Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಂಸ್ಕೃತಿಕ ನಗರಿಯಲ್ಲಿ ‘ಸ್ವರಾಂಜಲಿ’
ಶ್ರೀವಿದ್ಯಾ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವರಾಂಜಲಿ' ಚಿತ್ರಕ್ಕೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸಾಹಿತಿ ರಾಂನಾರಾಯನ್ ರಚಿಸಿರುವ 'ಎಲ್ಲೆಲ್ಲಿಂದಲೊ ಬಂದು ಕೂಡಿಕೊಳ್ಳುವ ನಮ್ಮ ಪಾಲಿಗೆ ಕಾಲೇಜು ಗುಡಿ ಅಲ್ಲವಾ ಕೈಯ ಮುಗಿದು ವಂದನೆ ಹೇಳುವಾ' ಎಂಬ ಗೀತೆಯು ಹುಣುಸೂರು ರಸ್ತೆಯಲ್ಲಿರುವ ಡಿಸಾಲ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಚಿತ್ರೀಕರಣವಾಯಿತು.
ರಮಣ, ರಶ್ಮಿ, ಸ್ಪೂರ್ತಿ ಹಾಗೂ 30ಜನ ನರ್ತಕರು ಈ ಗೀತೆಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಹಿಂದೆ 'ತಂಗಿಯ ಮನೆ'ಚಿತ್ರವನ್ನು ನಿರ್ದೇಶಿಸಿದ ಎಂ.ಎಸ್.ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಬಿ.ಎಲ್.ಬಾಬು ಕ್ಯಾಮೆರಾ, ಚಂದ್ರಕಾಂತ್ ಸಂಗೀತ, ಕೌರವ ವೆಂಕಟೇಶ್ ಸಾಹಸ, ಸಂಜೀವ್ರೆಡ್ಡಿ ಸಂಕಲನ, ಸತೀಶ್ ನೃತ್ಯ ಹಾಗೂ ಚೆನ್ನಯ್ಯ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಮಣ, ರಶ್ಮಿ, ಸ್ಪೂರ್ತಿ, ಶರತ್ ಲೋಹಿತಾಶ್ವ, ಪ್ನ್ನಂಬಲು, ಎಂ.ಎಸ್.ಶ್ರೀನಿವಾಸ್, ಸೂರ್ಯಕಿರಣ್, ರಮೇಶ್ಭಟ್, ಶೋಭ್ರಾಜ್, ಸುಂದರರಾಜ್, ಧರ್ಮ, ಶ್ರೀಧರ್, ಸಿದ್ದರಾಜು ಕಲ್ಮಣ್ಕರ್, ಆನಂದರಾಜು ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)