•  

ಪಾರ್ವತಮ್ಮ ರಾಜ್ ಕುಮಾರ್ ಗೆ ಚೆನ್ನಮ್ಮ ಪ್ರಶಸ್ತಿ

ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕರಿಗೆ 'ವೀರರಾಣಿ ಕಿತ್ತೂರು ಚೆನ್ನಮ್ಮ' ಪ್ರಶಸ್ತಿ ನೀಡಲು ಸರಕಾರ ಮುಂದಾಗಿದೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜುಲೈ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಿ ಎಂ ನರೇಂದ್ರಸ್ವಾಮಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದಂದು ನೀಡುವುದು ಸಂಪ್ರದಾಯ. ಆದರೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಪ್ರಶಸ್ತಿಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು ಎಂದು ಹೇಳಿದರು.

ಏತನ್ಮಧ್ಯೆ 'ಕಿತ್ತೂರು ರಾಣಿ ಚೆನ್ನಮ್ಮ' ಪ್ರಶಸ್ತಿಯ ನಗದು ಬಹುಮಾನವನ್ನು ಅವಧಿ ಮುಗಿದ ಡಿಡಿ ರೂಪದಲ್ಲಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ನೀಡಿತ್ತು. ಈ ಘಟನೆಯಿಂದ ಕರ್ನಾಟಕ ಸರಕಾರಕ್ಕೆ ಮುಖಭಂಗವಾಗಿತ್ತು. ಪಾರ್ವತಮ್ಮ ಕಸಿವಿಸಿಗೊಂಡಿದ್ದರು. ಇದರಿಂದ ನೊಂದ ಪಾರ್ವತಮ್ಮ ಸರಕಾರ ನಡೆಸುವ ಯಾವುದೇ ಸಭೆ ಸಮಾರಂಭಗಳಿಗೆ ಇನ್ನು ಮುಂದೆ ತಾನು ಪಾಲ್ಗೊಳ್ಳುವುದಿಲ್ಲ ಎಂದು ಬೇಸರದಿಂದ ನುಡಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)
ಜುಲೈ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ರಾಜ್‌ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ.... (ಭಾಗ 3)

ನಿಮ್ಮ ರಾಜ್‌ ಬಂದಾಯ್ತು... ಉಳಿದದ್ದೇಲ್ಲಾ ಸರಕಾರಕ್ಕೆ ಬಿಟ್ಟಿದ್ದು 50 -60 ಜಾಗ ಬದಲಾಯಿಸಿದ್ದ: ಈ ಮೂರು ತಿಂಗಳ ಅವಧಿಯಲ್ಲಿ ವೀರಪ್ಪನ್‌ 50 -60 ಜಾಗ ಬದಲಾಯಿಸಿದ್ದ. ಅನುಕೂಲವಾದ ಕಡೆಗಳಲ್ಲೆಲ್ಲಾ 10 -12 ದಿನ ಇರುತ್ತಿದ್ವಿ. ದೇಹಾರೋಗ್ಯ ಕೆಟ್ಟಿತ್ತು. ಮಾನಸಿಕವಾಗಿ ದೈಹಿಕವಾಗಿ ತೊಂದರೆ ಆಯ್ತು. ನಮ್ಮ ಗೋವಿಂದು. ನನ್ನ ದೊಡ್ಡ ಮಗಳ ಯಜಮಾನ. ಆವನಿಗೆ ಹಾರ್ಟ್‌ ತೊಂದರೆ,.....
User Comments
ರಾಘವೇಂದ್ರ ರಾಜಕುಮಾರ್ 05 Jul 2009 03:32 pm
ಅಮ್ಮ.. ಪುನೀತ್ ನನ್ನ ಓದೆಯುತ್ತ ಇದ್ದಾನೆ... ಕಾಪಾಡು.. ಅವನಿಗೆ ದುಡ್ಡು ಬೇಕಂತೆ..
ರಾಘವೇಂದ್ರ ರಾಜ್ kumar 05 Jul 2009 04:34 pm
ಒದೆಸಿಕೋ, ನನ್ನ ಹೆಸರು ಹಾಕೊಂಡು ಬರೆಯೋ ನಿನಗೆ ಇನ್ನು ಒದಿಬೇಕು,
ಶಿವೂ 05 Jul 2009 10:27 am
ಈ ತರಲೆ ಗಳಿಗೆ ಸದಭಿರುಚಯ ಸಿನಿಮಾ ಅ೦ದ್ರೂ ಗೊತ್ತಿಲ್ಲ.....ಕನ್ನಡ ಚಿತ್ರರ೦ಗದಲ್ಲಿ ರಿಮೇಕ್ ಪರ೦ಪರೆ ತ೦ದು ಚಿತ್ರರ೦ಗವನ್ನು ಕುಲಗೆದಿಸಿದ ಅ ಸಾಹಸ ನಕಲಿ ಸಿ೦ಹನಿಗೆ ಡಾ. ಕೊಟ್ಟಿರಬೇಕಾದ್ರೆ...ಕನ್ನಡದಲ್ಲಿ ಅತಿ ಹೆಚ್ಚು ಕಾದಂಬರಿ ಆಧರಿಸಿದ ಚಿತ್ರ ನಿರ್ಮಿಸಿ ಪ್ರತಿಭಾವಂತ ನಟಿಯರಾದ ಮ೦ಜುಳ, ಜಯಮಾಲ, ಸುಧಾರಾಣಿ, ಮಾಲಾಶ್ರಿ ಯಾರನ್ನು ಕನ್ನಡಕ್ಕೆ ಕೊಟ್ಟ ಪಾರ್ವತಮ್ಮನಿಗೆ ....ಒ೦ದು ಹತ್ತು ಸಾವಿರದ ಪ್ರಶಸ್ತಿ ಕೊಟ್ಟರೂ ಹೊಟ್ಟೆ ಉರ್ಕೊಲ್ಲೋ ಜನ ಇದ್ದಾರಲ್ಲಪ್ಪ ನಮ್ಮ ಕರ್ನಾಟಕದಲ್ಲಿ...ಅದಕ್ಕೆ ನಮ್ಮ ರಾಜ್ಯ ಹೀಗೆ.
ಅಮೆರಿಕನ್ನಡಿಗ 05 Jul 2009 05:21 pm
ಹುಂ... ಜಯಮಾಲ, ಸಿದ್ದಲಿಂಗಯ್ಯ ಅವರ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಒಂದು ಸಣ್ಣ ಪಾರ್ಟ ಮೊದಲೇ ಮಾಡಿದ್ದರು, ಇವರನ್ನು ನಿಮ್ಮ ಪಾತಮ್ಮ ಮುಂದೆ ತರಲಿಲ್ಲ. ಇನ್ನು ಮಾಲಾಶ್ರೀ ಕನ್ನಡದವರೇ ಅಲ್ಲ. ತೆಲುಗಿನಿಂದ ಅಮದು ಮಾಡಿದ ನಟಿ ಆಕೆ. ಸುದಾರಣಿ ಹೌದು, ಡಾ.ರಾಜ್ ಬ್ಯಾನರ್ ನಿಂದ ಬಂದವರು. ಮಂಜುಳಾ ಬಗ್ಗೆ ಯಾಕೋ ಗ್ಯಾರಂಟೀ ಇಲ್ಲ. ಅವರು ಪ್ರಬಾತ್ ಕಲಾವಿದರೊಡನೆ ಇದ್ದದ್ದು ಗೊತ್ತು. ಆಮೇಲೆ ಮೊದಲು ಯಾರು ಸಿನೆಮಾಗೆ ಪರಿಚಮಾದಿದರೋ ಗೊತ್ತಿಲ್ಲ. ಆದರೆ ರಾಜಣ್ಣನ ಸಿನೆಮಾಗಳಿಗೆ ಅವರ ಅಣ್ಣ ವರದಣ್ಣ ಹಾಗು ಇನ್ನು ಹಲವಾರು ಎಲೆ ಮರೆ ಕಾಯಿಗಳು ಸಹಾಯ ಮಾಡಿದ್ದಾರೆ. ನಮ್ಮ ಪಾತಮ್ಮನಿಂಗೆ ಮಾತ್ರ ಪ್ರಶಸ್ತಿ ಕೊಟ್ಟರೆ ಹೇಗೆ?
ಶಿವೂ 06 Jul 2009 07:46 am
ಅಣ್ಣ ಸಣ್ಣ ಪಾರ್ಟ ಮಾಡಿದವರಿಗೆಲ್ಲ ನಾಯಕಿಯಾಗುವ ಸೌಭಾಗ್ಯ ಸಿಗಲ್ಲ.....ಮ೦ಜುಳಾ ಕೂಡ ಮೂರೂವರೆ ವಜ್ರಗಳು ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು ಅವರನ್ನು ಪೂರ್ಣ ಪ್ರಮಾಣದ ನಾಯಕಿಯನ್ನಾಗಿ ಮಾಡಿದ್ದೆ ಪಾರ್ವತಮ್ಮ . ಮಾಲಾಶ್ರಿ ಮಾತ್ರಭಾಷೆ ತೆಲ ಗಿರಬಹುದು ಆದರೆ ಈಗಾಕೆ ಕನ್ನಡದವಳೇ. ರಕ್ಷಿತ ಅಮ್ಮ ಮಮತಾರಾವ್ , ಮತ್ತು ರಕ್ಷಿತ ಇಬ್ಬರು ಚಿತ್ರರ೦ಗಕ್ಕೆ ಬ೦ದಿದ್ದು ಇ ಅಮ್ಮನ ಕ್ರಪೆಯಿ೦ದಲೇ . ರಮ್ಯ, ಅನುಪ್ರಭಾಕರ್, ಇವರನ್ನು ಮರ್ತೆ ಬಿಟ್ಟಿದ್ದೆ.
ವಸಿಷ್ಠ 06 Jul 2009 02:11 pm
ರಾಜಣ್ಣನ ಜೊತೆ ಇದ್ದ ಚಿ. ಉದಯಶಂಕರ್, ವರದನ್ನನಿಗೆ ಪಾತಮ್ಮನ ಜೊತೆನೆ ಅವಾರ್ಡ್ ಕೊಡಬೇಕಾದರೆ ನೀವೇ ಸ್ವರ್ಗಕ್ಕೆ ಹೋಗಿ ಕೊಡಬೇಕು ಅಮೆರಿಕನ್ನಡಿಗ.
ಕನ್ನಡಿಗ 06 Jul 2009 01:27 am
ರಮ್ಯ, ರಕ್ಷಿತ, ಅನು ಪ್ರಬಾಕರ್ ಎವರೆನ್ನೆಲ್ಲ ನಿಮ್ಮ ಅಮ್ಮ ಪರಿಚಯಿಸಿಧ್ರ. ನಿರ್ಧೆಶೆಕ ಮಹೇಶ್ ಬಾಬು,
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article