ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು 'ಶೈಲೂ' ಚಿತ್ರ ಕೈಹಿಡಿದೆ, ಹಾಗೆಯೇ ನಿರ್ಮಾಪಕ ಕೊಬ್ರಿ ಮಂಜು ಅವರನ್ನು. 'ಶೈಲೂ' ಚಿತ್ರ ರು.50 ಲಕ್ಷ ಪ್ರಾಫಿಟ್ ಮಾಡಿದೆ ಮಂಜು ಪ್ರಕಟಿಸಿದ್ದಾರೆ. ಡಾ.ವಿಷ್ಣುವರ್ಧನ್ ಮುಖ್ಯಭೂಮಿಕೆಯಲ್ಲಿದ್ದ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ ಮಂಜಣ್ಣನಿಗೆ ರು. 2 ಕೋಟಿ ಲುಕ್ಸಾನ್ ಮಾಡಿತ್ತಂತೆ.
ಆದರೆ ಈ ಮಾತನ್ನು ಮಾತಾಡ್ ಮಾತಾಡ್ ಮಲ್ಲಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸುತಾರಾಂ ಒಪ್ಪಲ್ಲ. ನಷ್ಟದ ಮಾತನ್ನು ಒಪ್ಪುತ್ತಾರಾದರೂ, ಮಂಜಣ್ಣನ ಲೆಕ್ಕವನ್ನು ಮಾತ್ರ ಒಪ್ಪಲ್ಲ ಎನ್ನುತ್ತಾರೆ ಒಲವೇ ಜೀವನ ಲೆಕ್ಕಾಚಾರದ ನಿರ್ದೇಶಕರು.
'ಶೈಲೂ' ಚಿತ್ರದ ಕಲೆಕ್ಷನ್ಗೆ ಸುದೀಪ್ ಅವರ 'ವಿಷ್ಣುವರ್ಧನ' ಚಿತ್ರ ಎಲ್ಲಿ ಹೊಡೆತ ನೀಡುತ್ತದೋ ಎಂಬ ಭಯ ಮಂಜಣ್ಣನ್ನು ಕಾಡುತ್ತಿತ್ತಂತೆ. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು ಮಂಜಣ್ಣ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ನೆಲಕಚ್ಚಿದ್ದ ಗೋಲ್ಡನ್ ಸ್ಟಾರ್ ಕೆರೀರ್ ಗ್ರಾಫ್ ಕೊಂಚ ಚೇತರಿಸಿಕೊಂಡಂತಾಗಿದೆ. (ಏಜೆನ್ಸೀಸ್)
ಆದರೆ ಈ ಮಾತನ್ನು ಮಾತಾಡ್ ಮಾತಾಡ್ ಮಲ್ಲಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸುತಾರಾಂ ಒಪ್ಪಲ್ಲ. ನಷ್ಟದ ಮಾತನ್ನು ಒಪ್ಪುತ್ತಾರಾದರೂ, ಮಂಜಣ್ಣನ ಲೆಕ್ಕವನ್ನು ಮಾತ್ರ ಒಪ್ಪಲ್ಲ ಎನ್ನುತ್ತಾರೆ ಒಲವೇ ಜೀವನ ಲೆಕ್ಕಾಚಾರದ ನಿರ್ದೇಶಕರು.
'ಶೈಲೂ' ಚಿತ್ರದ ಕಲೆಕ್ಷನ್ಗೆ ಸುದೀಪ್ ಅವರ 'ವಿಷ್ಣುವರ್ಧನ' ಚಿತ್ರ ಎಲ್ಲಿ ಹೊಡೆತ ನೀಡುತ್ತದೋ ಎಂಬ ಭಯ ಮಂಜಣ್ಣನ್ನು ಕಾಡುತ್ತಿತ್ತಂತೆ. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು ಮಂಜಣ್ಣ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ನೆಲಕಚ್ಚಿದ್ದ ಗೋಲ್ಡನ್ ಸ್ಟಾರ್ ಕೆರೀರ್ ಗ್ರಾಫ್ ಕೊಂಚ ಚೇತರಿಸಿಕೊಂಡಂತಾಗಿದೆ. (ಏಜೆನ್ಸೀಸ್)

















