Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕಿ ಚಿತ್ರಾ ಮಗಳ ದುರಂತ ಸಂಭವಿಸಿದ್ದಾದರೂ ಹೇಗೆ?
ಮಕ್ಕಳು ಎಂದ ಮೇಲೆ ಕೊಂಚ ಮೈಮರೆತರೂ ಏನೋ ಒಂದು ಆಪತ್ತು ತಂದುಕೊಂಡಿರುತ್ತವೆ. ಚಿತ್ರಾ ಅವರ ಚಿನ್ನುಮರಿಗೆ ಹಾಗಿದ್ದೂ ಹಾಗೆ. ನಂದನಾ ಹುಟ್ಟಿನಿಂದಲೇ ಡೌನ್ಸ್ ಸಿಂಡ್ರೋಮ್ನಿಂದ(ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳಿಸುವ ಕಾಯಿಲೆ) ಬಳಲುತ್ತಿದ್ದಳು. ಈ ಮಗುವನ್ನು ಚಿತ್ರಾ ದಂಪತಿಗಳು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರೂ. ಹಾಗಿದ್ದೂ ಈ ದುರಂತ ಸಂಭವಿಸಿಬಿಟ್ಟಿದೆ.
ಚಿತ್ರಾ ದಂಪತಿಗಳು ಎಲ್ಲಿಗೇ ಹೋಗಲಿ ತಮ್ಮಂದೊಂದಿಗೆ ನಂದನಾಳನ್ನೂ ಕರೆದೊಯ್ಯುತ್ತಿದ್ದರು. ಮುಖ್ಯವಾಗಿ ವಿದೇಶಗಳಿಗೆ ಹೋದರೂ ನಂದನಾರನ್ನು ಜೊತೆಗೇ ಕರೆದೊಯ್ಯುತ್ತಿದ್ದರು. ಗುರುವಾರ ಬೆಳಗ್ಗೆ ಹಾಡಿನ ರಿಹರ್ಸಲ್ಗೆಂದು ಸಿದ್ಧತೆಗಳನ್ನು ಮಾಡಿಕೊಂಡು ಇನ್ನೇನು ಹೊರಡಬೇಕು ಎಂದಿರುವಾಗ ನಂದನಾ ಕಾಣಿಸಲಿಲ್ಲ. ಕಂಗಾಲಾದ ಪೋಷಕರು ಮನೆಯ ಒಳಗೆ, ಹೊರಗೆಲ್ಲಾ ಹುಡುಕಿದರು. ಬಳಿಕ ನಂದನಾ ಮನೆಯ ಆವರಣದ ಈಜು ಕೊಳಕ್ಕೆ ಬಿದ್ದುರುವುದನ್ನು ಗಮನಿಸಿ ತಕ್ಷಣ ಆಕೆಯನ್ನು ನೀರಿನಿಂದ ಹೊರಗೆ ತಂದರಾದರೂ ಅಷ್ಟರಲ್ಲಾಗಲೆ ಪ್ರಾಣಪಕ್ಷಿ ಹಾರಿಹೋಗಿತ್ತು.
ಪುಟ್ಟಪರ್ತಿ ಸಾಯಿಬಾಬಾ ಭಕ್ತರಾದಚಿತ್ರಾ ಮತ್ತು ವಿಜಯಶಂಕರ್ ದಂಪತಿಗಳಿಗೆ 15 ವರ್ಷಗಳ ಬಳಿಕ ನಂದನಾ ಜನಿಸಿದ್ದರು. ಚೆನ್ನೈನಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿರುವ ಚಿತ್ರಾ ದಂಪತಿಗಳು ಶೀಘ್ರದಲ್ಲೇ ಅಲ್ಲಿಗೆ ಹೋಗುವ ಆಲೋಚನೆಯಲ್ಲಿದ್ದರು. ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಅಚಾನಕ್ಕಾಗಿ ಈ ರೀತಿಯ ಘಟನೆಗಳು ಸಂಭವಿಸಿಬಿಡುತ್ತವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಆದಷ್ಟು ಜಾಗ್ರತ್ತೆ ವಹಿಸಲಿ ಎಂಬುದೇ ನಮ್ಮ ಉದ್ದೇಶ.