Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದರ್ಶನ್ ವಿವಾದ : ಚುರುಮುರಿ ಕಾಮೆಂಟ್ಸ್
ಸೆಲೆಬ್ರಿಟಿ(ಸಿನೆಮಾ ತಾರೆ)ಗಳ ಜೀವನದಲ್ಲಿ ಎಂತಹುದೇ ಅವಘಡ ಸಂಭವಿಸಿದಲ್ಲಿ ನಮ್ಮ ಸಮಾಜ ಹೇಗೆ ವರ್ತಿಸುತ್ತದೆ ಎನ್ನುವುದಕ್ಕೆ ಕನ್ನಡ ನಟ ದರ್ಶನ್ ಘಟನೆಯೇ ಒಂದು ತಾಜಾ ಉದಾಹರಣೆ. ಆತನ ಫ್ಯಾನ್ ಗಳು ನಡೆದುಕೊಂಡ ರೀತಿ, ಉಳಿದ ಸಿನೆಮಾ ತಾರೆಯರು ನೀಡಿದ ಹೇಳಿಕೆಗಳು, ಜೈಲಧಿಕಾರಿಗಳು, ವೈದ್ಯರು ನೀಡುತ್ತಿರುವ ಸರ್ಟಿಫಿಕೇಟುಗಳು, ನಿರ್ಮಾಪಕರ ಸಂಘ ಕೈಗೊಂಡ ಕ್ರಮ ಒಂದೊಂದು ಹೊಸ ಕಥೆಗಳನ್ನು ಹೇಳುತ್ತವೆ.
ಇದೆಲ್ಲ ಒಂದೆಡೆಯಾದರೆ ಏನೂ ನಡೆದೇ ಇಲ್ಲ ಎಂದು ಹೇಳಿ 'ಸತ್ಯ'ದ ತಲೆಯ ಮೇಲೆ ಗುದ್ದಿದಂತೆ 'ಸುಳ್ಳು' ಹೇಳಿ ಸತಿ ಸಾವಿತ್ರಿ ಪಟ್ಟಕ್ಕೇರಿದ ದರ್ಶನ್ ಹೆಂಡತಿ ವಿಜಯಲಕ್ಷ್ಮಿಯದು ಇನ್ನೊಂದು ಗೊಳಿನ ಕಥೆ. ಆಡುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ ಎಂಬಂತಹ ವಿಚಿತ್ರ ಸಂದಿಗ್ಧತೆಯಲ್ಲಿ ಆಕೆ ಸಿಲುಕಿರುವುದು ಸತ್ಯ. ಈ ನಡುವೆ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ನಿರ್ಮಾಪಕರ ಸಂಘ ದರ್ಶನ್ 'ಗೆಳತಿ' ನಿಖಿತಾ ವಿರುದ್ಧ ಮೂರು ವರ್ಷ ನಿಷೇಧ ಹೇರಿದ್ದು ನಾಚಿಕೆಗೇಡಿನ ಸಂಗತಿ.
ದರ್ಶನ್ ಗೆ ಚಾಲೇಂಜಿಂಗ್ ಸ್ಟಾರ್ ಎಂಬ ಬಿರುದು ಹೇಗೆ ಬಂತೋ ಗೊತ್ತಿಲ್ಲ. ಆದರೂ ದರ್ಶನ್ ಅಭಿಮಾನಿಗಳು ಅಂದಿನಿಂದ ಇಂದಿನವರೆಗೆ ನಡೆದುಕೊಳ್ಳುತ್ತಿರುವ ರೀತಿ ಮತ್ತು ಅದನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಚಾಲೇಂಜಿಂಗ್ ವಿಷಯವೆ. ನಾಲಾರು ಸರಕಾರಿ ಬಸ್ಸುಗಳು ಕಲ್ಲುಗಳಿಗೆ ಗುರಿಯಾದವು, ಅನೇಕ ವಾಹನಗಳು ಜಖಂ ಆದವು, ಕೆಲವರು ಕೈಯಲ್ಲಿ ಕರ್ಪೂರದಾರತಿ ಹಚ್ಚಿದರು, ಹಲವರು ಆಸ್ಪತ್ರೆ ಎದುರಿಗೇ ಠಿಕಾಣಿ ಹೂಡಿದರು. ಅವರು ಮಾಡಿರುವ ನಷ್ಟಗಳಿಗೆ ಯಾರು ಹೊಣೆ? ದರ್ಶನ್ ಜವಾಬ್ದಾರಿ ಹೊರುವರೆ?
ದರ್ಶನ್ ಮುಂದೆ ಹೇಗೆ ಆದರ್ಶವಾಗಿ ಜೀವನ ನಡೆಸಬೇಕು? ನೊಂದಿರುವ ಜೀವಿ ವಿಜಯಲಕ್ಷ್ಮಿ ಏನು ಮಾಡಬೇಕು? ಅಭಿಮಾನಿಗಳು ಇನ್ನೂ ಮುಂದೆ ಯಾವ ರೀತಿ ವರ್ತಿಸಬೇಕು? ಚಿತ್ರರಂಗ ಹೇಗೆ ಅನ್ಯಾಯವಾದವರಿಗೆ ನ್ಯಾಯ ದೊರಕಿಸಿಕೊಡಬೇಕು? ಇಂತಹ ಘಟನೆಗಳಿಗೆ ಸಮಾಜದ ಪ್ರತಿಕ್ರಿಯೆ ಹೇಗೆ ಆರೋಗ್ಯಕರವಾಗಿರಬೇಕು? ನಾವೇನೇ ಅಂದುಕೊಂಡರೂ ಮುಂದೆ ಏನಾಗುತ್ತದೆ? ಎಂಬುದಕ್ಕೆ ಚುರುಮುರಿ ಬ್ಲಾಗಿನಲ್ಲಿ ನಾಸ್ತಿಕ ಅವರು ಬರೆದಿರುವ ಕಾಮೆಂಟ್ ಕನ್ನಡಿ ಹಿಡಿಯುತ್ತದೆ.
A follow up in any healthy society would be,
1)
Vijayalakshmi
continue
her
fight
for
justice.
2)
Nikita
to
file
a
legal
case
against
Karnataka
film
producers,
for
preventing
her
from
earning
her
livelihood
(guaranteed
by
Constitution).
3)
Rest
of
the
people
act
disinterested
(Note:
not
uninterested,
but
disinterested)
and
mind
their
business.
But in our society, this will happen:
1)
Vijayalakshmi
withdraws
her
complaint.
2)
Prosecution
drops
all
charges.
3)
Darshan
walks
free
and
declares
Nikita
is
innocent.
4)
Karnataka
film
producers
lift
ban
on
Nikita.
5)
Things
go
on
as
if
nothing
as
happened.
6)
And
few
like
me
(with
some
decent
public
memory),
will
never
watch
any
Darshan
movie
in
future.
[ದರ್ಶನ್
ಕರ್ಮಕಾಂಡದ
ಇತ್ತೀಚಿನ
ಸುದ್ದಿಗಳು]