'ಕದ್ದು ಮುಚ್ಚಿ' ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಚಿತ್ರ ಹೆಸರನ್ನೂ ಇಡುವ ಮೂಲಕ ದಯಾಳ್ ಮತ್ತೊಮ್ಮೆ ಗಾಂಧಿನಗರದ ಗಮನಸೆಳೆದಿದ್ದಾರೆ. ಚಿತ್ರದ ಹೆಸರು 'ಒಂದು ರೂಪಾಯಲ್ಲಿ ಎರಡು ಪ್ರೀತಿ'.
ಈ ಚಿತ್ರ ಶುಕ್ರವಾರ (ಜ.27) ಸೆಟ್ಟೇರಲಿದೆ. ವಿಜಯ ರಾಘವೇಂದ್ರ ಹಾಗೂ ರಮ್ಯಾ ಬಾರ್ನಾ ಪ್ರಮುಖ ಪಾತ್ರಧಾರಿಗಳು. ಸಂದೀಪ್ ಎಂಬ ಹೊಸಬರು ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ತ್ರಿಕೋನ ಪ್ರೇಮಕತೆ. A di-angular lovable story ಎಂಬುದು ಚಿತ್ರದ ಅಡಿಬರಹ.
ಅಶ್ವಥ್ ರೆಡ್ಡಿ ಹಾಗೂ ಲೋಕೇಶ್ ರೆಡ್ದಿ ಎಂಬುವವರು ನಿರ್ಮಾಪಕರು. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ದಯಾಲ್ ಪದ್ಮನಾಭನ್. ಸಂಗೀತ ರಿಕ್ಕಿ ಕೇಜ್, ಛಾಯಾಗ್ರಹಣ ಬಿ ರಾಜೇಶ್, ಸಾಹಸ ರವಿವರ್ಮ. ಈ ಚಿತ್ರಕ್ಕೆ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ನೀಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)
ಈ ಚಿತ್ರ ಶುಕ್ರವಾರ (ಜ.27) ಸೆಟ್ಟೇರಲಿದೆ. ವಿಜಯ ರಾಘವೇಂದ್ರ ಹಾಗೂ ರಮ್ಯಾ ಬಾರ್ನಾ ಪ್ರಮುಖ ಪಾತ್ರಧಾರಿಗಳು. ಸಂದೀಪ್ ಎಂಬ ಹೊಸಬರು ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ತ್ರಿಕೋನ ಪ್ರೇಮಕತೆ. A di-angular lovable story ಎಂಬುದು ಚಿತ್ರದ ಅಡಿಬರಹ.
ಅಶ್ವಥ್ ರೆಡ್ಡಿ ಹಾಗೂ ಲೋಕೇಶ್ ರೆಡ್ದಿ ಎಂಬುವವರು ನಿರ್ಮಾಪಕರು. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ದಯಾಲ್ ಪದ್ಮನಾಭನ್. ಸಂಗೀತ ರಿಕ್ಕಿ ಕೇಜ್, ಛಾಯಾಗ್ರಹಣ ಬಿ ರಾಜೇಶ್, ಸಾಹಸ ರವಿವರ್ಮ. ಈ ಚಿತ್ರಕ್ಕೆ ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ನೀಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

















