Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೂ' ನಿರ್ಮಾಪಕ ದಿನೇಶ್ ಗಾಂಧಿ ಈಗ ಹೀರೋ
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟನಾಗಿ ಅಭಿನಯಿಸಿದ ಹೂ ಚಿತ್ರದಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ಈಗ ಸ್ವತಃ ತಾವೇ ಅಭಿನಯಿಸಲು ಮುಂದಾಗಿದ್ದಾರೆ. ದಿನೇಶ್ ಬಣ್ಣ ಹಚ್ಚಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗಲಿದೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ವಾಸು.
ಆದರೆ ಈ ಬಾರಿ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಎಂ ಜಿ ರಾಮಮೂರ್ತಿ ಅವರಿಗೆ ವಹಿಸಿದ್ದಾರೆ. ಈ ಹಿಂದೆಯೂ ದಿನೇಶ್ ಗಾಂಧಿ ಬಣ್ಣ ಹಚ್ಚಿಕೊಂಡಿದ್ದರು. ಆದರೆ ಅವೆಲ್ಲಾ ಕಾಂಜಿ ಪಿಂಜಿ ಪಾತ್ರಗಳು. ಚೆಲುವೆ, ವೀರ ಮದಕರಿ, ಮಲ್ಲಿಕಾರ್ಜುನ ಚಿತ್ರಗಳಲ್ಲಿ ದಿನೇಶ್ ಗಾಂಧಿ ಅಭಿನಯಿಸಿದ್ದಾರೆ.
ವೀರ ಮದಕರಿ ಬಳಿಕ ದಿನೇಶ್ ಗಾಂಧಿ ನಿರ್ಮಿಸಿದ ಹೂ ಚಿತ್ರ ಬಾಕ್ಸಾಫೀಸಲ್ಲಿ ಸಕ್ಸಸ್ ಆಗಿತ್ತು. ಹೂ ಚಿತ್ರದ ವಿಮರ್ಶೆಯನ್ನು 'ಸರಿಯಾಗಿ ಬರೆದಿಲ್ಲ' ಎಂದು ಬೆಂಗಳೂರು ಮಿರರ್ ಪತ್ರಿಕೆಯ ಸಿನಿ ಪತ್ರಕರ್ತ ಶ್ಯಾಮ್ ಗೆ ಧಮಕಿ ಹಾಕಿದ್ದ ದಿನೇಶ್ ಕೆಲ ದಿನಗಳ ಹಿಂದೆ ವಿವಾದಕ್ಕೆ ಕಾರಣರಾಗಿದ್ದರು. ಬಳಿಕ ಶ್ಯಾಮ್ ಅವರನ್ನು ಕ್ಷಮೆ ಕೇಳುವ ಮೂಲಕ ವಿವಾದ ತಣ್ಣಗಾಗಿತ್ತು.