twitter
    For Quick Alerts
    ALLOW NOTIFICATIONS  
    For Daily Alerts

    ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

    By Staff
    |

    *ಜಯಂತಿ

    Chetan
    ಚೇತನ್ ಯಾಕಿಷ್ಟು ನೀವು ಗಂಭೀರ? ಪ್ರಶ್ನೆ ಕೇಳಿಸಿಕೊಂಡ ಚೇತನ್ ಇನ್ನೂ ಗಂಭೀರರಾದರು. ಈ ಪ್ರಶ್ನೆಗೆ ಕಾರಣ ಬಿರುಗಾಳಿ ಚಿತ್ರದಲ್ಲಿನ ಅವರ ಅಭಿನಯ. ಇಡೀ ಸಿನಿಮಾದಲ್ಲಿ ನಗು ಮರೆತವರಂತೆ ಚೇತನ್ ಕಾಣಿಸಿಕೊಂಡಿದ್ದಾರೆ. ಇಬ್ಬರು ನಾಯಕಿಯರು ತಂಗಾಳಿಯಂತೆ ಸುಳಿದಾಡಿದರೂ ಚೇತನ್ ಅವರದ್ದು ವಿಶ್ವಾಮಿತ್ರನ ಪೋಸು. ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

    ಚೇತನ್ ಅಮೆರಿಕದಲ್ಲಿ ಓದಿಕೊಂಡ, ಓಡಾಡಿಕೊಂಡಿದ್ದ ಹುಡುಗ. ಲೋಕ ಸುತ್ತಿದ್ದಕ್ಕೆ ಈ ಗಾಂಭೀರ್ಯವಾ? ವಿಪರೀತ ಓದು ನಗುವನ್ನು ಕಸಿದುಕೊಂಡಿತಾ? ಇವು ಉಪ ಪ್ರಶ್ನೆಗಳು.ಆ ದಿನಗಳು ಹಾಗೂ ಬಿರುಗಾಳಿ ಚಿತ್ರದ ಸುದ್ದಿಗೋಷ್ಠಿಗಳಲ್ಲೂ ಚೇತನ್ ತೀರಾ ಗಂಭೀರವಾಗಿ ಕಾಣಿಸಿಕೊಂಡಿದ್ದರು. ನಾಯಕರ ಚೆಲ್ಲುತನವಾಗಲೀ, ಪೆದ್ದುತನವಾಗಲೀ ಅವರ ನಡೆನುಡಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂಥ ನಡವಳಿಕೆ ಅಪರೂಪ. ಅವರ ಮಾತುಗಳನ್ನು ಕೇಳುತ್ತಿದ್ದರೆ ಕೆಲವೊಮ್ಮೆ ವಿಷ್ಣುವರ್ಧನ್ ನೆನಪಾಗುವುದಂಟು. ಆದರೆ, ವಿಷ್ಣು ವೇದಾಂತ ಹರೆಯದ ಹುಡುಗನಿಗೆ ಬೇಕಾ?

    ಮಾತು ಮರೆತವರಂತೆ ಕಂಡ ಚೇತನರನ್ನು ಮತ್ತೆ ಕೆಣಕಿದೆವು ಏಕಿಷ್ಟು ಗಂಭೀರ? ಇಲ್ಲಪ್ಪ ಎಂದರು ಚೇತನ್. ನನಗೆ ಈವರೆಗೆ ಯಾರೂ ಈ ರೀತಿ ಕೇಳಿಲ್ಲ ಎಂದರು. ಅಂದಹಾಗೆ, ಚೇತನ್‌ರ ಮುಂದಿನ ಚಿತ್ರದ ಹೆಸರು ಸೂರ್ಯಕಾಂತಿ. ಆ ದಿನಗಳು ನಿರ್ದೇಶಿಸಿದ್ದ ಚೈತನ್ಯ ಸೂರ್ಯಕಾಂತಿಯ ಸಾರಥ್ಯ ವಹಿಸಿದ್ದಾರೆ. ಸೂರ್ಯನತ್ತ ಹೊರಳುತ್ತಲೇ ನಗುವ ಹೂವು ಸೂರ್ಯಕಾಂತಿ. ಆ ನಗೆಕಾಂತಿ ಹೂಸಂಗದಲ್ಲಿ ಚೇತನ್‌ಗೂ ಕೊಂಚ ಸಿದ್ಧಿಸಲಿ.

    ಪೂರಕ ಓದಿಗೆ
    ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ
    ಆ ದಿನಗಳು ಚೇತನ್ ರ ಬಿರುಗಾಳಿ ಟ್ರೈಲರ್

    Thursday, February 19, 2009, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X