Don't Miss!
- Automobiles ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- News ಡಿ ಕೆ ಶಿವಕುಮಾರ್ 9 ವರ್ಷದ ಬಾಲಕಿಯನ್ನು ಕೂಡಿ ಹಾಕಿ ಆಸ್ತಿ ಬರೆಸಿಕೊಂಡವ್ರೆ ; ಹಿಂದಿನ ಸತ್ಯ ಬಿಚ್ಚಿಟ್ಟ ದೇವೇಗೌಡ್ರು
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?
*ಜಯಂತಿ
ಚೇತನ್ ಅಮೆರಿಕದಲ್ಲಿ ಓದಿಕೊಂಡ, ಓಡಾಡಿಕೊಂಡಿದ್ದ ಹುಡುಗ. ಲೋಕ ಸುತ್ತಿದ್ದಕ್ಕೆ ಈ ಗಾಂಭೀರ್ಯವಾ? ವಿಪರೀತ ಓದು ನಗುವನ್ನು ಕಸಿದುಕೊಂಡಿತಾ? ಇವು ಉಪ ಪ್ರಶ್ನೆಗಳು.ಆ ದಿನಗಳು ಹಾಗೂ ಬಿರುಗಾಳಿ ಚಿತ್ರದ ಸುದ್ದಿಗೋಷ್ಠಿಗಳಲ್ಲೂ ಚೇತನ್ ತೀರಾ ಗಂಭೀರವಾಗಿ ಕಾಣಿಸಿಕೊಂಡಿದ್ದರು. ನಾಯಕರ ಚೆಲ್ಲುತನವಾಗಲೀ, ಪೆದ್ದುತನವಾಗಲೀ ಅವರ ನಡೆನುಡಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂಥ ನಡವಳಿಕೆ ಅಪರೂಪ. ಅವರ ಮಾತುಗಳನ್ನು ಕೇಳುತ್ತಿದ್ದರೆ ಕೆಲವೊಮ್ಮೆ ವಿಷ್ಣುವರ್ಧನ್ ನೆನಪಾಗುವುದಂಟು. ಆದರೆ, ವಿಷ್ಣು ವೇದಾಂತ ಹರೆಯದ ಹುಡುಗನಿಗೆ ಬೇಕಾ?
ಮಾತು ಮರೆತವರಂತೆ ಕಂಡ ಚೇತನರನ್ನು ಮತ್ತೆ ಕೆಣಕಿದೆವು ಏಕಿಷ್ಟು ಗಂಭೀರ? ಇಲ್ಲಪ್ಪ ಎಂದರು ಚೇತನ್. ನನಗೆ ಈವರೆಗೆ ಯಾರೂ ಈ ರೀತಿ ಕೇಳಿಲ್ಲ ಎಂದರು. ಅಂದಹಾಗೆ, ಚೇತನ್ರ ಮುಂದಿನ ಚಿತ್ರದ ಹೆಸರು ಸೂರ್ಯಕಾಂತಿ. ಆ ದಿನಗಳು ನಿರ್ದೇಶಿಸಿದ್ದ ಚೈತನ್ಯ ಸೂರ್ಯಕಾಂತಿಯ ಸಾರಥ್ಯ ವಹಿಸಿದ್ದಾರೆ. ಸೂರ್ಯನತ್ತ ಹೊರಳುತ್ತಲೇ ನಗುವ ಹೂವು ಸೂರ್ಯಕಾಂತಿ. ಆ ನಗೆಕಾಂತಿ ಹೂಸಂಗದಲ್ಲಿ ಚೇತನ್ಗೂ ಕೊಂಚ ಸಿದ್ಧಿಸಲಿ.
ಪೂರಕ
ಓದಿಗೆ
ಬಿರುಗಾಳಿ:
ಗಾಳಿಯಲ್ಲೊಂದು
ಹೊಸ
ಗೋಪುರ
ಆ
ದಿನಗಳು
ಚೇತನ್
ರ
ಬಿರುಗಾಳಿ
ಟ್ರೈಲರ್