Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಶತದಿನೋತ್ಸವ ಸಮಾರಂಭದಲ್ಲಿ ಸುದೀಪ್
ಸ್ಯಾಂಡಲ್ ವುಡ್ ನಲ್ಲಿ ಈ ವರ್ಷದ ಮೊದಲ ಶತದಿನೋತ್ಸವ ಸಮಾರಂಭ 'ಸಾರಥಿ' ಚಿತ್ರದ ಮೂಲಕ ನಡೆಯಿತು. ನಿನ್ನೆ (ಜನವರಿ 16, 2012) ಬೆಂಗಳೂರಿನ ವಿಜಯನಗರದ 'ಬಂಟರ ಸಂಘ'ದಲ್ಲಿ ಸಾರಥಿ ಚಿತ್ರದ ನಿರ್ಮಾಪಕ ಕೆ ವಿ ಸತ್ಯಪ್ರಕಾಶ್, ಗೆಲುವಿಗೆ ಕಾರಣಕರ್ತರಾದ ಚಿತ್ರತಂಡದ ಎಲ್ಲ ಸದಸ್ಯರನ್ನು ವೇದಿಕೆಗೆ ಕರೆದು ಸನ್ಮಾನಿಸುವ ಮೂಲಕ ಸಂಭ್ರಮಿಸಿದರು.
ದರ್ಶನ್ ಜೊತೆ ಕಿಚ್ಚ ಸುದೀಪ್ ಕೂಡ ವೇದಿಕೆಯಲ್ಲಿದ್ದದ್ದು ಹೆಚ್ಚಿನ ರೋಮಾಂಚನಕ್ಕೆ ಕಾರಣವಾಯಿತು. ನಿರ್ದೇಶಕ, ದರ್ಶನ್ ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ತಾಯಿ ಮೀನಾ ತೂಗುದೀಪ ಕೂಡ ಸಮಾರಂಭದಲ್ಲಿ ಹಾಜರಾಗಿದ್ದು ವಿಶೇಷವೆನಿಸಿತು. ಜೊತೆಗೆ ನಟ ಶರತ್ ಕುಮಾರ್ ಹಾಜರಿದ್ದರು. ಸುದೀಪ್, ಬಹಳಷ್ಟು ಮಂದಿಗೆ ನೆನಪಿನ ಕಾಣಿಕೆ ನೀಡಿ ಚಿತ್ರತಂಡಕ್ಕೆ ವಿಶೇಷ ವ್ಯಕ್ತಿ ಎನಿಸಿದರು.
ಚಿತ್ರದ ನಾಯಕಿ ದೀಪಾ ಸನ್ನಿಧಿ ಕೂಡ ಆಗಮಿಸಿ ವೇದಿಕೆಗೆ ಗ್ಲಾಮರ್ ಕಳೆ ನೀಡಿದರು. ನಟಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿದ್ದು ಸಹಜವಾಗಿಯೇ ದೀಪಾಗೆ ಖುಷಿತಂದಿತ್ತು. ಖುಷಿಖುಷಿಯಾಗಿ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದ ದೀಪಾ, ಹೆಚ್ಚೇನೂ ಮಾತನಾಡಲಿಲ್ಲ. ಒಟ್ಟಿನಲ್ಲಿ ಎರಡು ಸಾರಿ ಮುಂದೂಡಲ್ಪಟ್ಟಿದ್ದ ಸಾರಥಿ ಶತದಿನೋತ್ಸವ ಸಮಾರಂಭ ಕೊನೆಗೂ ನಡೆದು ಚಿತ್ರತಂಡ ಧನ್ಯತಾಭಾವ ಅನುಭವಿಸಿತು. (ಒನ್ ಇಂಡಿಯಾ ಕನ್ನಡ)