Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರಣಾನಂತರ ದೇಹದಾನಕ್ಕೆ ಶಿವಣ್ಣ ನಿರ್ಧಾರ
ತೆರೆಯ ಮೇಲೆ ಮಾಡಿದ್ದನ್ನು ನಿಜ ಜೀವನದಲ್ಲಿ ಮಾಡಿ ತೋರಿಸಿದ ನಟರು ವಿರಳ. ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವಿರಳರ ಸಾಲಿಗೆ ಇದೀಗ ಸೇರ್ಪಡೆಯಾಗಿದ್ದಾರೆ. ಮರಣಾನಂತರ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆಗೆ ದಾನ ಮಾಡುತ್ತಿರುವುದಾಗಿ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.
ವರನಟ ಡಾ.ರಾಜ್ ಕುಮಾರ್ ನೇತ್ರದಾನ ಮಾಡಿ ಇಡೀ ನಾಡಿಗೆ ಮಾದರಿಯಾದರು. ಅವರ ಪುತ್ರ ಶಿವರಾಜ್ ಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ತಮ್ಮ ದೇಹವನ್ನೇ ದಾನ ಮಾಡಲು ಇಚ್ಛಿಸಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ತಮ್ಮ ಈ ನಿರ್ಧಾರಕ್ಕೆ ಇದೀಗ ಪ್ರದರ್ಶನ ಕಾಣುತ್ತಿರು 'ಸುಗ್ರೀವ' ಚಿತ್ರವೂ ಕಾರಣ ಎನ್ನುತ್ತಾರೆ ಶಿವಣ್ಣ.
'ಸುಗ್ರೀವ' ಚಿತ್ರದಲ್ಲಿ ತಮ್ಮ ಮಗನ ಪ್ರಾಣ ಉಳಿಸಲು ಶಿವರಾಜ್ ಕುಮಾರ್ ಹೃದಯನ್ನು ದಾನ ಮಾಡುತ್ತಾರೆ. ಅವಯವ ದಾನದ ಬಗ್ಗೆ 'ಸುಗ್ರೀವ' ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ. ಮರಣಾನಂತರ ತಮ್ಮ ದೇಹದಾನ ಮಾಡಲು 'ಸುಗ್ರೀವ' ಚಿತ್ರದ ಈ ಪಾತ್ರವೂ ಕಾರಣ ಎನ್ನ್ನುತ್ತಾರೆ ಶಿವರಾಜ್ ಕುಮಾರ್.
''ನೇತ್ರದಾನಕ್ಕಿಂತಲೂ ಶ್ರೇಷ್ಠವಾದುದು ದೇಹದಾನ. ವೈದ್ಯಕೀಯ ವಿದ್ಯಾರ್ಥಿಗಳು, ಪ್ರಯೋಗಗಳು, ಸಂಶೋಧನೆಗೆ ಉಪಯೋಗಕ್ಕೆ ಬರುವ ದೇಹ ಬೂದಿ, ಮಣ್ಣಾಗುವುದು ನನಗಿಷ್ಟವಿಲ್ಲ. ಮನಸಾರೆ ಒಪ್ಪಿ ತಮ್ಮ ದೇಹವನ್ನು ದಾನ ಮಾಡಲು ತೀರ್ಮಾನಿಸಿದ್ದಾಗಿ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಹಿರಿಯ ನಟ ದಿವಂಗತ ಲೋಕೇಶ್ ವೈದ್ಯಕೀಯ ಸಂಶೋಧನೆಗಾಗಿ ಮರಣಾನಂತರ ತಮ್ಮ ದೇಹವನ್ನು ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ದೇಹ ಎಂ ಎಸ್ ರಾಮಯ್ಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗಿತ್ತು.
ಸತ್ತ ನಂತರ ನಮ್ಮ ದೇಹಗಳನ್ನು ಮಣ್ಣು ಮಾಡುವುದಕ್ಕಿಂತ ನಾಲ್ಕು ಜನಕ್ಕೆ ಉಪಯೋಗವಾಗುವುದಾದರೆ ಮರಣಾನಂತರ ನಾವ್ಯಾಕೆ ನಮ್ಮ ದೇಹದಾನ ಮಾಡಬಾರದು ಎನ್ನುತ್ತಾರೆ ಶಿವರಾಜ್ ಕುಮಾರ್. ಮಂಗಳವಾರ(ಮಾ.2) ದೇಹದಾನ ಮಾಡುವ ಬಗ್ಗೆ ಅಧಿಕೃತವಾಗಿ ಶಿವರಾಜ್ ಕುಮಾರ್ ಘೋಷಿಸಲಿದ್ದಾರೆ.