Don't Miss!
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೇಕಡಾವಾರು ಪದ್ಧತಿಯಲ್ಲಿ ಪೊಲೀಸ್ ಕ್ವಾಟ್ರಸ್
ರಾಜ್ಯದಲ್ಲಿ ಜನವರಿ 1, 2010ರಿಂದ ಬಿಡುಗಡೆಯಾಗಲಿರುವ ಎಲ್ಲಾ ಭಾಷೆಯ ಚಿತ್ರಗಳಿಗೂ ಶೇಕಡಾವಾರು ಪದ್ಧತಿ ಅನ್ವಯವಾಗಲಿದೆ. ಕನ್ನಡ ಚಿತ್ರೋದ್ಯಮದ ಹಿರಿಯ ವಿತರಕ ಹಾಗೂ ವಾಣಿಜ್ಯೋದ್ಯಮಿ ತಲ್ಲಂ ನಂಜುಂಡಶೆಟ್ಟ ಈ ಹೊಸ ಪದ್ಧತಿಗೆ ಮುದ್ರೆ ಒತ್ತುವ ಮೂಲಕ ನಾಂದಿ ಹಾಡುತ್ತಿದ್ದಾರೆ. ಈ ಮೂಲಕ ಶೇಕಡಾವಾರು ಪದ್ಧತಿಗೆ ನಾಂದಿ ಹಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ತಲ್ಲಂ ನಂಜುಂಡ ಶೆಟ್ಟಿ ಪಾತ್ರರಾಗಲಿದ್ದಾರೆ.
ಎ ಎಂ ಆರ್ ರಮೇಶ್ ನಿರ್ಮಿಸಿ ನಿರ್ದೇಶಿಸಿರುವ 'ಪೊಲೀಸ್ ಕ್ವಾಟ್ರಸ್' ಚಿತ್ರದೊಂದಿಗೆ ತಲ್ಲಂ ನಂಜುಂಡಶೆಟ್ಟಿ ಈಗಾಗಲೇ ಶೇಕಡಾವಾರು ಹಂಚಿಕೆ ವಿಚಾರವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಒಪ್ಪಂದದ ಪ್ರಕಾರ, ಮೊದಲ ವಾರ ನಿರ್ಮಾಪಕನಿಗೆ ಶೇ.60 ಹಾಗೂ ವಿತರಕನಿಗೆ ಶೇ.40 ಲೆಕ್ಕಾಚಾರದಲ್ಲಿ ವರಮಾನ ಹಂಚಿಕೆಯಾಗಲಿದೆ. ಹಾಗೆಯೇ ಎರಡನೇ ವಾರದಲ್ಲಿ ನಿರ್ಮಾಪಕನಿಗೆ ಶೇ.55 ಹಾಗೂ ವಿತರಕನಿಗೆ ಶೇ.45 ಹಾಗೂ ಮೂರನೇ ವಾರದಲ್ಲಿ ನಿರ್ಮಾಪಕ ಮತ್ತು ವಿತರಕನಿಗೆ 50:50ರ ಅನುಪಾತದಲ್ಲಿ ವರಮಾನ ಹಂಚಿಕೆಯಾಗಲಿದೆ.
ನಾಲ್ಕನೇ ವಾರದಲ್ಲಿ ಗಳಿಕೆ ರು.2 ಲಕ್ಷಕ್ಕಿಂತಲೂ ಅಧಿಕವಾಗಿದ್ದರೆ ಅದು ನಿರ್ಮಾಪಕನಿಗೆ ಸಂದಾಯವಾಗಲಿದೆ. ಒಂದು ವೇಳೆ ನಾಲ್ಕನೆ ವಾರದಲ್ಲಿ ಗಳಿಕೆ ಕನಿಷ್ಠ ರು.2 ಲಕ್ಷಕ್ಕಿಂತ ಕಡಿಮೆ ಇದ್ದರೆ ಚಿತ್ರ ಎತ್ತಂಗಡಿಯಾಗಲಿದೆ. ಭೂಮಿಕಾ ಚಿತ್ರಮಂದಿರದ ಮಾಲೀಕರೂ ಆಗಿರುವ ತಲ್ಲಂ ನಂಜುಂಡಶೆಟ್ಟಿ ಶೇಕಡಾವಾರು ಪದ್ಧತಿಗೆ ಒಪ್ಪಿಗೆ ಕೊಟ್ಟಿರುವ ಕಾರಣ ಎ ಎಂ ಆರ್ ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ತಮ್ಮ 'ಸೈನೇಡ್' ಚಿತ್ರವನ್ನು ಯಾವುದೇ ವಿತರಕನ ನೆರವಿಲ್ಲದೆ ಎ ಎಂ ಆರ್ ರಮೇಶ್ ಸ್ವತಃ ಅವರೇ ಬಿಡುಗಡೆ ಮಾಡಿದ್ದರು. ಇದೀಗ 'ಪೊಲೀಸ್ ಕ್ವಾಟ್ರಸ್' ಚಿತ್ರವನ್ನು ಶೇಕಡಾವಾರು ಪದ್ಧತಿ ಮೂಲಕ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ಶೇಕಡಾವಾರು ಪದ್ಧತಿ ನನ್ನಂಥಹ ನಿರ್ಮಾಪಕನಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎನ್ನುತ್ತಾರೆ ರಮೇಶ್.
'ಪೊಲೀಸ್ ಕ್ವಾಟ್ರಸ್' ಕನ್ನಡ ಅವತರಣಿಕೆಗೆ ಗಾಂಧಿನಗರದಲ್ಲಿ ಯಾರೊಬ್ಬ ವಿತರಕನೂ ಸಿಗಲಿಲ್ಲ. ಅದೇ ತಮಿಳಿನ ಅವತರಣಿಕೆಗೆ ನಾ ಮುಂದು ತಾ ಮುಂದು ಎಂದು ಚಿತ್ರ ವಿತರಕರು ಮುಂದೆ ಬಂದರು. ರು.5 ರಿಂದ ರು.10 ಲಕ್ಷ ಮುಂಗಡ ಹಣವನ್ನು ಕೊಡಲು ಅವರು ತಯಾರಿದ್ದಾರೆ. ಜನವರಿ 29ಕ್ಕೆ ತಮಿಳು ಅವತರಣಿಕೆಯನ್ನು ಬಿಡುಗಡೆ ಮಾಡುವುದಾಗಿ ರಮೇಶ್ ತಿಳಿಸಿದ್ದಾರೆ. ಮಹೇಶ್ ಕೊಠಾರಿ ಮೂಲಕ ಪೊಲೀಸ್ ಕ್ವಾಟ್ರಸ್ ಟೆಲಿವಿಷನ್ ಹಕ್ಕುಗಳನ್ನು ರು.50 ಲಕ್ಷಕ್ಕೆ ಈಗಾಗಲೇ ಮಾರಾಟ ಮಾಡಲಾಗಿದೆ.