Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜರಾಸಂಧ'ನಿಂದ ಚಿಗರೆ ಐಂದ್ರಿತಾ ರೇಗೆ ಬಿಡುಗಡೆ
2011ನೇ ವರ್ಷ ಚಿಗರೆ ಕಂಕಳ ಬೆಡಗಿ ಐಂದ್ರಿತಾ ರೇಗೆ ಆರಂಭದಲ್ಲೇ ಶಾಕ್ ನೀಡಿದೆ. 'ಧೂಳ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕೈಕೊಟ್ಟರು ಎಂಬ ಕಾರಣಕ್ಕೆ ಐಂದ್ರಿತಾ ಮೇಲೆ ಚಿತ್ರದ ನಿರ್ದೇಶಕ ಭರಣಿ ಕೆಂಡ ಕಾರಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ 'ಜರಾಸಂಧ' ಚಿತ್ರದ ಅವಕಾಶ ಐಂದ್ರಿತಾ ರೇ ಕೈತಪ್ಪಿದೆ.
'ಜರಾಸಂಧ' ಚಿತ್ರದಲ್ಲಿ ಅಭಿನಯಿಸುವ ಅವಕಾಶ 'ಪೊರ್ಕಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಣೀತಾ ಪಾಲಾಗಿದೆ. ಆದರೆ ಐಂದ್ರಿತಾ ಮೇಲಿನ ಕೋಪಕ್ಕೋ ಅಥವಾ ಆಕೆ ಇಷ್ಟವಾಗದ ಕಾರಣಕ್ಕೋ 'ಜರಾಸಂಧ' ಕೈತಪ್ಪಿಲ್ಲ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಐಂದ್ರಿತಾರನ್ನು ಕೈಬಿಡಲು ಕಾರಣ ಎನ್ನಲಾಗಿದೆ. ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶಶಾಂಕ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ಅಂದಹಾಗೆ 'ಜರಾಸಂಧ' ಚಿತ್ರದ ನಾಯಕ ನಟ ದುನಿಯಾ ವಿಜಯ್. ಸದ್ಯಕ್ಕೆ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್'ನಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಈ ತಿಂಗಳಲ್ಲೇ ಚಿತ್ರೀಕರಣ ಆರಂಭಿಸಬೇಕಿದ್ದ 'ಜರಾಸಂಧ' ಫೆಬ್ರವರಿಗೆ ಮುಂದೂಡಲ್ಪಟ್ಟಿದೆ. ಐಂದ್ರಿತಾ ರೇಗೆ ಅವಕಾಶ ತಪ್ಪಿದ್ದು ಹಾಗೂ ವಿಜಯ್ ಬ್ಯುಸಿಯಾಗಿರುವುದೇ 'ಜರಾಸಂಧ' ಚಿತ್ರೀಕರಣ ಮುಂದೂಡಲು ಕಾರಣವಾಗಿದೆ. [ಪ್ರಣೀತಾ]