Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಡ್ನಿ, ಲಿವರ್, ಹೃದಯ ಬಿಕಿರಿಗಿಟ್ಟ ಹರೀಶ್ ರಾಜ್
ಚಿತ್ರದ ನಿರ್ಮಾಪಕ ಎಂ ಮುರಳಿ ಅವರು ಹರೀಶ್ ಅವರನ್ನು ಹಣ ಕೇಳಿದರಂತೆ. ಅದಕ್ಕೆ ಹರೀಶ್ ರಾಜ್ ಹೇಳಿದ್ದೇನೆಂದರೆ; ಕಿಡ್ನಿ, ಹೃದಯ, ಲಿವರ್ ಏನೂ ಬೇಕಾದ್ರು ತಗೊಳ್ಳಿ ಆದರೆ ನಯಾ ಪೈಸೆ ಹಣವೂ ನನ್ನಲ್ಲಿಲ್ಲ ಎಂದಿದ್ದಾರೆ. 'ಗನ್' ಚಿತ್ರಕ್ಕೆ ಮುರಳಿ ಸಾಲ ಕೊಟ್ಟಿದ್ದರು. ಆದರೆ 'ಗನ್' ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿ ಹರೀಶ್ ರಾಜ್ ಕೂಡ ರಗ್ಗು ಹೊದ್ದು ಮಲಗುವಂತಾಗಿತ್ತು.
ಏತನ್ಮಧ್ಯೆ ಹರೀಶ್ ರಾಜ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದರು. ಅದೇನಪ್ಪಾ ಅಂದ್ರೆ 'ಗನ್' ಚಿತ್ರದ ಹಕ್ಕುಗಳನ್ನು ಆ ಚಿತ್ರದ ನಿರ್ಮಾಪಕರಿಗೆ ಗೊತ್ತಿಲ್ಲದಂತೆ ಮಾರಾಟ ಮಾಡಲು ಹೊರಟಿದ್ದು. ಈ ಸಂಬಂಧ ಹರೀಶ್ ರಾಜ್ ಅವರನ್ನುಹೈಗ್ರೌಂಡ್ ಠಾಣೆಯ ಪೊಲೀಸರು ಬಂಧಿಸಿದ್ದರು.
ಈಗ ಸಾಲ ತೀರಿಸಲು ಮುಂದಾಗಿರುವ ಹರೀಶ್ ಕಾಲ್ಸೆಂಟರ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರಂತೆ. ಆದರೆ ಮುರಳಿ ಮಾತ್ರ ಹರೀಶ್ ಬೆನ್ನ ಹಿಂದೆ ಬಿದ್ದಿದ್ದು ಸಾಲ ತೀರಿಸುವಂತೆ ದುಂಬಾಲು ಬಿದ್ದಿದ್ದಾರಂತೆ. ಮುರಳಿ ಅವರ ಕಿರಿಕಿರಿಗೆ ಸೋತು ಸುಣ್ಣವಾಗಿರುವ ಹರೀಶ್ ನನ್ನ ಬಳಿ ಹಣವಿಲ್ಲ. ಬೇಕಾದರೆ ಕಣ್ಣು, ಲಿವರ್, ಹೃದಯ, ಕಿಡ್ನಿ ತೆಗೆದುಕೊಳ್ಳಿ ಎಂದು ಹತಾಶೆಯಿಂದ ಹೇಳಿದ್ದಾರಂತೆ. (ಏಜೆನ್ಸೀಸ್)