Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನಾಗವಲ್ಲಿ ಯಾರು? ತರ್ಕಕ್ಕೆ ನಿಲುಕದ ಪ್ರಶ್ನೆ
ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಅಭಿನಯದ 'ಆಪ್ತಮಿತ್ರ' (2004) ಚಿತ್ರದಲ್ಲಿ "ಸರಸಕು ರಾ...ರಾ..." ಎಂದು ಪ್ರೇಕ್ಷಕರನ್ನು ಸೆಳೆದ ಅಮೋಘ ಪಾತ್ರ ನಾಗವಲ್ಲಿ. ಈಕೆಯ ಉಪಟಳದಿಂದಲೇ ಸೌಂದರ್ಯಾ ಹಾಗೂ ವಿಷ್ಣುವರ್ಧನ್ ಅವರ ಸಾವು ಸಂಭವಿಸಿತು ಎಂಬ ಮಾತುಗಳು ಆಗಿಂದ್ದಾಗೆ ಕೇಳಿಬರುತ್ತಿವೆ.
ನಾಗವಲ್ಲಿ ಎಂಬುದು ಒಂದು ಕೇವಲ ಕಾಲ್ಪನಿಕ ಕತೆ. ನಾಗವಲ್ಲಿ ಉಪಟಳದಿಂದ ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಸಾವು ಸಂಭವಿಸಿತು ಎಂಬುದು ಕಪೋಲಕಲ್ಪಿತ ಕತೆ ಅಷ್ಟೇ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.
ಆದರೂ ಜನಮಾನಸದಲ್ಲಿ ಮಾತ್ರ ನಾಗವಲ್ಲಿ ಪಾತ್ರ ಅಚ್ಚಳಿಯದೆ ಉಳಿದುಹೋಗಿಬಿಟ್ಟಿದೆ. ಮಲಯಾಳಂನ ಯಶಸ್ವಿ ಚಿತ್ರ 'ಮಣಿಚಿತ್ರಥಾಝು' (1993) ಚಿತ್ರದ ರೀಮೇಕ್ 'ಆಪ್ತಮಿತ್ರ'. ಈ ಚಿತ್ರದ ಬಿಡುಗಡೆಗೂ ಮುನ್ನ ತಾರೆ ಸೌಂದರ್ಯಾ ವಿಮಾನ ಅಪಘಾತದಲ್ಲಿ ಮೃತಪಟ್ಟರು. 'ಆಪ್ತರಕ್ಷಕ' (ಚಿತ್ರವಿಮರ್ಶೆ ಓದಿ) ಚಿತ್ರ ಬಿಡುಗಡೆಯಾದ ಬಳಿಕ ವಿಷ್ಣುವರ್ಧನ್ ಕಾಲವಶರಾಗಿದ್ದು ದುರಂತ.
ಈ ಎಲ್ಲಾ ಘಟನೆಗಳ ಬಳಿಕ ಮುಖ್ಯವಾಗಿ ಇದನ್ನು ಲಾಭ ಮಾಡಿಕೊಂಡಿದ್ದು ಜ್ಯೋತಿಷಿಗಳು. ಇದಕ್ಕೆ ನಾಗವಲ್ಲಿ ದೋಷ ಎಂದು ಹೆಸರಿಟ್ಟು ಜನರನ್ನು ಸುಲಿಗೆ ಮಾಡಲು ಮುಂದಾದರು. ಟಿವಿ ಚಾನಲ್ ಗಳಲ್ಲಿ ದೋಷದ ಪರಿಹಾರ ಹೇಗೆ ಎಂಬಿತ್ಯಾದಿ ವಿಷಯಗಳನ್ನು ಕೇಳುಗರ ಕಿವಿಗೆ ಹಾಕಿ ಕಿವಿಗೆ ಪುಷ್ಪಾರ್ಚನೆಯನ್ನೂ ಮಾಡಿಬಿಟ್ಟರು.
ಅದೆಲ್ಲಾ ಸರಿ ನಾಗವಲ್ಲಿ ದೋಷದಿಂದಲೇ ವಿಷ್ಣು ಹಾಗೂ ಸೌಂದರ್ಯಾ ಅವರ ಸಾವು ಸಂಭವಿಸಿತು ಎಂದರೆ ಉಳಿದವರಿಗೆ ಯಾಕೆ ಏನೂ ಆಗಲಿಲ್ಲ. ಚಿತ್ರದಲ್ಲಿ ರಮೇಶ್ ಅರವಿಂದ್, ಪ್ರೇಮಾ, ಅವಿನಾಶ್, ದ್ವಾರಕೀಶ್ ಮುಂತಾದವರು ಅಭಿನಯಿಸಿದ್ದಾರೆ. ಅವರಿಗೆಲ್ಲಾ ನಾಗವಲ್ಲಿ ದೋಷ ತಟ್ಟಲಿಲ್ಲವೇಕೆ?
ಈ ಪ್ರಶ್ನೆಗಳಿಗೆಲ್ಲಾ ಉತ್ತರವಿಲ್ಲ. ಆದರೂ ನಾಗವಲ್ಲಿ ದೋಷ ಎಂಬುದು ಮಾತ್ರ ಹಾಗೆಯೇ ಉಳಿದುಕೊಂಡು ಬಿಟ್ಟಿದೆ. ಸದ್ಯಕ್ಕೆ ಈ ವಿಷಯ ಹೀಗೂ ಉಂಟೇ ಅಷ್ಟೇ? ಯಾಕೋ ಏನೋ ತಾರೆ ಸೌಂದರ್ಯಾ ನೆನಪಾದಾಗ ನಾಗವಲ್ಲಿ ಕೂಡಾ ನೆನಪಾಗುತ್ತಾರೆ. (ಒನ್ ಇಂಡಿಯಾ ಕನ್ನಡ)