Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೋಕನಾಥ್ ಅಂಕಲ್ ಜೊತೆ ಲೋಕಾಭಿರಾಮ ಹರಟೆ
ಇಂತಹ ಅವಿಸ್ಮರಣೀಯ ಕಲಾವಿದ ಲೋಕನಾಥ್ ಜೊತೆ ಮುಖಾಮುಖಿಯಾಗುವ ಸುವರ್ಣಾವಕಾಶ ಈ ಬಾರಿಯ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಚಿತ್ರರಸಿಕರಿಗೆ ಸಿಗುತ್ತಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ತನ್ನ ವಿಭಿನ್ನ ಕಾರ್ಯಕ್ರಮದಲ್ಲಿ ಲೋಕನಾಥ್ ಅಂಕಲ್ ಅವರೊಂದಿಗೆ ಲೋಕಾಭಿರಾಮವಾಗಿ ಹರಟಬಹುದು. ಇದೇ ಶನಿವಾರ (ಅ.27) ಸಂಜೆ 5 ಗಂಟೆಗೆ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬೆಂಗಳೂರಿನಲ್ಲಿ ಕಾರ್ಯಕ್ರಮ ಇರುತ್ತದೆ.
ಮೊದಲೇ ಸಂಪ್ರದಾಯಸ್ಥ ಕುಟುಂಬ. ನಾಟಕ, ಅಭಿನಯ, ಬಣ್ಣ ಸುಣ್ಣ ಎಂದರೆ ಮನೆಯವರ ತೀವ್ರ ವಿರೋಧ. ಈ ಎಲ್ಲಾ ವಿರೋಧಗಳನ್ನು ಮೆಟ್ಟಿನಿಂತ ಅವರು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಬಹಳ ಉನ್ನತಮಟ್ಟಕ್ಕೇರಿದರು. ಜನರು ಅವರನ್ನು ಪ್ರೀತಿಯಿಂದ 'ಲೋಕನಾಥ್ ಅಂಕಲ್' ಎಂದು ಕರೆದು ತಮ್ಮ ಹೃದಯದಲ್ಲಿ ಸ್ಥಾನಕೊಟ್ಟಿದ್ದಾರೆ.
ಸಿ.ಎಚ್. ಲೊಕನಾಥ್ ಅವರು 'ಸಂಸ್ಕಾರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಬಂಗಾರದ ಪಂಜರ, ಮಿಂಚಿನ ಓಟ, ಹೊಸ ನೀರು, ಕಾಲೇಜುರಂಗ, ನಾಗರಹಾವು, ಕಥಾ ಸಂಗಮ, ಸಿಂಗಾಪೂರಿನಲ್ಲಿ ರಾಜಾ ಕುಳ್ಳ, ಮನೆ ಮನೆ ಕಥೆ...ಹೀಗೆ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಂಗಭೂಮಿಯಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿರುವ ಅವರು ರಕ್ತಾಕ್ಷಿ, ವಿಗಡವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಗೆಲಿಲಿಯೋ, ಡಾ.ಫಾಸ್ಟಸ್, ತನುವು ನಿನ್ನದೆ ಮನವು ನಿನ್ನದೆ, ಚಂದ್ರಹಾಸ ಸೇರಿದಂತೆ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾಪಾಂಡಿತ್ಯವನ್ನು ಮೆರೆದಂತಹವರು. ಇಂತಹ ಅಪ್ಪಟ ಕಲಾವಿದನೊಂದಿಗೆ ಲೋಕಾಭಿಮಾನವಾಗಿ ಹರಟೋಣ ಬನ್ನಿ. (ಒನ್ಇಂಡಿಯಾ ಕನ್ನಡ)