•  

ಕನ್ನಡಕ್ಕೆ ಮನಿಷಾ ಕೋಯಿರಾಲ, ಟುಲಿಪ್ ಜೋಷಿ!

ಪ್ರತಾಪ್ ಗೌಡ ಅವರ 'ಮಾಣಿಕ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವು ಬಾಲಿವುಡ್ ತಾರೆಗಳ ಆಗಮನವಾಗುತ್ತಿದೆ. ಬಾಲಿವುಡ್ ತಾರೆಗಳಾದ ಮನಿಷಾ ಕೋಯಿರಾಲ, ಮಿಥುನ್ ಚಕ್ರವರ್ತಿ ಮತ್ತು ಟುಲಿಪ್ ಜೋಷಿ ಕನ್ನಡ ಚಿತ್ರದಲ್ಲಿ ನಟಿಸಲು ಅಂಗೀಕರಿಸಿದ್ದಾರಂತೆ.

ಕನ್ನಡದಲ್ಲಿ ಅತಿಥಿ ಪಾತ್ರ, ಐಟಂ ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದರು ಬಾಲಿವುಡ್ ತಾರೆಗಳು. ಆದರೆ 'ಮಾಣಿಕ್ಯ' ಚಿತ್ರದ ಮೂಲಕ ಬಾಲಿವುಡ್ ತಾರೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ನಿರ್ದೇಶಕ ಪ್ರತಾಪ್ ಗೌಡ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ!

ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಟುಲಿಪ್ ಜೋಷಿ ನಟಿಸಲಿದ್ದಾರೆ. ಖಳ ನಟನಾಗಿ ನಟಿಸಲು ಮಿಥುನ್ ಚಕ್ರವರ್ತಿ ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಪ್ರಮುಖ ಪಾತ್ರದಲ್ಲಿ ಮನಿಷಾಕೋಯಿರಾಲ ಸಹ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಮಾಣಿಕ್ಯ ಚಿತ್ರತಂಡ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ.

ಚಿತ್ರದಲ್ಲಿ ದೊಡ್ಡ ನಟರ ದಂಡೇ ಇದೆ. ಇದಕ್ಕಿಂತಲೂ ನಾನೇನು ಹೆಚ್ಚಿಗೆ ವಿವರ ನೀಡಲು ಸಾಧ್ಯವಿಲ್ಲ. ಕಾರಣ ನಮ್ಮ ನಿರ್ದೇಶಕ ಪ್ರತಾಪ್ ಗೌಡರು ಪ್ರೇಕ್ಷಕರನ್ನು ಚಕಿತಗೊಳಿಸಬೇಕೆಂದಿದ್ದಾರೆ ಎಂದಿದ್ದಾರೆ ಎನ್ನುತ್ತಾರೆ ಚಿತ್ರದ ನಾಯಕ ನಟ ಜೀವನ್ ಗೌಡ.ಅಂದಹಾಗೆ ಮಾಣಿಕ್ಯ ಚಿತ್ರ ಜುಲೈತಿಂಗಳಲ್ಲಿ ಸೆಟ್ಟೇರಲಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಜೂನ್ 25, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಕನ್ನಡದ 'ಮಾಣಿಕ್ಯ' ಚಿತ್ರಕ್ಕೆ ಆಶಾ ಭೋಂಸ್ಲೆ ಹಾಡು!

ಕನ್ನಡಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ನ ಪಂಚಭಾಷಾ ಚಿತ್ರವೊಂದನ್ನು ನಿರ್ದೇಶಕ ಪ್ರತಾಪ್ ಗೌಡ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಉದ್ಯಾನ್ ಎಕ್ಸ್ ಪ್ರೆಸ್'. ಚಿತ್ರದಲ್ಲಿ ನಾಲ್ಕು ಮಂದಿ ಕನ್ನಡ ತಾರೆಗಳು, ಇಬ್ಬರು ಬಾಲಿವುಡ್ ನಟಿಯರು ಸೇರಿದಂತೆ ಮೂವರು ಹೊಸಬರನ್ನು ಪರಿಚಯಿಸಲಿದ್ದಾರೆ. ಪ್ರಚಿ ದೇಸಾಯಿ ಮತ್ತು ಗರಂ ಮಸಾಲಾ ಖ್ಯಾತಿಯ ನರ್ಗಿಸ್ ಈಗಾಗಲೇ ಉದಯನ್ ಎಕ್ಸ್ ಪ್ರೆಸ್ ಗೆ ಸಹಿ.....
User Comments
ಹ ಹಾ 29 Jun 2009 03:54 pm
ಅಂತು ಇಂತೂ ಮುದುಕಿಯರನ್ನೆಲ heroine ನಮ್ಮ directorgu ಬುದ್ಡಿಯಲ ನೋಡುರ್ಗು ಬುದ್ದಿಯಿಲ್ಲ ಅಲ್ಲ ಅವರು graph rate ಇದ್ದಾಗ ಮೂಸಿ ನೋಡಲಿಲ್ಲ ಈಗ ಎಲ್ಲ ಅದಮೇಲೆ ಕನ್ನಡವೇ ಗತಿ ಅಂತಿದಾರೆ
ತರ್ಲೆ ತಿಮ್ಮ 26 Jun 2009 10:04 am
ಈ ಮೂರು ಬಿಟ್ಟ ಹೆಂಗಸ್ಸನು ಮಾಣಿಕ್ಯ ಅಂತ ಹೇಳ್ತಿರಲ್ಲ ದಟ್ಸ್ ಕನ್ನಡ ... ಬರೆಯುವುದಕ್ಕೆ ಮುಂಚೆ ಸ್ವಲ್ಪ ಯೋಚಿಸಿ.
ಶಿವ 26 Jun 2009 12:57 pm
ಅದಕ್ಕೇ ಆ ಪದವನ್ನು ಇನ್ವರ್ಟೆಡ್ ಕಾಮಾದಲ್ಲಿ ಹಾಕಿದ್ದು. ಅದರರ್ಥ ಅವರು ಮಾಣಿಕ್ಯ ಅಲ್ಲ ಅಂತ ಅರ್ಥ. ಪತ್ರಿಕೋದ್ಯಮದ ಪರಿಭಾಷೆಯಲ್ಲಿ 'ಬುದ್ಧಿವಂತ' ಅಂತ ಬರಿದ್ರೆ ಆತ ದಡ್ಡ ಅಂತ ಅರ್ಥ.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article