
ಕನ್ನಡ ಚಿತ್ರರಂಗದ ಮೂಲಕ ಬೆಳೆದಿರುವ ರಾಗಿಣಿ ಸಿಸಿಎಲ್ ವೇಳೆ ತೆಲುಗು ವಾರಿಯರ್ಸ್ ತಂಡದ ವೆಂಕಟೇಶ್ ಜೊತೆ ಕಾಣಿಸಿಕೊಂಡು ಅವಾಂತರ ಮಾಡಿಕೊಂಡಿದ್ದಾರೆ. ತೆಲುಗು ನಟ ವೆಂಕಟೇಶ್ ಜೊತೆ ಕುಳಿತು ತೆಲುಗು ತಂಡವನ್ನು ಹುರಿದುಂಬಿಸುತ್ತಿದ್ದರು, ಪೋರ್, ಸಿಕ್ಸ್ ಅಂತ ಅರಚುತ್ತಿದ್ದರು. ಇದು ಸಹಜವಾಗಿ ಕನ್ನಡಿಗರ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡದ ಕೆಂಗಣ್ಣಿಗೆ ಗುರಿಯಾಗಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡದ ಜತೆ ಇದ್ದ ರಾಗಿಣಿ, ಕರ್ನಾಟಕದ ತಾರೆಯರ ಬುಲ್ಡೋಜರ್ಸ್ ತಂಡವನ್ನು ಅಪ್ಪಿತಪ್ಪಿಯೂ ಮಾತಾಡಿಸಿಲ್ಲ. ತೆಲುಗು ವಾರಿಯರ್ಸ್, ಕರ್ನಾಟಕ ತಂಡದ ವಿರುದ್ಧ ಆಡಿದ ಪಂದ್ಯ ಅದಲ್ಲದೇ ಇದ್ದರೂ, ಕನ್ನಡದಲ್ಲಿ ಬೆಳೆದ ಒಬ್ಬ ನಟಿಯಾಗಿ ತೆಲುಗು ತಂಡವನ್ನು ಬೆಂಬಲಿಸುವ ಅಗತ್ಯವೇನಿತ್ತು ಅನ್ನೋದು ಎಲ್ಲರ ಪ್ರಶ್ನೆ.
ಸಿಸಿಎಲ್ ಕ್ಯಾಲೆಂಡರಿಗಾಗಿ ನಿಧಿ ಸುಬ್ಬಯ್ಯ ಮತ್ತು ಐಂದ್ರಿತಾ ರೇ ಅರೆಬೆತ್ತಲಾಗಿರುವುದನ್ನು ರಾಗಿಣಿ ಟೀಕಿಸಿದ್ದರು. ನಿಧಿ ಮತ್ತು ಐಂದ್ರಿತಾ ರಾಗಿಣಿಗೆ 'ನಿಮಗ್ಯಾಕೆ ನಮ್ಮ ಉಸಾಬರಿ, ನೀವು ಐಟಂ ಡ್ಯಾನ್ಸ್ ಮಾಡಿಕೊಂಡಿರಿ" ಎಂದು ಟೀಕಿಸಿದ್ದರು. ಈ ವರ್ಷ ರಾಗಿಣಿಯನ್ನು ಸಿಸಿಎಲ್ ತನ್ನ ರಾಯಭಾರಿಯನ್ನಾಗಿ ಮಾಡಿಕೊಂಡಿಲ್ಲ. ಹೀಗಾಗಿ ರಾಗಿಣಿ ಈ ರೀತಿ ಸೇಡು ತೀರಿಸಿಕೊಂಡಿಬಹುದು ಎಂಬುದು ಹಲವರ ಅಭಿಪ್ರಾಯ. ಮುಂದಿನ ಪುಟ ನೋಡಿ....
ಭಾನುವಾರ ಬೆಂಗಳೂರಿನಲ್ಲಿ ನಡೆದ ಸಿಸಿಎಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡದ ಜತೆ ಇದ್ದ ರಾಗಿಣಿ, ಕರ್ನಾಟಕದ ತಾರೆಯರ ಬುಲ್ಡೋಜರ್ಸ್ ತಂಡವನ್ನು ಅಪ್ಪಿತಪ್ಪಿಯೂ ಮಾತಾಡಿಸಿಲ್ಲ. ತೆಲುಗು ವಾರಿಯರ್ಸ್, ಕರ್ನಾಟಕ ತಂಡದ ವಿರುದ್ಧ ಆಡಿದ ಪಂದ್ಯ ಅದಲ್ಲದೇ ಇದ್ದರೂ, ಕನ್ನಡದಲ್ಲಿ ಬೆಳೆದ ಒಬ್ಬ ನಟಿಯಾಗಿ ತೆಲುಗು ತಂಡವನ್ನು ಬೆಂಬಲಿಸುವ ಅಗತ್ಯವೇನಿತ್ತು ಅನ್ನೋದು ಎಲ್ಲರ ಪ್ರಶ್ನೆ.
ಸಿಸಿಎಲ್ ಕ್ಯಾಲೆಂಡರಿಗಾಗಿ ನಿಧಿ ಸುಬ್ಬಯ್ಯ ಮತ್ತು ಐಂದ್ರಿತಾ ರೇ ಅರೆಬೆತ್ತಲಾಗಿರುವುದನ್ನು ರಾಗಿಣಿ ಟೀಕಿಸಿದ್ದರು. ನಿಧಿ ಮತ್ತು ಐಂದ್ರಿತಾ ರಾಗಿಣಿಗೆ 'ನಿಮಗ್ಯಾಕೆ ನಮ್ಮ ಉಸಾಬರಿ, ನೀವು ಐಟಂ ಡ್ಯಾನ್ಸ್ ಮಾಡಿಕೊಂಡಿರಿ" ಎಂದು ಟೀಕಿಸಿದ್ದರು. ಈ ವರ್ಷ ರಾಗಿಣಿಯನ್ನು ಸಿಸಿಎಲ್ ತನ್ನ ರಾಯಭಾರಿಯನ್ನಾಗಿ ಮಾಡಿಕೊಂಡಿಲ್ಲ. ಹೀಗಾಗಿ ರಾಗಿಣಿ ಈ ರೀತಿ ಸೇಡು ತೀರಿಸಿಕೊಂಡಿಬಹುದು ಎಂಬುದು ಹಲವರ ಅಭಿಪ್ರಾಯ. ಮುಂದಿನ ಪುಟ ನೋಡಿ....
















