•  

ಉಮಾಶ್ರೀ ಸೇರಿ ಒಟ್ಟು 54ಮಂದಿಗೆ ರಾಜ್ ಪ್ರಶಸ್ತಿ

ರವಿಬೆಳಗೆರೆ, ಚನ್ನವೀರ ಕಣವಿ, ಪಾಪು, ಡಾ.ಪಂಚಾಕ್ಷರಿ ಗವಾಯಿ ಸೇರಿ 54 ಸಾಧಕರನ್ನು ಡಾ.ರಾಜ್ ಕುಮಾರ್ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರತಿಷ್ಠಾನದ ಅಧ್ಯಕ್ಷ ಮು.ರಮೇಶ್ ಶನಿವಾರ ಮಾತನಾಡುತ್ತಾ, ಧಾರ್ಮಿಕ ಕ್ಷೇತ್ರದಿಂದ ಹಿರೇಮಗಳೂರು ಕಣ್ಣನ್, ಸಾಹಿತ್ಯ ಕ್ಷೇತ್ರದಿಂದ ಚನ್ನವೀರ ಕಣವಿ, ಶಂಕರನಾರಾಯಣ, ಹಂಪ ನಾಗರಾಜಯ್ಯ, ಚಲನಚಿತ್ರ ಕ್ಷೇತ್ರದಿಂದ ಸಿ ವಿ ಶಿವಶಂಕರ್, ದ್ವಾರಕೀಶ್, ಆರ್ ಎನ್ ಸುದರ್ಶನ್ ಹಾಗೂ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರ ನೀಡಿದರು.

ಕನ್ನಡ ಹೋರಾಟಕ್ಕಾಗಿ ಪಾಟೀಲ ಪುಟ್ಟಪ್ಪ, ರಂಗಭೂಮಿ ಏಣಗಿ ಬಾಳಪ್ಪ, ಡಾ ಬಿವಿ ರಾಜಾರಾಂ, ಸಂಗೀತ ಡಾ.ಪಂಚಾಕ್ಷರಿ ಗವಾಯಿ, ಮಾಧ್ಯಮ ರವಿ ಬೆಳೆಗರೆ, ಸಮಾಜ ಸೇವೆ ಮಾಜಿ ಸಚಿವ ಶ್ರೀರಂಗದೇವರಾಯಲು, ಭವರಲಾಲ್ ನಹರ್, ಪದ್ಮಾವತಿ ಯಾದವ್, ತೇಜಸ್ವಿನಿ ಅನಂತಕುಮಾರ್, ವೈದ್ಯಕೀಯ ಡಾ.ಪ್ರಭಾಕರ ಕೋರೆ, ಕಾನೂನು ಬಿ ಡಿ ಹಿರೇಮಠ, ಶಿಕ್ಷಣ ಟಿ ಆರ್ ಸುಬ್ರಹ್ಮಣ್ಯ ಸೇರಿದಂತೆ 54 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಶ್ರೀಕೃಷ್ಣದೇವರಾಯ ಪಟ್ಟಾಧಿಕಾರದ 500ನೇ ವರ್ಷಾಚರಣೆ ನಿಮಿತ್ತ ಹೊಸಪೇಟೆ ಕಲಾಮಂದಿರಲ್ಲಿ ಡಿ.25ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಮೇಶ್ ಮಾಹಿತಿ ನೀಡಿದರು. ಡಿ.23ರಂದು ನೇತ್ರದಾನ ನೋಂದಣಿ ಶಿಬಿರ, ವಿಜಯನಗರ ಸಾಮ್ರಾಜ್ಯದ ಕುರಿತು ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ ನಡೆಯಲಿದೆ ಎಂದು ಅವರು ವಿವರ ನೀಡಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)
ಡಿಸೆಂಬರ್ 13, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಕಾಸರವಳ್ಳಿ ಸ್ಯಾಂಡಲ್‌ವುಡ್‌ನ ಸಜ್ಜನ!

ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ 'ಕನಸೆಂಬ ಕುದುರೆಯನೇರಿ' ಚಿತ್ರದ ಚಿತ್ರೀಕರಣಕ್ಕೆ ತಮ್ಮ ಚಿತ್ರತಂಡ ಉತ್ತರ ಕರ್ನಾಟಕಕ್ಕೆ ಮರಳುವ ಮೊದಲು, ಚಿತ್ರದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ದಟ್ಸ್‌ಕನ್ನಡದೊಂದಿಗೆ ಮಾತನಾಡಿದರು. ಅವರ ಈಚಿನ ಚಿತ್ರ 'ಗುಲಾಬಿ ಟಾಕೀಸ್' ಅನೇಕ ಹಿರಿಮೆಗಳ ಚಿತ್ರ. ಓಸಿಯಾನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ 'ಗುಲಾಬಿ ಟಾಕೀಸ್" ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ. ಈ.....

ಉಮಾಶ್ರೀಗೆ ಚಿನ್ನದ ಉಡುಗೊರೆ ಕೊಟ್ಟ ಅಂಬಿ!

''ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉಮಾಶ್ರೀ ಅವರಿಗೆ ಡಾ.ಜಯಮಾಲಾ ಮತ್ತು ಡಾ.ಬಿ.ಸರೋಜಾದೇವಿ ಅವರು ರೇಷ್ಮೆ ಸೀರೆಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ. ನೀನು ಅವರ ಹಾಗೆ ಸೀರೆ ಕೊಡೋ ಬದಲು ನೆಕ್ಲೇಸ್ ಒಂದನ್ನು ಕೊಡು'' ಎಂದು ಸುಮಲತಾಗೆ ಮಂಡ್ಯದ ಗಂಡು ಅಂಬರೀಶ್ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಜಿಎಂ ರಿಜಾಯ್ಸ್ ಸಭಾಂಗಣದಲ್ಲಿ ಉಮಾಶ್ರೀ ಮತ್ತು ಪ್ರಕಾಶ್ ರೈ.....

ಮಂತ್ರವಾದಿ ಪಾತ್ರದಲ್ಲಿ ಮಿಂಚಲಿರುವ ಉಮಾಶ್ರೀ

ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನ ಚಿತ್ರಕ್ಕೆ ವಿಶಿಷ್ಟ ಶೀರ್ಷಿಕೆಯ ಹುಡುಕಾಟದಲ್ಲಿದ್ದ ನಿರ್ಮಾಪಕರು ಪ್ರಸ್ತುತ 'ಅಂತರಾತ್ಮ' ಎಂದು ನಾಮಕರಣ ಮಾಡಿದ್ದಾರೆ. ಕುತೂಹಲಕಾರಿ ಚಿತ್ರವಾದುದ್ದರಿಂದ ಈ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿರುವ ನಿರ್ದೇಶಕ ಬಿ.ಶಂಕರ್ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಸುತ್ತಿದ್ದಾರೆ.ಕನ್ನಡ ಚಿತ್ರರಂಗದ ಖ್ಯಾತ ಕಲಾವಿದೆ ಉಮಾಶ್ರೀ ಈ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈವರೆಗೂ 380ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ನಟನ.....
User Comments
ರಾಣಿ 16 Dec 2009 02:31 pm
ರವಿ ಬೆಳಗೆರೆ ಅವರೇ, ದಯವಿಟ್ಟು ರೆಡ್ಡಿ ಸಹೋದರರಿಗೆ ಸಪೋರ್ಟ್ ಮಾಡಬೇಡಿ.
ರಾಣಿ 16 Dec 2009 02:27 pm
ರವಿ ಬೆಳಗೆರೆ ಅವರೇ, ದಯವಿಟ್ಟು ರೆಡ್ಡಿ ಸಹೋದರರಿಗೆ ಸಪೋರ್ಟ್ ಮಾಡಬೇಡಿ.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article