Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾಂಪತ್ಯ ಜೀವನಕ್ಕೆ ಮಾಸ್ಟರ್ ಆನಂದ್ ಪ್ರವೇಶ
ಮಾಸ್ಟರ್ ಆನಂದ್ ಎಂದೇ ಜನಪ್ರಿಯರಾಗಿರುವ ನಟ ಎಚ್ ಆನಂದ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ನಂಜನಗೂಡಿನ ಹುಡುಗಿ ಯಶಸ್ವಿನಿ ಜೊತೆ ಆನಂದ್ ಮದುವೆ ಮಾರ್ಚ್ 18ರಂದು ಬೆಂಗಳೂರಿನಲ್ಲಿ ನಡೆದಿತ್ತು. ಮಾರ್ಚ್ 21ರ ಭಾನುವಾರ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಸಿದ್ಧಗಂಗ ಸಾಮೂಹಿಕ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.
ನಂಜನಗೂಡಿನ ಮಂಜುಳ ಮತ್ತು ಚಂದ್ರಶೇಖರ್ ಅವರ ಏಕ ಮಾತ್ರ ಪುತ್ರಿ ಯಶಸ್ವಿನಿ. ಈಗಷ್ಟೆ ಬಿಎಸ್ಸಿ ಮುಗಿಸಿರುವ ಈಕೆ ನಟ ಆನಂದ್ ರನ್ನು ವರಿಸಿದ್ದಾರೆ.ಚಿತ್ರರಂಗದಲ್ಲಿರುವ ಹುಡುಗಿ ಬೇಡ ಎಂದು ಆನಂದ್ ಮೊದಲೆ ನಿರ್ಧರಿಸಿದ್ದರು. ಹಾಗಾಗಿ ಚಿತ್ರರಂಗದೊಂದಿಗೆ ಯಾವುದೇ ರೀತಿಯಲ್ಲು ಸಂಬಂಧವಿಲ್ಲದ ಯಶಸ್ವಿನಿಯ ಕೈಹಿಡಿದ್ದಾರೆ ಅನಂದ್.
ಬಾಲ ಕಲಾವಿದನಾಗಿ ಬೆಳ್ಳಿತೆರೆಗೆ ಅಡಿಯಿಟ್ಟ ಆನಂದ್ ಗಣೇಶನ ಹೆಸರಿನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ 'ಫ್ರೆಂಡ್ಸ್' ಹಿಟ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಪರಿಚಯ, ಜ್ಯೇಷ್ಠ, ಗೌರಿ ಗಣೇಶ, ರಾಣಿ ಮಹಾರಾಣಿ, ಬೆಳ್ಳಿ ಕಾಲುಂಗುರ, ಶುಭಲಗ್ನ, ಪ್ರೀತಿಗಾಗಿ, ಮುತ್ತಿನ ಹಾರ, ಹುಷಾರ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
''ಎಸ್ಸೆಸ್ಸೆಲ್ಸಿ ನನ್ ಮಕ್ಳು'' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಆನಂದ್ ಕಿರುತೆರೆಯಲ್ಲೂ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಆನಂದ್ ಮತ್ತು ಯಶಸ್ವಿನಿ ದಂಪತಿಗಳಿಗೆ ಶುಭ ಹಾರೈಸೋಣ