Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾ.2 : ಅಲೆಮಾರಿಗೆ ಸಂಕ್ರಾಂತಿ, ವಿಲನ್ ಕಾಟ
ಮಾರ್ಚ್ 2 ರಂದು ಬಿಡುಗಡೆಗೊಳ್ಳುವ ಚಿತ್ರಗಳ ಪಟ್ಟಿಗೆ ರಾಜೇಂದ್ರ ಸಿಂಗ್ ಬಾಬು ಮಗ ಆದಿತ್ಯ ಅವರ ಹೊಸ ಚಿತ್ರ ಕೂಡಾ ಸೇರ್ಪಡೆಗೊಂಡಿದೆ.
ಯೋಗೀಶ್ ಹುಣಸೂರು ನಿರ್ಮಾಣದ ಎಂಎಸ್ ರಮೇಶ್ ನಿರ್ದೇಶನದ 'ವಿಲನ್' ಚಿತ್ರವನ್ನು ಮಾರ್ಚ್ 2 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಮುಸ್ಸಂಜೆ ಮಹೇಶ್ ನಿರ್ದೇಶನದ ಜಗ್ಗೇಶ್ ಪುತ್ರ ಗುರುರಾಜ್ ಹಾಗೂ ರೂಪಿಣಿ ಮುಖ್ಯಭೂಮಿಕೆಯಲ್ಲಿರುವ 'ಸಂಕ್ರಾಂತಿ' ಚಿತ್ರವನ್ನು ಮಾ.2 ರಂದು ತೆರೆಗೆ ಬರಲಿದೆ ಎಂದು ನಿರ್ಮಾಪಕ ಆರ್ ಎಸ್ ಗೌಡ ಈಗಾಗಲೇ ಅನೌನ್ಸ್ ಮಾಡಿದ್ದಾರೆ.
ಈ ಚಿತ್ರಗಳ ಸಾಲಿಗೆ ಲೂಸ್ ಮಾದ ಖ್ಯಾತಿ ಯೋಗೀಶ್ ಹಾಗೂ ರಾಧಿಕಾ ಪಂಡಿತ್ ಅವರ ಅಲೆಮಾರಿ ಚಿತ್ರ ಕೂಡಾ ಸೇರದೆ. ಅಲೆಮಾರಿ ಚಿತ್ರವನ್ನು ಹೊಸಬ ಸಂತು ನಿರ್ದೇಶಿಸಿದ್ದರೆ ಬೆಂಕೊಶ್ರೀ ಅವರ ನಿರ್ಮಾಣವಿದೆ.
ತೆರೆಗೆ ಬರಲು ಕ್ಯೂ ನಿಂತಿರುವ ಚಿತ್ರಗಳ ಪಟ್ಟಿ ನೋಡಿದ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬ್ಯಾನರ್ ನ 'ಲಕ್ಕಿ' ಚಿತ್ರವನ್ನು ಒಂದು ವಾರ ಮುಂಚಿತವಾಗಿ ಫೆ.24 ರಂದು ಬಿಡುಗಡೆ ಮಾಡುತ್ತಿದ್ದಾರೆ. ಫೆ.24ರಂದು ಲಕ್ಕಿ ಜೊತೆಗೆ ಹೊಸಬರ 'ಸನಿಹ ' ಚಿತ್ರ ಕೂಡಾ ತೆರೆ ಕಾಣಲಿದೆ.
ಮಾ.2ರಂದು ಚಿತ್ರಮಂದಿರಗಳ ಸಮಸ್ಯೆ ತಪ್ಪಿಸಲು ಅಲೆಮಾರಿ ಚಿತ್ರದ ಬಿಡುಗಡೆ ಒಂದು ವಾರ ಮುಂದೂಡುವ ಸಾಧ್ಯತೆಯೂ ಇದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದೆ. ಒಟ್ಟಿನಲ್ಲಿ ವಾರಕ್ಕೆ ಮೂರು ಕನ್ನಡ ಚಿತ್ರ ಬಿಡುಗಡೆಯಾಗುವುದೆಂದರೆ ಕನ್ನಡ ಚಿತ್ರರಂಗದಲ್ಲಿ ಕಾಮನ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.