Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಧಾಮೂರ್ತಿ ಈಗ ಕಸಾಪ ವಿದ್ಯಾರ್ಥಿನಿ!
ಸದಾಶಿವ ಶೆಣೈ ನಿರ್ದೇಶನದ ಚೊಚ್ಚಲನ ಚಿತ್ರ 'ಪ್ರಾರ್ಥನೆ'ಯ ನಟಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈಗೇನು ಮಾಡುತ್ತಿದ್ದಾರೆ. ಈಗವರು ಡಿಪ್ಲೊಮಾ ವಿದ್ಯಾರ್ಥಿನಿ! ಈ ವಯಸ್ಸಿನಲ್ಲಿ ಅವರು ಏನನ್ನು ಕಲಿಯುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿದೆಯೇ?
ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಶಾಸನ ಶಾಸ್ತ್ರದ ಡಿಪ್ಲೊಮಾ ತರಗತಿಗಳಿಗೆ ಸುಧಾಮೂರ್ತಿ ಹಾಜರಾಗುತ್ತಿದ್ದಾರೆ. ಸುಧಾಮೂರ್ತಿ ಅವರ ಆಸಕ್ತಿ ಕ್ಷೇತ್ರಗಳು ಎಂಥಹವರನ್ನು ಬೆರಗುಗೊಳಿಸುತ್ತವೆ. ಅವರ ಕಲಿಕೆಯ ಉತ್ಸಾಹಕ್ಕೆ ಮೂಕ ವಿಸ್ಮಿತರಾಗಬೇಕು. ಮೂಲತಃ ವಿಜ್ಞಾನ ವಿದ್ಯಾರ್ಥಿಯಾದ ಸುಧಾಮೂರ್ತಿ ಇದೀಗ ಇತಿಹಾಸದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿ | |
ಪಿ ವಿ ಕೃಷ್ಣಮೂರ್ತಿಗಳು ತೆಗೆದುಕೊಳ್ಳುವ ಶಾಸನ ಲಿಪಿ ತರಗತಿ ಎಂದರೆ ಸುಧಾಮೂರ್ತಿ ಅವರಿಗೆ ವಿಶೇಷ ಆಸಕ್ತಿಯಂತೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6ರಿಂದ 7 ಗಂಟೆಯ ತನಕ ತರಗತಿಗಳು ನಡೆಯುತ್ತವೆ. ಸುಧಾಮೂರ್ತಿ ಅವರು ಕೋರ್ಸ್ ಗೆ ಸೇರಿಸುವ ಮುನ್ನ ಅರ್ಜಿ ಸಲ್ಲಿಸಲು ಕಾಲ ಮುಗಿದಿತ್ತು. ಆದರೆ ತಾವು ಪರೀಕ್ಷೆಗಾಗಿ ಬರುತ್ತಿಲ್ಲ. ಕಲಿಯಲು ಬರುತ್ತಿರುವುದಾಗಿ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅವರ ಬಳಿ ವಿನಂತಿಸಿದಾಗ ಅವರು ಅವಕಾಶ ಕಲ್ಪಿಸಿದ್ದಾರೆ.