Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾರಿಜಾತ ಹಿಡಿದು ಕುಣಿಯುತ್ತಿರುವ ಮನಸಾರೆ ಜೋಡಿ
ಡ್ಯಾನ್ಸ್ ಕೋರಿಯೋಗ್ರಫರ್ ಆಗಿ ಕನ್ನಡ ಚಿತ್ರರಂಗದಲ್ಲಿ ತಕ್ಕಮಟ್ಟಿನ ಹೆಸರು ಗಳಿಸಿರುವ ಪ್ರಭು ಶ್ರೀನಿವಾಸ್ ಈ ಚಿತ್ರಕ್ಕೆ ನಿರ್ದೇಶಕರು. ಮಧುರ ಗೀತೆಗಳ ಮೋಡಿಗಾರ ಮನೋಮೂರ್ತಿ ಸಂಗೀತ ಚಿತ್ರದ ಹೈಲೈಟ್. ಅರಮನೆ ನಗರಿ ಮೈಸೂರಿನಲ್ಲಿ ಜನವರಿ 24 ರಂದು ಸೆಟ್ಟೇರಿರುವ ಈ ಚಿತ್ರದ ಚಿತ್ರೀಕರಣ ಮಾನಸ ಗಂಗೋತ್ರಿಯಲ್ಲಿ ಕಳೆದ ವಾರದಿಂದ ಚಿತ್ರೀಕರಣ ಆರಂಭಿಸಿದೆ. ಒಂದೇ ಹಂತದಲ್ಲಿ ಪೂರ್ತಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ. ಅದೇನೂ ಕಷ್ಟವಾಗದು ಬಿಡಿ.
ಮತ್ತೊಂದು ರಿಮೇಕ್ : ಕಥೆ, ಚಿತ್ರಕಥೆ, ಬೇಕಾದರೆ ಟ್ಯೂನ್ ಕೂಡಾ ಇದೆ. ಚಿತ್ರೀಕರಣ ಮಾತ್ರ ಕನ್ನಡ ನಾಡಿನಲ್ಲಿ ಮಾಡಿದರೆ ಸಾಕು ಮಿಕ್ಕ ಕಚ್ಚಾವಸ್ತು ತಮಿಳಿನಿಂದ ಎರವಲು ಪಡೆಯಬಹುದು. ಬಾಸ್ ಎಂಗಿರ ಬಾಸ್ಕರನ್ ಎಂಬ ತಮಿಳು ಚಿತ್ರ ( ಇಂಗ್ಲೀಷ್ ಅರ್ಥ: Bhaskaran alias Boss)ದಲ್ಲಿ ಆರ್ಯ, ನಯನತಾರಾ ಮಾಡಿದ್ದ ಪಾತ್ರವನ್ನೇ ಇಲ್ಲಿ ದಿಗಂತ್, ಐಂದ್ರಿತಾ ರಿಪೀಟ್ ಮಾಡುತ್ತಿದ್ದಾರೆ. ಸೋಮಾರಿ ಪಾತ್ರಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿರುವ ಧೂದ್ ಪೇಡ ದಿಗಂತ್ ಹೇಳಿ ಮಾಡಿಸಿದಂಥ ಪಾತ್ರ ಈ ಚಿತ್ರದಲ್ಲಿದೆ. ಆದರೆ, ಹಳಸಿದ ಚಿತ್ರಾನ್ನಕ್ಕೆ ಹೊಸ ಒಗ್ಗರಣೆ ಹಾಕಿ ಹೊಸ ರುಚಿ ಎಂದಾಗ ಸಹಿಸುವುದು ಅಚ್ಚ ಕನ್ನಡಿಗರಿಗೆ ಕಷ್ಟ ಕಷ್ಟ. ಕಾಸ್ಮೊಪಾಲಿಟನ್ ಪ್ರಜೆಗಳಿಗೆ ಎಲ್ಲವೂ ಓಕೆ.