•  

ಪ್ರೀತಿಸಿದ ಹುಡುಗಿ ಜೊತೆ ಸಿನಿಮಾ ನೋಡಿದ್ದೆ ಕೊನೆ

"ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರಬೇಕಾದರೆ ನಾನು ಸಿನಿಮಾಗಳನ್ನು ಸಿಕ್ಕಾಪಟ್ಟೆ ನೋಡುತ್ತಿದ್ದೆ. ಬಳಿಕ ಅದೇ ಹುಡುಗಿಯನ್ನು ಮದುವೆಯಾದ ಮೇಲೆ ಸಿನಿಮಾಗಳಿಂದ ಕಲಿಯುವುದೇನು ಇಲ್ಲ ಎಂದು ಅನ್ನಿಸಿತು. ಹಾಗಾಗಿ ಚಿತ್ರಗಳನ್ನು ನೋಡುವುದನ್ನು ಬಿಟ್ಟೆ". ಹಾಗಂತ ನಲವತ್ತು ವರ್ಷಗಳ ಹಿಂದಕ್ಕೆ ಹೊರಳಿದವರು ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗಡೆ.

'ಚಿತ್ರ ಸಮೂಹ' ಹಮ್ಮಿಕೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತೋಷ್ ಹೆಗಡೆ ಅವರು ಮಾತನಾಡುತ್ತಿದ್ದರು. ಅವರು ಹಾಸ್ಯಮಿಶ್ರಿತ ಧಾಟಿಯಲ್ಲಿ ಹೇಳುತ್ತಿದ್ದರೆ ಇಡೀ ಸಭೆ ನಗೆಗಡಲಲ್ಲಿ ತೇಲುತ್ತಿತ್ತು. ಸಿನಿಮಾಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಸಿನಿಮಾಗಳಿಗೆ ನನ್ನ ಬೆಂಬಲವಿದೆ. ನಾನು ನೋಡಿದ ಕೊನೆಯ ಚಿತ್ರ 'ಇಷ್ಕ್ ಪರ್ ಜೋರ್'. ಸಿಟಿ ಮಾರುಕಟ್ಟೆಯಲ್ಲಿರುವ ಅಪ್ಸರಾ ಚಿತ್ರಮಂದಿರಲ್ಲಿ ನಲವತ್ತು ವರ್ಷಗಳ ಹಿಂದೆ ನೋಡಿದ ಚಿತ್ರವದು ಎಂದರು.

ನಿತ್ಯೋತ್ಸವ ಕವಿ ಡಾ.ನಿಸಾರ್ ಅಹ್ಮದ್ ಮಾತನಾಡುತ್ತಾ, ಗಿರೀಶ್ ಕಾಸರವಳ್ಳಿ ಅವರ 'ಹಸೀನಾ' ಚಿತ್ರವನ್ನು ನೋಡಿದ್ದೇನೆ. ಅದರಲ್ಲಿನ ಕೆಲವೊಂದು ದೃಶ್ಯಗಳು ಅದ್ಭುತವಾಗಿವೆ. ಹಾಗೆಯೇ 'ಘಟ ಶ್ರಾದ್ಧ' ಚಿತ್ರ ಸಹ ಅತ್ಯುತ್ತಮವಾಗಿದೆ. ಅಂದಿನಿಂದಲೂ ಗಿರೀಶ್ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುತ್ತಲೆ ಬರುತ್ತಿದ್ದಾರೆ. ಅವರ ಚಿತ್ರಗಳಲ್ಲಿ ಸಂವೇದನಾಶೀಲತೆ, ಸೂಚ್ಯತೆ ಇರುವುದರಿಂದ ಅವು ಶ್ರೇಷ್ಠ ಚಿತ್ರಗಳಾಗಿ ನಿಲ್ಲುತ್ತವೆ ಎಂದರು.

ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾದ ಅರುಂಧತಿ ನಾಗ್, ನಾನು 35 ವರ್ಷಗಳಿಂದಲೂ ರಂಗಭೂಮಿಯಲ್ಲಿದ್ದೇನೆ. ಈ ಪ್ರಶಸ್ತಿ ನನಗೆ ಖುಷಿ ತಂದಿದೆ. ಅಮಿತಾಬ್ ಜೊತೆ ನಟಿಸಿದ್ದು ಮರೆಯದ ಅನುಭವ. ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

'ಸಿನಿಮಾ ಯಾನ' ಪುಸ್ತಕಕ್ಕೆ ಸ್ವರ್ಣ ಕಮಲ ಪಡೆದ ಡಾ.ಕೆ.ಪುಟ್ಟಸ್ವಾಮಿ ಮತನಾಡುತ್ತಾ, ಇದು ಸಿನಿಮಾ ಕುರಿತ ಚರಿತ್ರೆಯ ಪುಸ್ತಕವಂತೂ ಅಲ್ಲ. ಇದರಲ್ಲಿ ಎಲ್ಲವೂ ಸಮಗ್ರವಾಗಿಲ್ಲ. ಕನ್ನಡ ಚಿತ್ರರಂಗದ ಬಗ್ಗೆ ಸಣ್ಣ ಅವಲೋಕನ ಮಾಡಿದ್ದಕ್ಕೆ ದೊಡ್ಡ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಒಂದು ಸಣ್ಣ ಎಳೆ ಇಟ್ಟುಕೊಂಡು ಮಾಡಿದ ಸಣ್ಣ ಚಿತ್ರಕ್ಕೆ ಈ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ ಎಂದು 'ಪುಟಾಣಿ ಪಾರ್ಟಿ' ಚಿತ್ರದ ನಿರ್ದೇಶಕ ಪಿ ಎನ್ ರಾಮಚಂದ್ರ ಹೇಳಿದರು. ಕನಸೆಂಬ ಕುದುರೆಯನೇರಿ ಚಿತ್ರದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದ ಗೋಪಾಲ ಕೃಷ್ಣ ಪೈ ಹಾಗೂ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಸಹ ಉಪಸ್ಥಿತರಿದ್ದರು.
ಸೆಪ್ಟೆಂಬರ್ 21, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
IPL, Himachal Pradesh Cricket Association Stadium, Dharmasala
Kings XI Punjab: 81 / 3, 13 Overs
1st Test , Lord's Cricket Ground, St John's Wood
West Indies: 100 / 3, 38.1 Overs
IPL, Feroz Shah Kotla, Delhi
Match starts at 08:00 pm IST  

ಸಿನಿಮಾಗಳಲ್ಲಿ ಕಪ್ಪು ಹಣ: ಯುಆರ್ಎ ವಿಷಾದ

ಕೆಲವು ವರ್ಗದ ಜನರಿಗೆ ಚಿತ್ರ ನಿರ್ಮಾಣ ಎಂಬುದು ಕಪ್ಪು ಹಣ ತೊಡಗಿಸುವ ಕ್ಷೇತ್ರವಾಗಿ ಪರಿಣಮಿಸಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ಸಾಹಿಸಿ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಚಲನಚಿತ್ರ ಸಂಸ್ಕೃತಿ ಒಂದು ಸಂವಾದ' ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡುತ್ತಿದ್ದರು.ಸಮಾಜದ ಎಲ್ಲ ವರ್ಗದ ಜನ ಹೋಗಿ ನೋಡುವಂತಹ ಸಿನಿಮಾ ಬರಬೇಕು. ಕಡಿಮೆ ಅವಧಿಯ.....

ಶತಮಾನದ ಶ್ರೇಷ್ಠ ಚಿತ್ರವಾಗಿ 'ಘಟಶ್ರಾದ್ಧ'

ಗಿರೀಶ್ ಕಾಸವಳ್ಳಿ ನಿರ್ದೇಶನದ ಚೊಚ್ಚಲ ಚಿತ್ರ 'ಘಟಶ್ರಾದ್ಧ' ಶತಮಾನದ 20 ಸರ್ವಶ್ರೇಷ್ಠ ಚಿತ್ರಗಳಲ್ಲಿ ಸ್ಥಾನಪಡೆದಿದೆ. ಯು ಆರ್ ಅನಂತಮೂರ್ತಿ ಅವರ ಸಣ್ಣಕತೆ ಆಧಾರವಾಗಿ ಈ ಚಿತ್ರವನ್ನು 1977ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದರು. ಈ ಚಿತ್ರದ ಪರವಾಗಿ 1.6 ಮಿಲಿಯನ್ ಜನರು ಮತ ಚಲಾಯಿಸಿದ್ದಾಗಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಕಟಿಸಲಾಗಿದೆ. ಕಪ್ಪು ಬಿಳುಪು ಚಿತ್ರವಾದ 'ಘಟಶ್ರಾದ್ಧ' 1977ರಲ್ಲಿ ತೆರೆಕಂಡಿತ್ತು......

ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಸುಗ್ಗಿ

ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೊತೆಯಾಗಿದೆ. ಬೆಂಗಳೂರಿಗರಿಗೆ, ಕನ್ನಡ ಚಿತ್ರಪ್ರೇಮಿಗಳಿಗೆ ಒಂದು ವಾರ ಕಾಲ ಹಬ್ಬವೋ ಹಬ್ಬ. ಜ.16ರಿಂದ ಜ.22ರವರೆಗೆ ಚಿತ್ರೋತ್ಸವದಲ್ಲಿ ಎರಡು ಡಜನ್ ಕನ್ನಡ ಚಿತ್ರಗಳು ಪ್ರದರ್ಶನ ಕಾಣಲಿವೆ. ಎರಡು ಕನಸು,ಸೊಸೆ ತಂದ ಸೌಭಾಗ್ಯ, ತಬರನ ಕಥೆ, ಭೂಮಿಗೀತ, ಬೆಳದಿಂಗಳ ಬಾಲೆ... ಚಿತ್ರಗಳು ಚಿತೋತ್ಸವದಲ್ಲಿ ಪ್ರಧಾನ ಆಕರ್ಷಣೆಯಾಗಲಿವೆ. ಒಟ್ಟು 24 ಕನ್ನಡ ಚಿತ್ರಗಳನ್ನು ಪುನರಾವಲೋಕನ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ. ಈ.....
User Comments
ವೀರ ಕನ್ನಡಿಗ 13 Nov 2010 05:10 pm
ಲೇ ಕನ್ನಡ ಸಿನಿಮಾ ನೋಡೇ ಲೇ ......... ನಿನ್ನಂಥ ಬೊ ................ ಕರ್ನಾಟಕ್ ಬಿಟ್ಟು ತೊಲಗಿ
unknown 22 Sep 2010 04:15 pm
sir watch raj family's movies then u will change ur opinion
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article