Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ 101ನೇ ಚಿತ್ರ ಪುಣ್ಯವಂತ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಆದರೆ ನೂರೊಂದನೆ ಚಿತ್ರ ಯಾವುದು? ಇದೀಗ ಈ ಪ್ರಶ್ನೆಗೆ 'ಪುಣ್ಯವಂತ' ಎಂಬ ಉತ್ತರ ಸಿಕ್ಕಿದೆ. ಪ್ರೇಮ್ ನಿರ್ದೇಶಿಸಿದ್ದ 'ಜೋಗಿ'ಯ ಮುಂದುವರಿದ ಭಾಗವೇ 'ಜೋಗಯ್ಯ' ಎಂಬ ಸುದ್ದಿ ಈಗಾಗಲೇ ಚಾಲ್ತಿಯಲ್ಲಿದೆ. 'ಪುಣ್ಯವಂತ'ನ ಕತೆ ಒಂಚೂರು ಭಿನ್ನವಾಗಿದೆ.
ಶಿವರಾಜ್ ಕುಮಾರ್ ಅವರ 101ನೇ ಚಿತ್ರ ಎಂಬುದು 'ಪುಣ್ಯವಂತ'ನ ಒಂದು ವಿಶೇಷ. ಈ ಚಿತ್ರದಲ್ಲಿ 101 ಕಲಾವಿದರು ನಟಿಸಲಿದ್ದಾರೆ ಎಂಬುದು ಮತ್ತೊಂದು ವಿಶೇಷ. ಇಷ್ಟೆಲ್ಲಾ ವಿಶೇಷಗಳನ್ನು ಹೊಂದಿರುವ ಈ ಚಿತ್ರ ಸಾಂಸಾರಿಕ ಚಿತ್ರಕತೆಯನ್ನು ಒಳಗೊಂಡಿದೆಯಂತೆ. 101 ಕಲಾವಿದರ ತುಂಬಿದ ಸಂಸಾರವನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು!
ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಲಿರುವ ಈ ಚಿತ್ರವನ್ನು ಮುನಿರಾಜು (ಬಿಟಿಎಂ ತಾವರೆಕೆರೆ ) ನಿರ್ಮಿಸುತ್ತಿದ್ದಾರೆ. ಯಲ್ಲಮ್ಮದೇವಿ ಮೂವೀಸ್ ಲಾಂಛನದಲ್ಲಿ ಚಿತ್ರ ಸೆಟ್ಟೇರಲಿದೆ. ಉಳಿದ ತಂತ್ರಜ್ಞರ, ಕಲಾವಿದರ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. 'ನಲ್ಲ', 'ಅಂಬಿ' ಮತ್ತು 'ಮೇಘವೇ ಮೇಘವೇ' ಈ ಹಿಂದೆ ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ ಚಿತ್ರಗಳು. ಅಂದಹಾಗೆ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)