•  

ಸೌತ್ ಸ್ಕೋಪ್ ಪ್ರಶಸ್ತಿ ಕೊಳ್ಳೆಹೊಡೆದ ಮನಸಾರೆ

ಹೈದರಾಬಾದ್, ಸೆ. 20 : ಯೋಗರಾಜ್ ಭಟ್ಟರ ಮನೋರೋಗಿಗಳ ಪ್ರೇಮದ ಕಥೆಯ 'ಮನಸಾರೆ' ಚಿತ್ರ ಸೌತ್ ಸ್ಕೋಪ್ ಸಿನೆ ಪ್ರಶಸ್ತಿ 2010ರಲ್ಲಿ ಪ್ರಶಸ್ತಿಗಳ ಕೊಳ್ಳೆ ಹೊಡೆದಿದೆ.

ಸೆಪ್ಟೆಂಬರ್ 19ರ ರಾತ್ರಿ ಹೈದರಾಬಾದಿನ ನೊವೊಟೆಲ್ ಹೊಟೇಲಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 'ಮನಸಾರೆ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡು ಕನ್ನಡ ಚಿತ್ರ ವಿಭಾಗದಲ್ಲಿ ತೀರ್ಪುಗಾರರ ಮನಸೂರೆ ಮಾಡಿದೆ. ಮನಸಾರೆ ಅತ್ಯುತ್ತಮ ಸಿನೆಮಾ, ಯೋಗರಾಜ್ ಭಟ್ ಅತ್ಯುತ್ತಮ ನಿರ್ದೇಶಕರಾಗಿ ಪ್ರಶಸ್ತಿ ಗಳಿಸಿದರು. ಮನಸಾರೆಗಾಗಿ ಐಂದ್ರಿತಾ ರೇ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದು, ಅದೇ ಚಿತ್ರದ ಎಲ್ಲೋ ಮಳೆಯಾಗಿದೆ ಗೀತ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಬಗಿಲಿಗಿಳಿಸಿಕೊಂಡರು.

ರಾಜ್ ದಿ ಶೋ ಮ್ಯಾನ್ ಮತ್ತು ಬಿರುಗಾಳಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಪುನೀತ್ ರಾಜ್ ಕುಮಾರ್ ಅವರು 'ರಾಜ್ - ದಿ ಶೋ ಮ್ಯಾನ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ಚಿತ್ರದ ಸಿನೆಮಾಟೋಗ್ರಫಿಗಾಗಿ ಕೃಷ್ಣ ಪ್ರಶಸ್ತಿ ಪಡೆದಿದ್ದಾರೆ. ಬಿರುಗಾಳಿಯಲ್ಲಿ ನೀಡಿದ ಸಂಗೀತಕ್ಕಾಗಿ ಅರ್ಜುನ್ ಅತ್ಯುತ್ತಮ ಸಂಗೀತ ನಿರ್ದೇಶಕ ಸೌತ್ ಸ್ಕೋಪ್ ಪುತ್ಥಳಿಯನ್ನು ಎತ್ತಿಹಿಡಿದರೆ, ಶಮಿತಾ ಮಲ್ನಾಡ್ 'ಮಧುರಾ ಪಿಸುಮಾತಿಗೆ' ಮಾಧುರ್ಯಭರಿತ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಶಸ್ತಿ ವಿವರ ಕೆಳಗಿನಂತಿದೆ

ಅತ್ಯುತ್ತಮ ಸಿನೆಮಾ
- ಮನಸಾರೆ
ಅತ್ಯುತ್ತಮ ನಿರ್ದೇಶಕ - ಯೋಗರಾಜ್ ಭಟ್, ಮನಸಾರೆ
ಅತ್ಯುತ್ತಮ ನಟ - ಪುನೀತ್ ರಾಜ್ ಕುಮಾರ್, ರಾಜ್ - ದಿ ಶೋ ಮ್ಯಾನ್
ಅತ್ಯುತ್ತಮ ನಟಿ - ಐಂದ್ರಿತಾ ರೇ, ಮನಸಾರೆ
ಅತ್ಯುತ್ತಮ ಪೋಷಕ ನಟ - ದಿಲೀಪ್ ರಾಜ್, ಲವ್ ಗುರು
ಅತ್ಯುತ್ತಮ ಪೋಷಕ ನಟಿ - ಅಂಜನಾ ಸುಖಾನಿ, ಮಳೆಯಲಿ ಜೊತೆಯಲಿ
ಅತ್ಯುತ್ತಮ ಹಾಸ್ಯ ನಟ - ಸಾಧು ಕೋಕಿಲಾ, ರಾಮ್
ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್, ಬಿರುಗಾಳಿ
ಅತ್ಯುತ್ತಮ ಹಿನ್ನೆಲೆ ಗಾಯಕ - ಚೇತನ್, ಹಾಡು : ಯಾರೇ ನೀ ದೇವತೆಯಾ, ಅಂಬಾರಿ
ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಮಿತಾ ಮಲ್ನಾಡ್, ಹಾಡು : ಮಧುರಾ ಪಿಸುಮಾತಿಗೆ, ಬಿರುಗಾಳಿ
ತೀರ್ಪುಗಾರರ ಪ್ರಶಸ್ತಿ - ಜಗ್ಗೇಶ್, ಎದ್ದೇಳು ಮಂಜುನಾಥ
ಅತ್ಯುತ್ತಮ ಸಿನೆಮಾಟೋಗ್ರಫರ್ - ಎಸ್ ಕೃಷ್ಣ, ರಾಜ್ - ದಿ ಶೋ ಮ್ಯಾನ್
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ, ಹಾಡು : ಎಲ್ಲೋ ಮರೆಯಾಗಿದೆ, ಮನಸಾರೆ
ಸೆಪ್ಟೆಂಬರ್ 20, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
IPL, Himachal Pradesh Cricket Association Stadium, Dharmasala
Kings XI Punjab: 81 / 3, 13 Overs
1st Test , Lord's Cricket Ground, St John's Wood
West Indies: 100 / 3, 37.5 Overs
IPL, Feroz Shah Kotla, Delhi
Match starts at 08:00 pm IST  

'ಮನಸಾರೆ' ಪುಳಕಗೊಂಡ ಶ್ರೇಯಾ ಘೋಶಾಲ್!

ಬೆಂಗಳೂರಿನಿಂದ 40 ಕಿ.ಮೀ ದೂದರ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಹುನಿರೀಕ್ಷಿತ 'ಮನಸಾರೆ' ಚಿತ್ರದ ಧ್ವನಿಸುರುಳಿ ಮತ್ತು ಸಿಡಿಗಳು ಬಿಡುಗಡೆಯಾದವು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಶಾಲ್ ಆಗಮಿಸಿದ್ದರು. ತಮ್ಮ ಹಾಡುಗಳಿಗೆ ಕನ್ನಡದಲ್ಲಿ ಭಾರಿ ಬೇಡಿಕೆಗೆ ಇರುವ ಬಗ್ಗೆ ಸ್ವತಃ ಶ್ರೇಯಾ ಘೋಶಾಲ್ ಅವರೇ ಪುಳಕಗೊಂಡಿದ್ದರು. ಪಶ್ಚಿಮ.....

ಅಯ್ಯೋ ನನ್ನ ಹೆಸರು ಅಂದ್ರಿತಾ ರೇ ಅಲ್ಲ ಐಂದ್ರಿತಾ!

ತನ್ನ ಹೆಸರನ್ನು ಎಲ್ಲರೂ ಅಂದ್ರಿತಾ ರೇ ಎಂದು ತಪ್ಪಾಗಿ ಕರೆಯುತ್ತಿದ್ದಾರೆ ಎಂದು ಚಿಗರೆ ಕಂಗಳ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ನೀವು ತಿಳಿದಿರುವಂತೆ ನನ್ನ ಹೆಸರು ಅಂದ್ರಿತಾ ಅಲ್ಲ ಐಂದ್ರಿತಾ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಈ ವಿಷಯವನ್ನು ಸಾಕಷ್ಟು ಸಲ ಸ್ಪಷ್ಟಪಡಿಸಿದ್ದೇನೆ ಎನ್ನುತ್ತಾರೆ ಐಂದ್ರಿತಾ.ನಾನು ಅಭಿನಯಿಸಿರುವ ಚಿತ್ರಗಳ ಪ್ರೊಮೋಗಳಲ್ಲೂ ನನ್ನ ಹೆಸರನ್ನು ಅಂದ್ರಿತಾ ಎಂದೇ ಬರೆಯುತ್ತಿದ್ದಾರೆ. ಎಲ್ಲಾ.....

ದಿಗಂತ್ ಜತೆ ಶುಭಾ ಪೂಂಜಾರ ಹೊಸ ಚಿತ್ರ

ಶುಭಾ ಪುಂಜ ಚಿತ್ರಗಳು ಒಂದರ ನಂತರ ಒಂದು ಮಗುಚಿ ಬೀಳುತ್ತಿವೆ, ಆದರೂ ಕನ್ನಡ ಚಿತ್ರರಂಗದಲ್ಲಿ ಅವರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಬಹಳಷ್ಟು ಕನ್ನಡ ಚಿತ್ರಗಳು ಈ ಸುಂದರಿಯನ್ನ್ನು ಹುಡುಕಿಕೊಂಡು ಬರುತ್ತಿವೆ. ಈಗ ಇನ್ನೂ ಹೆಸರಿಡದ ಚಿತ್ರದಲ್ಲಿ ದಿಗಂತ್ ಜತೆ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರವನ್ನು ವಿ ಉಮಾಕಾಂತ್ ನಿರ್ದೇಶಿಸುತ್ತಿದ್ದಾರೆ. ಅನುರಾಗ ಸಂಗಮ, ಮದುವೆ ಮತ್ತು ರಂಗೇನಹಳ್ಳಿಯಾಗೆ ರಂಗಾದ ಗೌಡ ಚಿತ್ರಗಳನ್ನು ಈಗಾಗಲೇ.....
User Comments
ವೀನ ಆದಿತ್ಯ 22 Sep 2010 11:06 pm
ನನು ಎ ಚಿತ್ರಣ ೨ ಸಲ ನೋಡ್ದೆ. ಚಿತ್ರ ಚೆನಾಗಿದೆ, ಅಂದ್ರಿತ ಚೆನಾಗ್ ಮಾಡಿದಾಳೆ. ಸುಮ್ನೆ ಅವಳು ನಿಮಗಿಷ್ಟ ಇಲ ಅಂತ, ಅವಲ ಆಕ್ಟಿಂಗ್ ಯಾಕೆ ಬಯ್ತಿರ? ಅವಳ್ ಮಾಡಿದ ತಪ್ಪಾದರೂ ಏನು? ನಿಮ್ ಅಮೆರಿಕದಲಿ ಅವಳು ಮಾಡ್ದ ಕೆಲಸಕೆ ವಿಸಲ್ ಬ್ಲೋವರ್ ಅಂತಾರೆ. ಅದು ತಪ್ಲ
ಕನ್ನಡ ಚಿತ್ರಪ್ರೇಮಿ 22 Sep 2010 08:22 pm
ಮನಸಾರೆ ಒಂದು ಬೋರ್ ಹೊಡೆಸುವ ಚಿತ್ರ... ಐಂದ್ರಿತಾ ರೇ ಬೆಂಗಾಲಿ ಹುಡುಗಿ ಅಂತ ಪ್ರಶಸ್ತಿ ಕೊಡುತ್ತಾರೆ ವಿನಃ, ಆಕೆ ಒಬ್ಬ ನಟನೆ ಬಾರದಂತಹಾ ಹುಡುಗಿ.. ಇದನ್ನೆಲ್ಲಾ ನೋಡಿದಾಗ ಅನಿಸುವುದು ಏನು? ಹಣದ ಪ್ರಭಾವ...
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article