Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಲಹರಿ'ಯಿಂದ ವಿಭಿನ್ನ ಪ್ರಯತ್ನ ಅನ್ನದಾತಂ ಶರಣಂ
ರೈತರ ಬಗ್ಗೆ ಕಾಳಜಿ ಹೊಂದಿರುವ ಯುವಕ ಅವಿರಾಂ ಕಂಠೀರವ ಅವರು ನಮಗಾಗಿ ಪ್ರಾಣತೆತ್ತು ಹುತಾತ್ಮರಾದ ಹಾಗೂ ಈಗಲೂ ನಮ್ಮಗೆಲ್ಲ ಅನ್ನ ನೀಡುತ್ತಿರುವ ರೈತಾಪಿ ವರ್ಗಕ್ಕೆ ಗೌರವ ಸಲ್ಲಿಸಲೆಂದು 'ಅನ್ನದಾತಂ ಶರಣಂ' ಎಂಬ ದೃಶ್ಯಗೀತೆಯೊಂದನ್ನು ಮಾಡಿದ್ದಾರೆ.
ಈ ಸೀಡಿಯ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ರಾಜೇಶ್ ಕೃಷ್ಣನ್, ಶಶಿಧರ್ ಕೋಟೆ, ರಮೇಶ್ ಚಂದ್ರ, ಅಜೇಯ್ ವಾರಿಯರ್, ಸಂಗೀತಾಕಟ್ಟಿ, ಸುರೇಖ, ದಿವ್ಯಾರಾಘವನ್ ಹಾಗೂ ಅನುರಾಧಾ ಭಟ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಸೀಡಿಯನ್ನು ಹೆಸರಾಂತ ಲಹರಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಈ ಸೀಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಂತೋಷ್ ಹೆಗ್ಡೆ ಅವರು, "ನಮ್ಮ ರೈತರ ಬಗ್ಗೆ ಯಾರು ಕಾಳಜಿ ಇಟ್ಟುಕೊಳ್ಳಬೇಕಾದವರು ಇಟ್ಟುಕೊಂಡಿಲ್ಲ. ಇಂಥ ಕೆಲಸಗಳ ಮೂಲಕ ನಾವು ರೈತ ಕುಟುಂಬಗಳಿಗೆ ಸಾಂತ್ವನ ಹೇಳಬಹುದು" ಎಂದರು. ಹೃದಯ ತಜ್ಞೆ ಡಾ:ವಿಜಯಲಕ್ಷ್ಮೀ ಬಾಳೆಕುಂದ್ರಿ, ರಮೇಶ್ ಚಂದ್ರ, ಲಹರಿ ಸಂಸ್ಥೆಯ ವೇಲು ಮೊದಲಾದ ಗಣ್ಯರು ಈ ಸೀಡಿಯ ಬಗ್ಗೆ ಮಾತನಾಡಿ ಅವಿರಾಂ ಕಂಠೀರವ ಅವರಲ್ಲಿರುವ ರೈತರ ಪರ ಕಾಳಜಿಯನ್ನು ಶ್ಲಾಘಿಸಿದರು. (ಒನ್ಇಂಡಿಯಾ ಕನ್ನಡ)