
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಗಿಣಿ " ತೆಲುಗು ವಾರಿಯರ್ಸ್ ಸಿಸಿಎಲ್ ಪಂದ್ಯಕ್ಕೆ ಬರುವಂತೆ ವೆಂಕಟೇಶ್ ನನ್ನನ್ನು ಹಲವು ಬಾರಿ ಕರೆದಿದ್ದರು. ಈ ಹಿಂದೆ ಹೋಗಲು ಆಗಿರಲಿಲ್ಲ. ಇಂದು ಬಿಡುವು ಮಾಡಿಕೊಂಡು ಬಂದಿದ್ದೇನೆ. ಆದರೆ ನಾನು ಹೋಗಿರುವುದು ತೆಲುಗು ತಂಡವನ್ನು ಬೆಂಬಲಿಸಲಿಕ್ಕಲ್ಲ" ಎಂದಿದ್ದಾರೆ.
ನಂತರ ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೆ ಎಂಬುದನ್ನರಿತ ರಾಗಿಣಿ, ಕರ್ನಾಟಕ ತಂಡವನ್ನು ಸೇರಿಕೊಂಡರು. ತೆಲುಗು ವಾರಿಯರ್ಸ್ ಮತ್ತು ಬೆಂಗಾಲ್ ಟೈಗರ್ಸ್ ಪಂದ್ಯ ಮುಗಿದ ನಂತರ ಆರಂಭವಾದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಮುಂಬೈ ಹೀರೋಸ್ ಪಂದ್ಯದ ಸಂದರ್ಭದಲ್ಲಿ ರಾಗಿಣಿ ಕರ್ನಾಟಕ ಗ್ಯಾಲರಿ ಸೇರಿಕೊಂಡರು.
ಕರ್ನಾಟಕ ತಂಡಕ್ಕೆ ನಿಷ್ಠೆ ತೋರಿಸುತ್ತಿಲ್ಲ ಎಂಬ ಆರೋಪಗಳ ನಡುವೆಯೂ ಅವರು ಕಿಚ್ಚ ಸುದೀಪ್ ತಂಡವನ್ನು ಹುರಿದುಂಬಿಸಿದರು. ಸ್ವತಃ ಐಂದ್ರಿತಾ ಜತೆಗೇ ರಾಗಿಣಿ ಕೂಡ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಕರ್ನಾಟಕ ತಂಡದ ಪಂದ್ಯ ಮುಗಿಯುವವರೆಗೂ ರಾಗಿಣಿ ಕನ್ನಡಿಗರು ಕುಳಿತ ಗ್ಯಾಲರಿಯಲ್ಲೇ ಕುಳಿತಿದ್ದರು. ಈಗ ಎಲ್ಲದಕ್ಕೂ ರಾಗಿಣಿಯ ಮುಂದಿನ ನಡೆ ಉತ್ತರವಾಗಲಿದೆ. (ಒನ್ ಇಂಡಿಯಾ ಕನ್ನಡ)
ನಂತರ ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೆ ಎಂಬುದನ್ನರಿತ ರಾಗಿಣಿ, ಕರ್ನಾಟಕ ತಂಡವನ್ನು ಸೇರಿಕೊಂಡರು. ತೆಲುಗು ವಾರಿಯರ್ಸ್ ಮತ್ತು ಬೆಂಗಾಲ್ ಟೈಗರ್ಸ್ ಪಂದ್ಯ ಮುಗಿದ ನಂತರ ಆರಂಭವಾದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಮುಂಬೈ ಹೀರೋಸ್ ಪಂದ್ಯದ ಸಂದರ್ಭದಲ್ಲಿ ರಾಗಿಣಿ ಕರ್ನಾಟಕ ಗ್ಯಾಲರಿ ಸೇರಿಕೊಂಡರು.
ಕರ್ನಾಟಕ ತಂಡಕ್ಕೆ ನಿಷ್ಠೆ ತೋರಿಸುತ್ತಿಲ್ಲ ಎಂಬ ಆರೋಪಗಳ ನಡುವೆಯೂ ಅವರು ಕಿಚ್ಚ ಸುದೀಪ್ ತಂಡವನ್ನು ಹುರಿದುಂಬಿಸಿದರು. ಸ್ವತಃ ಐಂದ್ರಿತಾ ಜತೆಗೇ ರಾಗಿಣಿ ಕೂಡ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಕರ್ನಾಟಕ ತಂಡದ ಪಂದ್ಯ ಮುಗಿಯುವವರೆಗೂ ರಾಗಿಣಿ ಕನ್ನಡಿಗರು ಕುಳಿತ ಗ್ಯಾಲರಿಯಲ್ಲೇ ಕುಳಿತಿದ್ದರು. ಈಗ ಎಲ್ಲದಕ್ಕೂ ರಾಗಿಣಿಯ ಮುಂದಿನ ನಡೆ ಉತ್ತರವಾಗಲಿದೆ. (ಒನ್ ಇಂಡಿಯಾ ಕನ್ನಡ)
















