Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರ್ಚ್ ನಲ್ಲಿ 'ಐತಲಕಡಿ' ಕಾಮಿಡಿ ಬುಲೆಟ್ ಗಳು
ಬರೋಬ್ಬರಿ 108 ಕಲಾವಿದರನ್ನು ಬಳಸಿಕೊಂಡ ಮೊದಲ ಕನ್ನಡ ಚಿತ್ರ 'ಐತ್ತಲಕಡಿ'. ಬುಲೆಟ್ ಪ್ರಕಾಶ್ ರಷ್ಟೇ ದೈತ್ಯವಾದ ಚಿತ್ರತಂಡ 'ಐತಲಕಡಿ'ಗಿರುವುದು ವಿಶೇಷ.ಬೆಂಗಳೂರು ಮಿನರ್ವ ಮಿಲ್ಸ್ ನಲ್ಲಿ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ 'ಐತಲಕಡಿ' ಚಿತ್ರೀಕರಣ ಮುಕ್ತಾಯವಾಗಿದೆ.
ರಂಗಾಯಣ ರಘು ಮತ್ತು ಬುಲೆಟ್ ಪ್ರಕಾಶ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಅತಿಥಿ ಪಾತ್ರವರ್ಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್, ನವರಸ ನಾಯಕ ಜಗ್ಗೇಶ್, ಆಕ್ಷನ್ ಹೀರೋ ವಿಜಯ್, ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಪಕ್ಕಾ ಹಾಸ್ಯ ಚಿತ್ರವಾದ 'ಐತಲಕಡಿ' ಕತೆ ಮತ್ತು ನಿರ್ದೇಶನ ಜೆ ಜಿ ಕೃಷ್ಣ ಅವರದು.
ನಲವತ್ತೆರಡು ದಿನಗಳ ಕಾಲ ಬೆಂಗಳೂರಿನ ವಿವಿಧ ತಾಣಗಳಲ್ಲಿಚಿತ್ರೀಕರಣ ನಡೆಸಲಾಗಿದೆ. ಸಾಕಷ್ಟು ಕಡೆ ಮನಮೋಹಕ ಸೆಟ್ ಗಳನ್ನು ಹಾಕಿ ಚಿತ್ರೀಕರಿಸಿಕೊಳ್ಳಲಾಗಿದೆ. ಶೇಕಡಾ ನೂರರಷ್ಟು ಆರೋಗ್ಯಕರವಾದ ಹಾಸ್ಯ ಚಿತ್ರವಿದು. ಕುಟುಂಬ ಸಮೇತ ಬಂದು ನೋಡಿ ಆನಂದಿಸಬಹುದು ಎನ್ನುತ್ತಾರೆ ಜೆ ಜಿ ಕೃಷ್ಣ.
ಚಿತ್ರದ ಹಾಡೊಂದರಲ್ಲಿ 23 ಕಲಾವಿದರು ಜತೆಗೆ 72 ಜಾನಪದ ಕಲಾವಿದರನ್ನು ನೋಡಬಹುದು. ಟಿಕೆಟ್ ಬೆಲೆಯರ ಎರಡು ಪಟ್ಟು ಮನರಂಜನೆ ನೀಡುವ ವಿಶ್ವಾಸವನ್ನು ಚಿತ್ರದ ನಿರ್ಮಾಪಕರೂ ಆದ ಬುಲೆಟ್ ಪ್ರಕಾಶ್ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜಯ್ ಚಿತ್ರದಲ್ಲಿ ಕಾಣಿಸುತ್ತಾರೆ. ಸಾಧುಕೋಕಿಲ ಸಂಗೀತ ನೀಡಿರುವ ಐತಲಕಡಿ ಚಿತ್ರ ಮಾರ್ಚ್ ನಲ್ಲಿ ತೆರೆಕಾಣಲಿದೆ.