Don't Miss!
- News ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ & ಏರಿಕೆ!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರುಡಾ ಮಾಲ್ ನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ
ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಸೆಪ್ಟೆಂಬರ್ 18 ಮರೆಯಲಾಗದ ದಿನ. ಕಾರಣ ಅಂದು ವಿಷ್ಣುವರ್ಧನ್ ಅವರ ಅರುವತ್ತನೆ ಜನುಮದಿನ. ಕನ್ನಡ ಚಿತ್ರರಂಗವನ್ನು ವಿಷ್ಣು ಅಗಲಿದ ಬಳಿಕ ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬವಿದು. ಈ ಬಾರಿ ವಿಷ್ಣು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಮರೋಪಾದಿ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿಯ ಪ್ರಮುಖ ಆಕರ್ಷಣೆ 'ವಿಷ್ಣು ಚಿತ್ರೋತ್ಸವ'. ಈ ಚಿತ್ರೋತ್ಸವಕ್ಕೆ ನೇತೃತ್ವ ವಹಿಸುತ್ತಿರುವವರು ವಿಷ್ಣು ಅಳಿಯ ಹಾಗೂ ನಟ ಅನಿರುದ್ಧ್. ಸೆಪ್ಟೆಂಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ ವಿಷ್ಣು ಚಿತ್ರೋತ್ಸವ ಸಡಗರ, ಸಂಭ್ರಮದಿಂದಬೆಂಗಳೂರಿನ ಗರುಡಾ ಮಾಲ್ ನಲ್ಲಿ ನಡೆಯಲಿದೆ.
ಚಿತ್ರೋತ್ಸವದಲ್ಲಿ ನಾಗರಹಾವು, ಮಲಯ ಮಾರುತ, ಬಂಧನ, ಲಾಲಿ, ಬಂಗಾರದ ಜಿಂಕೆ, ದಿಗ್ಗಜರು ಸೇರಿದಂತೆ ಡಾ.ವಿಷ್ಣುವರ್ಧನ್ ಅಭಿನಯದ ಅಪರೂಪದ 12 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಉಚಿತವಾಗಿ ನಡೆಯಲಿರುವ ಈ ಪ್ರದರ್ಶನದಲ್ಲಿ ವಿಷ್ಣು ಕುಟುಂಬದವರು ಭಾಗವಹಿಸಲಿರುವುದು ವಿಶೇಷ.
"ಹುಟ್ಟುಹಬ್ಬದ ದಿನ ಪ್ರದರ್ಶಿಸಲಿರುವ ಚಿತ್ರಗಳ ಹಕ್ಕುಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ. ಕೆಲವು ಸಿಕ್ಕಿವೆ ಇನ್ನೂ ಕೆಲವು ಚಿತ್ರಗಳಿಗಾಗಿ ಪ್ರಯತ್ನಿಸಲಾಗುತ್ತಿದೆ. ನಾವು ಅಂದುಕೊಂಡಿರುವ ಎಲ್ಲಾ ಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶಿಸುತ್ತೇವೆ. ಆಯಾ ಚಿತ್ರಗಳ ನಿರ್ಮಾಪರಿಂದ ಈಗಾಗಲೆ ಒಳ್ಳೆಯ ಪ್ರತಿಕ್ರಿಯೆ ಸಹ ಬಂದಿದೆ. ಶೀಘ್ರದಲ್ಲೆ ಕಾರ್ಯಕ್ರಮದ ರೂಪರೇಷೆಗಳು ಅಂತಿಮವಾಗಲಿದೆ" ಎಂದಿದ್ದಾರೆ ಅನಿರುದ್ಧ್.