ' ಎಂಬ ಚಿತ್ರವನ್ನೂ ಕೈಗೆತ್ತಿಕೊಂಡಿದ್ದರು. ಈ ಚಿತ್ರಕ್ಕೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಬೇಕಾಗಿತ್ತು. ಚಿತ್ರದ ಮುಹೂರ್ತವೇನೋ ನೆರವೇರಿತು. ಆದರೆ ಚಿತ್ರ ನಾನಾ ಕಾರಣಗಳಿಗೆ ಸೆಟ್ಟೇರಲೇ ಇಲ್ಲ. ಯಾಕೋ ಏನೋ ಚಿತ್ರ ನಿರ್ದೇಶಕರು ಚಿತ್ರದ ಮೇಲೆ ಆಸೆ ಕೈಬಿಟ್ಟರು. (ಏಜೆನ್ಸೀಸ್)