•  

'ಡೆಡ್ಲಿ ಸೋಮ' ಆದಿತ್ಯಾ ಪ್ರಾಣಾಪಾಯದಿಂದ ಪಾರು

'ಡೆಡ್ಲಿ ಸೋಮ ಭಾಗ 2' ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ನಟ ಆದಿತ್ಯಾ ಗಾಯಗೊಂಡಿದ್ದಾರೆ. ಅವರ ಬೆನ್ನು ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರು ಯಲಹಂಕ ಸಮೀಪದ ಫ್ಯಾಕ್ಟರಿಯೊಂದರಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ 'ಡೆಡ್ಲಿ ಸೋಮ ಭಾಗ 2' ಚಿತ್ರೀಕರಣ ನಡೆಯುತ್ತಿತ್ತು. ಡ್ಯೂಪಿಲ್ಲದೆಯೇ ಸಾಹಸ ಸನ್ನಿವೇಶವೊಂದರಲ್ಲಿ ಆದಿತ್ಯಾ ಮಾಡುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ. ಚಿತ್ರೀಕರಣ ವೇಳೆ ಆದಿತ್ಯಾ 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು.

ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಆದಿತ್ಯಾ ಅವರಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂದು ಸಾಹಸ ನಿರ್ದೇಶನ ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಆದಿತ್ಯಾ ಅವರ ತಂದೆ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸುತ್ತಾ, ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಯಾರದೂ ಏನು ತಪ್ಪಿಲ್ಲ. ಸಾಹಸ ಚಿತ್ರೀಕರಣ ಎಂದರೆ ಇದೆಲ್ಲಾ ಸಾಮಾನ್ಯ. ಆದಿತ್ಯ ಗಂಭೀರವಾಗಿಯೇನು ಗಾಯಗೊಂಡಿಲ್ಲ, ಆರಾಮವಾಗಿಯೇ ಇದ್ದಾನೆ. ಎಕ್ಸ್ ರೇ ಫಲಿತಾಂಶ ಬಂದ ನಂತರ ಆದಿತ್ಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯಲಿದೆ ಎಂದಿದ್ದಾರೆ.

ರವಿಶ್ರೀವತ್ಸ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಜಾಕ್ ಮಂಜು ಮತ್ತು ಶೋಭಾ ರಾಜಣ್ಣ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ಸಾಧುಕೋಕಿಲ. ಮುಖ್ಯಭೂಮಿಕೆಯಲ್ಲಿ ಆದಿತ್ಯಾ ಮತ್ತು ಪ್ರೀತಾ ರಾವ್ ಅಭಿನಯಿಸುತ್ತಿದ್ದಾರೆ.
ಫೆಬ್ರವರಿ 2, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

'ಡೆಡ್ಲಿ 2' ರಲ್ಲಿ ಹಿರಿಯ ನ್ಯಾಯವಾದಿ ಎಂಟಿ ನಾಣಯ್ಯ

ರವಿ ಶ್ರೀವತ್ಸ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ 'ಡೆಡ್ಲಿ 2' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಕಲಾ ನಿರ್ದೇಶಕ ಆನಂದ್ ಅವರು ನಿರ್ಮಿಸಿದ ವಿಶೇಷವಾದ ಕೋರ್ಟ್ ಸೆಟ್‌ನಲ್ಲಿ ಫೆ.26 ಹಾಗೂ 27 ರಂದು ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಎಸಿಪಿ ಪಾತ್ರಧಾರಿ ದೇವರಾಜ್, ಸೋಮನತಾಯಿ ಪಾತ್ರಧಾರಿ ಸುಹಾಸಿನಿ ಹಾಗೂ ರವಿಕಾಳೆ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಒಟ್ಟು 6 ದಿನಗಳ.....
User Comments
ತುಂಗ 03 Feb 2010 03:13 pm
ಏನಾಗಲ್ಲ.. ಬಿಡ್ರಿ... ಸುಮ್ನ್ಗೆ ತಲೆ ಯಾಕ್ ಕೆಡ್ಸ್ಕೊಥೀರ
ಮಾರುತಿ 02 Feb 2010 08:12 pm
ಯಾವುದಾದರು ಸದಭಿರುಚಿಯ ಚಿತ್ರಕ್ಕೆ ಇಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ, ನೀನು & ನಿಮ್ಮಪ್ಪ ಇನ್ನೊಂದು ಮುತ್ತಿನಹಾರ ತೆಗಿಬೋದಗಿತ್ತು, ಬಟ್ ರೌಡಿ ಲೈಫ್ ಇಸ್ಟೊಂದು ಇಮ್ಪರ್ತನ್ಸೆ ಕೊಡೋದು ಸರಿಯಲ್ಲ್, ಇನ್ನೊಂದು ಮುತ್ತಿನ ಹಾರ ತೆಗಿಯೋದಕ್ಕೆ "ಸಿಂಹ" ಇಲ್ಲ ಅಂತ ಹೀಗೆ ರೌಡಿ ಗೆ ಮೊರೆ ಹೋದೆಯ?
ವಿಷ್ಣು ಅಭಿಮಾನಿ 02 Feb 2010 08:15 pm
one & only vishnu can do the mutthinahara. I learnt a lot from vishnu sir movies. he is realy great.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article