Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣುವರ್ಧನ ಯಶಸ್ಸಿಗೆ ಸುದೀಪ್ ಕಾರಣ: ದ್ವಾರಕೀಶ್
ಸ್ಯಾಂಡಲ್ ವುಡ್ ನಲ್ಲೀಗ ವಿಷ್ಣುವರ್ಧನ ಚಿತ್ರದ್ದೇ ಸುದ್ದಿ. ಕಾರಣ, ಬಿಡುಗಡೆಯಾಗಿ ಒಂದು ವಾರಕ್ಕಿಂತ ಮೊದಲೇ ಬರೋಬ್ಬರಿ ಆರು ಕೋಟಿ ವ್ಯಾಪಾರ ಮಾಡಿ ನಿರ್ಮಾಪಕ ದ್ವಾರಕೀಶ್ ಜೇಬು ತುಂಬಿಸಿದೆ ಈ ಚಿತ್ರ. ಸಿನಿಮಾವೊಂದನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಆಕರ್ಷಕ ಟೈಟಲ್ ಕೊಟ್ಟು ಪ್ರೇಕ್ಷಕರ ಮುಂದಿಟ್ಟರೆ ಸಕ್ಸಸ್ ಗ್ಯಾರಂಟಿ ಎಂಬುದನ್ನು ವಿಷ್ಣುವರ್ಧನ ನಿರೂಪಿಸಿದೆ.
ಸಕ್ಸಸ್ ನಿಂದ ಸಖತ್ ಖುಷಿಯಾಗಿದ್ದಾರೆ ದ್ವಾರಕೀಶ್. ಈ ಎಲ್ಲಾ ಯಶಸ್ಸಿಗೆ ಕಾರಣ ಸುದೀಪ್ ಅಂದಿದ್ದಾರೆ ದ್ವಾರ್ಕಿ. ಕಥೆ, ಚಿತ್ರಕಥೆ, ಸಂಭಾಷಣೆ ಅಲ್ಲದೇ ಶೀರ್ಷಿಕೆ, ಹೀಗೆ ಎಲ್ಲಾ ವಿಷಯಗಳಲ್ಲಿ ತನ್ನದೇ ಚಿತ್ರ ಎನ್ನುವಂತೆ ನಟ ಸುದೀಪ್ ಇನ್ವಾಲ್ವ್ ಆಗಿದ್ದರು. ಹಾಗಾಗಿಯೇ ಚಿತ್ರ ಈ ಮಟ್ಟಿಗೆ ಯಶಸ್ವಿಯಾಗಿದೆ" ಎಂದಿದ್ದಾರೆ.
ಸುದೀಪ್ ಇಲ್ಲದಿದ್ದರೆ ಚಿತ್ರಕ್ಕೆ ಈ ಪರಿ ಭರ್ಜರಿ ಓಪನಿಂಗ್ ಸಿಗುತ್ತಿರಲಿಲ್ಲ. ಜೊತೆಗೆ ಖುಷಿಖುಷಿಯಾಗಿ ನಟಿಸಿರುವ ಭಾವನಾ ಮತ್ತು ಬೋಲ್ಡ್ ಆಗಿ ನಟಿಸಿರುವ ಪ್ರಿಯಾಮಣಿಗೂ ಇದರಲ್ಲಿ ಕ್ರೆಡಿಟ್ ಇದೆ" ಎಂದಿದ್ದಾರೆ. ಒಟ್ಟಿನಲ್ಲಿ ಸುದೀಪ್ ಮಹಿಮೆಯೋ, ವಿಷ್ಣುವರ್ಧನ್ ಶೀರ್ಷಿಕೆಯ ಮ್ಯಾಜಿಕ್ಕೋ, ವಿಷ್ಣುವರ್ಧನ್ ಚಿತ್ರ ಮಾತ್ರ ನಿರಂತರವಾಗಿ ನಿರಾತಂಕವಾಗಿ ದಿನದಿಂದ ದಿನಕ್ಕೆ ಹೆಚ್ಚು ಗಳಿಸುತ್ತಿದೆ. (ಒನ್ ಇಂಡಿಯಾ ಕನ್ನಡ)