Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗಿಲ್ಲಿ' ಖ್ಯಾತಿಯ ರಾಘವ ಲೋಕಿ ದಾಂಪತ್ಯಕ್ಕೆ
'ಸತ್ಯ ಇನ್ ಲವ್' ಹಾಗೂ 'ಗಿಲ್ಲಿ' ಚಿತ್ರಗಳ ನಿರ್ದೇಶಕ ರಾಘವ ಲೋಕಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ಇರುವ ವೈಕೆಆರ್ ಕಲ್ಯಾಣ ಮಂಟಪದಲ್ಲಿ ರಾಘವ ಲೋಕಿ ಮತ್ತು ಸವಿತಾ ಅವರ ವಿವಾಹ ಭಾನುವಾರ (ಡಿ.6) ನೆರವೇರಿತು.
ಶಿವರಾಜ್ ಕುಮಾರ್ ನಟಿಸಿದ್ದ 'ಸತ್ಯ ಇನ್ ಲವ್' ಚಿತ್ರ ತಕ್ಕಮಟ್ಟಿಗೆ ಯಶಸ್ವಿಯಾದ ಬಳಿಕ 'ಗಿಲ್ಲಿ' ಚಿತ್ರವನ್ನು ಲೋಕಿ ನಿರ್ದೇಶಿಸಿದ್ದರು. ಜಗ್ಗೇಶ್ ಮಗ ಗುರುರಾಜ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ 'ಗಿಲ್ಲಿ'. ಈ ಚಿತ್ರವೂ ಬಾಕ್ಸಾಫೀಸಲ್ಲಿ ಪರ್ವಾಗಿಲ್ಲ ಎನ್ನಿಸಿಕೊಂಡಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಸುಗ್ರೀವ' ಚಿತ್ರದ ಎಂಟು ಮಂದಿ ನಿರ್ದೇಶಕರಲ್ಲಿ ರಾಘವ ಲೋಕಿಸಹ ಒಬ್ಬರು. ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ 'ಸುಗ್ರೀವ' ಪಾತ್ರವಾಗಿದೆ. ರಾಘವ ಲೋಕಿ ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಸೌಂದರ್ಯ ಜಗದೀಶ್, ಪಿ ಎನ್ ಸತ್ಯ, ಗುರುಕಿರಣ್, ಶ್ರೀನಿವಾಸಮೂರ್ತಿ, ಅಣಜಿ ನಾಗರಾಜ್, ಎಂ ಆರ್ ಸೀನು, ಕೋಮಲ್, ರೂಪಿಕಾ, ವೀಣಾ ವೆಂಕಟೇಶ್ ಮುಂತಾದ ಕನ್ನಡ ಚಿತ್ರರಂಗದ ಗಣ್ಯರು ರಾಘವ ಲೋಕಿ ಮದುವೆಗೆ ಆಗಮಿಸಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)