Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಸೂರು-ಹೈದರಾಬಾದ್ನಲ್ಲಿ ‘ಕಾಂಟ್ರಾಕ್ಟ್‘
ಶೈಲಜಾ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ರಾಮಚಂದ್ರ ರಾಜು ನಿರ್ಮಿಸುತ್ತಿರುವ 'ಕಾಂಟ್ರಾಕ್ಟ್" ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇದೇ ತಿಂಗಳ ಹದಿನೈದರಿಂದ ಆರಂಭವಾಗಲಿದೆ. ಮೈಸೂರು, ಹೈದರಾಬಾದ್ ,ಮಲೇಷಿಯಾ, ಬ್ಯಾಂಕಾಕ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಪ್ರೀತಿ ಪ್ರೇಮ, ನೋವು ನಲಿವು ಹಾಗೂ ಸಾಹಸಭರಿತ ದೃಶ್ಯಗಳನ್ನು ಚಿತ್ರ ಹೊಂದಿರುತ್ತದೆ ಎಂದು ನಿರ್ದೇಶಕ ಸಮೀರ್ ಹೇಳುತ್ತಾರೆ. ತೆಲುಗು ನಟ ನಿರ್ದೇಶಕ ಜೆಡಿ ಚಕ್ರವರ್ತಿ ಅವರ ಹಲವು ಸಿನಿಮಾಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ಸಮೀರ್ ಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.
ಎಸ್.ಎಸ್.ಸಮೀರ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಅರ್ಜುನ್ಸರ್ಜಾ ಹಾಗೂ ತೆಲುಗಿನ ಜೆ.ಡಿ.ಚಕ್ರವರ್ತಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ಬೆಡಗಿ ಮಿನೀಷ ಲಂಬಾಬ ಈ ಚಿತ್ರದ ನಾಯಕಿ. ಮಲ್ಲಿಕಾ ಶರಾವತ್ 'ಕಾಂಟ್ರಾಕ್ಟ್"ನ ಒಂದು ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಉದ್ಯಮಿ ಪಾತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಕಾಟ ಕೊಡುವ ವಿಲನ್ ಆಗಿ ಜೆಡಿ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರೆ.
ಅನ್ವೇಶ್, ರಂಗಾಯಣರಘು, ಸಾಧುಕೋಕಿಲಾ, ಕೋಟ ಶ್ರೀನಿವಾಸ್ರಾವ್, ಶರಣ್, ರಮೇಶ್ಭಟ್, ಕಾಶಿ, ರಾಜು ತಾಳಿಕೋಟೆ ಮುಂತಾದವ ಹಿರಿಯ ಕಿರಿಯ ತಾರಾಬಳಗದೊಂದಿಗೆ ಈ ಚಿತ್ರ ಸುಂದರ ಕೌಟುಂಬಿಕ ಚಿತ್ರವಾಗಲಿದೆ ಎಂಬ ನಂಬಿಕೆಯನ್ನು ಸಮೀರ್ ಇಟ್ಟುಕೊಂಡಿದ್ದಾರೆ. ಸುಭಾಷ್-ವಿಶ್ವಾಸ್ ಸಂಗೀತ, ಅತ್ತಿಗಿರಿ ವೆಂಕಿ ಗೀತರಚನೆಗೆ ಅರ್ಜುನ್ ಮಿನಿಷಾ ಹೆಜ್ಜೆ ಹಾಕಲಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಶ್ರೀಮಂಜುನಾಥ ನಂತರ ಮತ್ತೆ ದ್ವಿಭಾಷಾ ಚಿತ್ರ ಸೂತ್ರ ಹಿಡಿದುಕೊಂಡು ಬಂದಿರುವ ಅರ್ಜುನ್ ಸರ್ಜಾ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸೋದರಳಿಯ ಚಿರು ಬೆಳವಣಿಗೆಗೂ ಪ್ರೋತ್ಸಾಹಿಸುತ್ತಿದ್ದಾರೆ.