•  

ಉಪೇಂದ್ರನಿಗೆ ಲೈಫು ಕೊಟ್ಟ ನಿರ್ಮಾಪಕ ನಿಧನ

Producer Jagannath
ಎ, ಹಗಲು ವೇಷ, ಸೂರ್ಯ ದಿ ಗ್ರೇಟ್, ಅಗ್ರಹಾರ, ಆರ್ಭಟ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಜಗನ್ನಾಥ್ (52) ಮೂತ್ರ ಜನಕಾಂಗದ ವೈಫಲ್ಯದಿಂದ ನಿಧನರಾಗಿದ್ದಾರೆ. ಸುದೀರ್ಘ ಸಮಯದಿಂದ ಮೂತ್ರ ಜನಕಾಂಗದ ತೊಂದರೆಯಿಂದ ಬಳಲುತ್ತಿದ್ದ ಅವರು ಡೈಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು.

ಉಪೇಂದ್ರ ಮುಖ್ಯಭೂಮಿಕೆಯಲ್ಲಿದ್ದ ಯಶಸ್ವಿ ಚಿತ್ರ 'ಎ' ಚಿತ್ರವನ್ನು ಜಗನ್ನಾಥ್ ಅವರು ಮಂಜುನಾಥ್ ಮತ್ತು ರಾಧಾಕೃಷ್ಣ ಅವರೊಂದಿಗೆ ಕೂಡಿ ನಿರ್ಮಿಸಿದ್ದರು. ರು.20 ಕೋಟಿ ಲಾಭ ಮಾಡಿದ 'ಎ' ಚಿತ್ರ ಮೂವರು ನಿರ್ಮಾಪಕರ ಜೇಬು ತುಂಬದಿದ್ದರೂ ವಿತರಕ ಯಶ್‌ರಾಜ್ ಅವರಿಗೆ ಭರ್ಜರಿ ಲಾಭ ತಂದಿತ್ತು.

ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯನ ನಟನಾಗಿ ಅಭಿನಯಿಸಿದ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಹಗಲು ವೇಷ' ಚಿತ್ರವೂ ನೆಲಕಚ್ಚಿತು. ಇದಾದ ಬಳಿಕ 'ಸೂರ್ಯ ದಿ ಗ್ರೇಟ್' ಚಿತ್ರವೂ ಬಾಕ್ಸಾಫೀಸ್ ಗಳಿಕೆಯಲ್ಲಿ ಹೇಳ ಹೆಸರಿಲ್ಲದಂತಾಗಿದ್ದು ಜಗನ್ನಾಥ್ ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿತು.

ಈ ಎಲ್ಲಾ ಸೋಲುಗಳಿಂದ ಜರ್ಜರಿತರಾದ ಜಗನ್ನಾಥ್ ಆರೋಗ್ಯ ಕೈಕೊಟ್ಟಿತು. ಶಂಕರ ಫೌಂಡೇಷನ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ(ಸೆ.17) ಅವರು ಕೊನೆಯುಸಿರೆಳೆದಿದ್ದಾರೆ. ತನಗೆ ಲೈಫು ಕೊಟ್ಟ ನಿರ್ಮಾಪಕನ ಕುಟುಂಬಿಕರನ್ನು ಉಪೇಂದ್ರ ಭೇಟಿ ಮಾಡಿ ಅವರನ್ನು ಸಂತೈಸಿದ್ದಾಗಿ ತಿಳಿದುಬಂದಿದೆ.
ಸೆಪ್ಟೆಂಬರ್ 20, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
IPL, Himachal Pradesh Cricket Association Stadium, Dharmasala
Kings XI Punjab: 81 / 3, 13 Overs
1st Test , Lord's Cricket Ground, St John's Wood
West Indies: 100 / 3, 37.5 Overs
IPL, Feroz Shah Kotla, Delhi
Match starts at 08:00 pm IST  

ರಜನಿ ಎಂಧಿರನ್ ಗೆ ಉಪ್ಪಿ ಹಾಲಿವುಡ್ ಸ್ಫೂರ್ತಿ?

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ 'ಎಂಧಿರನ್' ಸೆಪ್ಟೆಂಬರ್ 24ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಕಥೆ ಕೇಳಿದರೆ ನಮ್ಮ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಹಾಲಿವುಡ್' ಚಿತ್ರ ನೆನಪಿಗೆ ಬಾರದೆ ಇರದು. ಥೇಟ್ ಕನ್ನಡದ'ಹಾಲಿವುಡ್' ಚಿತ್ರದ ಪಡಿಯಚ್ಚಿನಂತಿದೆ. ಕತೆ ಓದಿ ನೋಡಿ ನಿಮಗೂ ಸಂದೇಹ ಬಾರದೆ ಇರದು!ಈ ಚಿತ್ರದಲ್ಲಿ.....

ಬುದ್ಧಿವಂತರಿಗೆ ಮಾತ್ರವಲ್ಲ ದಡ್ಡರು ನೋಡಬಹುದು!

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'ಎ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 'ಎ-2' ಚಿತ್ರ ಬರಲಿದೆ. ಆದರೆ ಈ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ.ಆಕ್ಷನ್, ಕಟ್ ಸಹ ಹೇಳುತ್ತಿಲ್ಲ. 'ಎ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಜಗನ್ನಾಥ್ ಅವರ ಸಹೋದರ ಬಸವರಾಜು 'ಎ-2' ಚಿತ್ರದ ನಿರ್ಮಾಪಕರು. ಚಿತ್ರದ ನಾಯಕ.....

ಐವರು ನಾಯಕಿಯರ ಮಧ್ಯೆ ಉಪ್ಪಿ ಎಂಬ ಬುದ್ಧಿವಂತ!

ಬುದ್ದಿವಂತರಿಗಾಗಿ 'ಎ'ಚಿತ್ರ ತೆಗೆದ ಉಪೇಂದ್ರ, ಈಗ ಬುದ್ಧಿವಂತ ಚಿತ್ರದ ನಾಯಕ. ಅವರೊಟ್ಟಿಗೆ ಈ ಚಿತ್ರದಲ್ಲಿ ಐವರು ನಾಯಕಿಯರು ನಟಿಸಲಿದ್ದಾರೆ. ಹೀಗಾಗಿ ಇದು ಫೈವ್ ಸ್ಟಾರ್ ಚಿತ್ರ! ನಾಯಕಿಯರ ಆಯ್ಕೆಗೆ ಬಹಳ ಕಸರತ್ತು ನಡೆಯುತ್ತಿದೆ. ಮುಂಬೈ ಹುಡುಗಿಯರ ಜೊತೆಗೆ, ಕನ್ನಡದ ಹುಡುಗಿಯರ.....
User Comments
ವಿಷ್ಣು ಅಭಿಮಾನಿ 20 Sep 2010 06:35 pm
ಇವರ ಆತ್ಮಕ್ಕೆ ದೇವರಿ ಶಾಂತಿ ನೀಡಲಿ.
ರಾಜ್ ಅಭಿಮಾನಿ 20 Sep 2010 02:31 pm
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ... ರಾಜ್ ಮಕ್ಕಳ ಚಿತ್ರವನ್ನು ನಿರ್ಮಿಸುವ ಮೊದಲು ಸ್ವಲ್ಪ ಯೋಚಿಸಿ ಹೆಜ್ಜೆ ಇಡುವುದು ಉತ್ತಮ
ರವಿ 20 Sep 2010 02:49 pm
ಇವತ್ತು ನಿರ್ಮಾಪಕನಿಗೆ ಲಾಬ ಕೊಡುವ ಇಬ್ಬರೇ ನಟರೆಂದರೆ ಪುನಿತ್ ಮತ್ತು ದರ್ಶನ್...ಗೊತ್ತೇನೋ ಮೂದೇವಿ...
jayaraman 20 Sep 2010 09:14 pm
ಲೋ ಶಿವಣ್ಣ toilet clean ಗೂ ಯೋಗ್ಯತೆ ಇಲ್ಲ ನಿನ್ನಗೆ ತು ನ ಇನ್ನ ದರಿದ್ರ ಜನ್ಮಕ್ಕೆ ಮುಸುಕು ಬೇರೆ.
ಶಾನ್ 22 Sep 2010 10:51 am
ಇರುವುದನ್ನು ಕಳೆದು ಕೊಳ್ಳುವುದಕ್ಕ?
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article