Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯ ಬೆಡಗಿ ಹಾಲುಗಲ್ಲದ ಕೀರ್ತಿ ಹೇಳಿದ ಮಾತಿದು
ಇದೊಂದು ಪಕ್ಕಾ ಮಾಸ್ ಚಿತ್ರ. ಹೆಸರೇ ಹೇಳುವಂತೆ ಪ್ರೀತಿ, ಪ್ರೇಮ ಕುರಿತಾದ ಕತೆ. ಚಿತ್ರದಲ್ಲಿ ಹೊಡೆದಾಟ ಬಡಿದಾಟಗಳಿಗೂ ಸ್ಥಾನವಿದೆ. ಮಾಸ್ ಜೊತೆಗೆ ಪೆಪ್ಪರ್ ಮಿಂಟ್ ತರಹ ಸೆಂಟಿಮೆಂಟು ಇದೆಯಂತೆ. ಚಿತ್ರದ ನಾಯಕಿ ಕೀರ್ತಿ. ಈಗಾಗಲೆ ಈಕೆ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಪತಾಕೆ ಹಾರಿಸಿದ್ದಾಗಿದೆ.
ಪ್ರೇಮ್ ನಿರ್ದೇಶಿಸಿ, ನಟಿಸಿದ್ದ 'ಪ್ರೀತಿ ಏಕೆ' ಚಿತ್ರದಲ್ಲಿ ಈಕೆಯದು ಎರಡನೆ ನಾಯಕಿ ಪಾತ್ರ. ತಮ್ಮ ಚಿತ್ರಕ್ಕೆ ಮಂಡ್ಯ ಹುಡುಗಿಯೇ ಆಗಬೇಕು ಎಂದು ಪಟ್ಟುಹಿಡಿದು ಪ್ರೇಮ್ ಈಕೆಯನ್ನು ಪರಿಚಯಿಸಿದ್ದರು. ಗಾಂಧಿನಗರಕ್ಕೆ ಅಡಿಯಿಟ್ಟ ಮಂಡ್ಯ ಬೆಡಗಿ ಕೀರ್ತಿ ಈಗ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವ ಕನಸು ಕಾಣುತ್ತಿದ್ದಾರೆ.
'ಲೋಕವೇ ಹೇಳಿದ ಮಾತಿದು' ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನುತ್ತಾರೆ ಹಾಲುಗಲ್ಲದ ಕೀರ್ತಿ. ಚಿತ್ರದಲ್ಲಿ ರಿಯಲ್ ರೌಡಿಗಳು ಅಭಿನಯಿಸುತ್ತಿದ್ದಾರೆ. ಅವರೊಂದಿಗಿನ ಅಭಿನಯ ಹೊಸ ಅನುಭವ ನೀಡಿದೆ ಅಂತಾರೆ ಮಂಡ್ಯ ಬೆಡಗಿ. ಸದ್ಯಕ್ಕೆ ಈಕೆಗೆ ತೆಲುಗು ಚಿತ್ರವೊಂದರಲ್ಲಿ ನಟಿಸುವ ಅವಕಾಶವೂ ಹುಡುಕಿಕೊಂಡು ಬಂದಿದೆ.